ವಿಚಾರಣೆಯೋ, ವಿಶ್ರಾಂತಿಯೊ? ಕೃಷ್ಣಮೃಗ ಕೇಸ್​ನಲ್ಲಿ ಸಲ್ಮಾನ್ ವಿಚಾರಣೆ ನಡೆದ 26 ವರ್ಷಗಳ ಹಿಂದಿನ ವಿಡಿಯೋ ವೈರಲ್​!

Published : Jan 17, 2025, 01:29 PM ISTUpdated : Jan 17, 2025, 01:33 PM IST
ವಿಚಾರಣೆಯೋ, ವಿಶ್ರಾಂತಿಯೊ? ಕೃಷ್ಣಮೃಗ  ಕೇಸ್​ನಲ್ಲಿ ಸಲ್ಮಾನ್ ವಿಚಾರಣೆ ನಡೆದ 26 ವರ್ಷಗಳ ಹಿಂದಿನ ವಿಡಿಯೋ ವೈರಲ್​!

ಸಾರಾಂಶ

ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಕ್ಷಮೆ ಕೋರದ ಸಲ್ಮಾನ್ ಖಾನ್‌ಗೆ ಬಿಷ್ಣೋಯಿ ಸಮುದಾಯದಿಂದ ನಿರಂತರ ಬೆದರಿಕೆ ಎದುರಾಗಿದೆ. ಕ್ಷಮೆಯಾಚಿಸದಿದ್ದರೆ ಪರಿಣಾಮ ಎದುರಿಸಲು ಸಿದ್ಧರಿರಿ ಎಂದು ಗ್ಯಾಂಗ್ ಎಚ್ಚರಿಸಿದೆ. ಸಲ್ಮಾನ್ ಭದ್ರತೆ ಹೆಚ್ಚಿಸಿಕೊಂಡಿದ್ದು, ಬುಲೆಟ್‌ಪ್ರೂಫ್ ಕಾರು ಖರೀದಿಸಿದ್ದಾರೆ. ಸರ್ಕಾರದಿಂದಲೂ ವೈ ಪ್ಲಸ್ ಭದ್ರತೆ ಒದಗಿಸಲಾಗಿದೆ. ಇದೀಗ ಅವರನ್ನು ವಿಚಾರಣೆಗೆ ಒಳಪಡಿಸುತ್ತಿದ್ದ 26 ವರ್ಷಗಳ ಹಳೆಯ ವಿಡಿಯೋ ವೈರಲ್​ ಆಗಿದೆ

ಬಿಷ್ಣೋಯಿ ಸಮುದಾಯದವರು ದೇವರು ಎಂದೇ ನಂಬುತ್ತಿರುವ ಕೃಷ್ಣಮೃಗವನ್ನು ಕೊಂದಿರುವ ಆರೋಪ ಹೊತ್ತ ಹಾಗೂ  ಆ ಬಗ್ಗೆ ಇದುವರೆಗೆ ಕ್ಷಮೆ ಕೋರದ ನಟ ಸಲ್ಮಾನ್​ ಖಾನ್​ಗೆ​ ಈಗ ಹೆಜ್ಜೆ ಹೆಜ್ಜೆಗೂ ಮೃತ್ಯುಭಯ  ಆವರಿಸುತ್ತಿದೆ. ಇದಾಗಲೇ ಹಲವಾರು ಬಾರಿ ಲಾರೆನ್ಸ್​ ಬಿಷ್ಣೋಯಿ ಸಮುದಾಯದವರು ನಟನಿಗೆ ಇಟ್ಟಿದ್ದ ಬೇಡಿಕೆ ಒಂದೇ. ಅದು ಅಂದು ಕೃಷ್ಣಮೃಗ ಕೊಂದ ತಪ್ಪಿಗೆ ಕ್ಷಮೆ ಕೋರಬೇಕು ಎನ್ನುವುದು. ದಶಕ ಕಳೆದರೂ ಇದುವರೆಗೂ ಸಲ್ಮಾನ್​ ಖಾನ್​ ಕ್ಷಮೆ ಕೋರಲಿಲ್ಲ. ಈ ಕ್ಷಮೆ ಎನ್ನುವ ಮಾತು ಹಂತ ಹಂತವಾಗಿ ಬೆಳೆಯುತ್ತಾ ಇಂದು ಸಲ್ಮಾನ್ ಖಾನ್​ ಆಪ್ತರು ಎನಿಸಿಕೊಂಡವರ ಜೀವಕ್ಕೆ ಮುಳ್ಳಾಗುತ್ತಿದೆ. ಇದಾಗಲೇ ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕಿ ಅವರ ಹತ್ಯೆ ಮಾಡಿರುವ ಬಿಷ್ಣೋಯಿ ಗ್ಯಾಂಗ್​ನವರು, ಇದಕ್ಕೆ ಕಾರಣ ಕೂಡ ಸಲ್ಮಾನ್​ ಖಾನ್​ ಎಂದಿದ್ದಾರೆ. ಸಲ್ಮಾನ್​ ನಿಕಟವರ್ತಿಗಳಿಗೆ ಇದೇ ಶಿಕ್ಷೆಯಾಗುತ್ತದೆ ಎಂದೂ ಹೇಳಿದ್ದಾರೆ. ಇಷ್ಟು ಆಗುತ್ತಿದ್ದಂತೆಯೇ ಸೋಷಿಯಲ್​ ಮೀಡಿಯಾದಲ್ಲಿ ಕ್ಷಮೆ ಕೋರುವಂತೆ ಸಲ್ಮಾನ್​ ಖಾನ್​ಗೆ ಒತ್ತಡ ಹೆಚ್ಚಾಗುತ್ತಿದೆ. ಆದರೆ ಜಪ್ಪಯ್ಯ ಎಂದರೂ ಅದು ಸಾಧ್ಯವಿಲ್ಲ ಎನ್ನುವಂತೆ ನಟ ನಡೆದುಕೊಳ್ಳುತ್ತಿರುವ ಕಾರಣ, ಹಲವರ ಅಸಮಾಧಾನಕ್ಕೆ ಇದು ಕಾರಣವಾಗಿದೆ. 


ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಸಲ್ಮಾನ್ ಖಾನ್ ಅವರ ಭವಿಷ್ಯವನ್ನು ಯಾವುದೇ ನ್ಯಾಯಾಲಯ ನಿರ್ಧರಿಸುವುದಿಲ್ಲ ಎಂದು ಲಾರೆನ್ಸ್ ಬಿಷ್ಣೋಯ್ ಇದಾಗಲೇ ಹೇಳಿದ್ದಾನೆ.  ಪೊಲೀಸರ ಮುಂದೆ ನೀಡಿದ ಹೇಳಿಕೆಯಲ್ಲಿ, ಸಲ್ಮಾನ್ ಖಾನ್ ಮತ್ತು ಅವರ ತಂದೆ ಸಲೀಂ ಖಾನ್ ಈ ವಿಷಯದಲ್ಲಿ ಸಾರ್ವಜನಿಕವಾಗಿ ಕ್ಷಮೆಯಾಚಿಸಿದರೆ (Apology) ತಮ್ಮ ಮನಸ್ಸು ಕೂಡ ಬದಲಾಗಬಹುದು ಎಂದು ಲಾರೆನ್ಸ್ ಬಿಷ್ಣೋಯ್ ಈ ಹಿಂದೆ ಹೇಳಿದ್ದ. ಇದರ ಹೊರತಾಗಿಯೂ ಸಲ್ಮಾನ್​ ಖಾನ್​ ಕ್ಷಮೆ ಕೋರಿಲ್ಲ ಎನ್ನುವುದು ಅವರಿಗೆ ಇರುವ ಆಕ್ರೋಶ. ಕ್ಷಮೆ ಕೋರದೇ ಹೋದರೆ  ಪರಿಣಾಮ ಎದುರಿಸಲು ಸಿದ್ಧ ಇರಿ ಎಂದು ಗ್ಯಾಂಗ್​ ಎಚ್ಚರಿಕೆ ನೀಡುತ್ತಲೇ ಇದೆ.  ಕ್ಷಮೆ ಕೋರದ ಸಲ್ಮಾನ್ ಅವರ ಅಹಂಕಾರವನ್ನು ಮುರಿಯುತ್ತೇವೆ ಎಂದಿದ್ದಾನೆ. ಇದರ ಬೆನ್ನಲ್ಲೇ ಕೊಲೆ ಬೆದರಿಕೆ, ಗುಂಡಿನ ದಾಳಿ ನಡೆಯುತ್ತಿದೆ. 

ಕೃಷ್ಣಮೃಗ ಕೊಂದೇ ಇಲ್ಲ ಅಂತಿರೋ ಸಲ್ಮಾನ್‌, ಹಳೆಯ ವಿಡಿಯೋದಲ್ಲಿ ಹೇಳಿದ್ದೇನು? ನೆಟ್ಟಿಗರಿಂದ ಕ್ಲಾಸ್‌

ಇದೀಗ 26 ವರ್ಷಗಳ ಹಿಂದೆ ಸಲ್ಮಾನ್​ ಖಾನ್​ರನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಿಚಾರಣೆ ನಡೆಸುತ್ತಿರುವ ವಿಡಿಯೋ ಒಂದು ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಈ ಕೇಸ್​ನಲ್ಲಿ ಐದು ದಿನಗಳ ಜೈಲಿನಲ್ಲಿದ್ದ ಸಲ್ಮಾನ್​ಗೆ ಕೋರ್ಟ್​ ಜಾಮೀನು ಮಂಜೂರು ಮಾಡಿತ್ತು. ಆ ಸಮಯದಲ್ಲಿ ನಡೆದ ವಿಚಾರಣೆ ಇದಾಗಿದೆ ಎಂದು ಹೇಳಲಾಗುತ್ತಿದೆ. ಕೃಷ್ಣಮೃಗ ಕೇಸ್​ಗೆ ಸಂಬಂಧಿಸಿದಂತೆ ಸಲ್ಮಾನ್​ ಖಾನ್​ರನ್ನು ವಿಚಾರಣೆ ನಡೆಸುವುದನ್ನು ಈ ವಿಡಿಯೋದಲ್ಲಿ ನೋಡಬಹುದಾಗಿದೆ. ಆದರೆ, ಏನೂ ಆಗದವರ ರೀತಿಯಲ್ಲಿ ತಮ್ಮ ಎಂದಿನ ಸ್ಟೈಲ್​ನಲ್ಲಿಯೇ ಸಲ್ಮಾನ್​, ವಿಶ್ರಾಂತಿ ಪಡೆಯುತ್ತಿರುವುದನ್ನು ನೋಡಬಹುದು! ಆದ್ದರಿಂದ ಇದು ವಿಚಾರಣೆಯೊ, ವಿಶ್ರಾಂತಿಯೋ ಎಂದು ನೆಟ್ಟಿಗರು ಪ್ರಶ್ನಿಸುವಂತಾಗಿದೆ. 

ಇದಾಗಲೇ, ಸಲ್ಮಾನ್​ ಖಾನ್​ ತಮ್ಮ ಸೆಕ್ಯುರಿಟಿಯನ್ನು ಇನ್ನಷ್ಟು ಭದ್ರಪಡಿಸಿಕೊಂಡಿದ್ದಾರೆ.  ಮತ್ತಷ್ಟು ಸೆಕ್ಯುರಿಟಿಗಾಗಿ ಎರಡು ಕೋಟಿ ರೂಪಾಯಿ ಮೌಲ್ಯದ ಮತ್ತೊಂದು ಬುಲೆಟ್​ಪ್ರೂಫ್​ ಕಾರನ್ನು ಈಚೆಗೆ ಖರೀದಿಸಿದ್ದಾರೆ. ಇವರ ಭದ್ರತೆಗೋಸ್ಕರ ಸರ್ಕಾರ ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತಿದೆ.  ಬಾಬಾ ಸಿದ್ದಿಕಿ ಹತ್ಯೆಯ ಬಳಿಕ ಇದಾಗಲೇ ನಟನ  ಭದ್ರತೆ ಹೆಚ್ಚಿಸಲಾಗಿದೆ. ಸರ್ಕಾರದಿಂದಲೇ  ವೈ ಪ್ಲಸ್ ಭದ್ರತೆ ನೀಡಲಾಗಿದೆ.    ಸದ್ಯ ಸಲ್ಮಾನ್​ಗೆ ಮಹಾರಾಷ್ಟ್ರ ಸರ್ಕಾರ ನೀಡಿರೋ ವೈ ಪ್ಲಸ್ ಸೆಕ್ಯೂರಿಟಿ 25 ಭದ್ರತಾ ಸಿಬ್ಬಂದಿಯನ್ನು ಒಳಗೊಂಡಿದೆ. ಇದರಲ್ಲಿ  4 ಜನ ಎನ್.ಎಸ್​.ಜಿ ಕಮಾಂಡೋಸ್ ಇದ್ದು,  ಅತ್ಯಾಧುನಿಕ ರೈಫಲ್ ಹೊಂದಿರೋ ಇವರು ಅದೆಂಥಾ ಅಟ್ಯಾಕ್ ನಡೆದರೂ ಎದುರಿಸಿ, ರಕ್ಷಿಸಬಲ್ಲ ನಿಪುಣರು ಇದ್ದಾರೆ.  

ಕಂಗನಾ ಮದ್ವೆ ಯಾವಾಗ? ಸಂಸದ ಚಿರಾಗ್‌ ಪಾಸ್ವಾನ್‌ ಜೊತೆ ಏನು ನಡೀತಿದೆ? ಬಾಯ್ಬಿಟ್ಟ ನಟಿ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಆ ಹಾಡು ಹಾಡಲಾಗದೆ ಗಳಗಳನೆ ಅತ್ತ ಗಾಯಕಿ ಎಸ್.ಜಾನಕಿ: ರೆಕಾರ್ಡಿಂಗ್ ನಿಲ್ಲಿಸಿದ ಇಳಯರಾಜ!
ಮದುವೆಗೂ ಮುನ್ನ ಮಗು: ಮಗಳು ದಿವ್ಯಾ ಹೇಳಿಕೆಗೆ 'ಕಟ್ಟಪ್ಪ' ಸತ್ಯರಾಜ್ ರಿಯಾಕ್ಷನ್ ವೈರಲ್?