ರೈತ ಪ್ರತಿ​ಭ​ಟನೆ ಆಂತ​ರಿಕ ವಿಚಾ​ರ: ಚರ್ಚೆಗೂ ಮುನ್ನ ಬ್ರಿಟನ್‌ ಸರ್ಕಾ​ರ ಸೈಲೆಂಟ್!

Published : Mar 06, 2021, 04:12 PM IST
ರೈತ ಪ್ರತಿ​ಭ​ಟನೆ ಆಂತ​ರಿಕ ವಿಚಾ​ರ: ಚರ್ಚೆಗೂ ಮುನ್ನ ಬ್ರಿಟನ್‌ ಸರ್ಕಾ​ರ ಸೈಲೆಂಟ್!

ಸಾರಾಂಶ

ಕೃಷಿ ಕಾಯ್ದೆ​ ವಿರೋಧಿಸಿ ರೈತ ಸಂಘಟನೆಗಳು ನಡೆಸುತ್ತಿರುವ ಪ್ರತಿಭಟನೆ|  ಪ್ರತಿಭಟನೆ ಕುರಿತು ಬ್ರಿಟನ್‌ ಸಂಸತ್‌ನಲ್ಲಿ ಸೋಮವಾರ ಚರ್ಚೆ| ಚರ್ಚೆಗೂ ಮುನ್ನ ಬ್ರಿಟನ್‌ ಸರ್ಕಾ​ರ ಸೈಲೆಂಟ್!

ನವ​ದೆ​ಹ​ಲಿ(ಮಾ.06): ಕೃಷಿ ಕಾಯ್ದೆ​ ವಿರೋಧಿಸಿ ರೈತ ಸಂಘಟನೆಗಳು ನಡೆಸುತ್ತಿರುವ ಪ್ರತಿಭಟನೆ ಕುರಿತು ಬ್ರಿಟನ್‌ ಸಂಸತ್‌ನಲ್ಲಿ ಸೋಮವಾರ ಚರ್ಚೆ ನಿಗದಿಯಾಗಿರುವ ಬೆನ್ನಲ್ಲೇ, ಈ ವಿಷಯ ರಾಜತಾಂತ್ರಿಕ ಬಿಕ್ಕಟ್ಟಿಗೆ ಕಾರಣವಾಗದಂತೆ ನೋಡಿಕೊಳ್ಳಲು ಬ್ರಿಟನ್‌ ಸರ್ಕಾರ ಮುಂದಾಗಿದೆ.

ಈ ಕುರಿತು ಹೇಳಿಕೆಯೊಂದನ್ನು ನೀಡಿರುವ ಬ್ರಿಟನ ಸರ್ಕಾರ, ‘ಭಾರ​ತ​ದಲ್ಲಿನ ರೈತರ ಪ್ರತಿ​ಭ​ಟ​ನೆ ಆ ದೇಶದ ಆಂತ​ರಿಕ ವಿಚಾ​ರ​. ಅದನ್ನು ಅವರೇ ಸರ​ಪ​ಡಿ​ಸಿ​ಕೊ​ಳ್ಳು​ತ್ತಾರೆ’ ಎಂದು ಹೇಳಿದೆ. ಆದಾಗ್ಯೂ, ಬ್ರಿಟ​ನ್‌​ನಲ್ಲೂ ಭಾರ​ತೀಯ ಸಂಜಾ​ತರು ಇರುವ ಕಾರಣ ಭಾರ​ತದ ರೈತರ ಪ್ರತಿ​ಭ​ಟ​ನೆಯು ಬ್ರಿಟ​ನ್‌​ನಲ್ಲೂ ಪ್ರತಿ​ಧ್ವ​ನಿ​ಸು​ತ್ತಿದೆ.

ಈ ಹಿನ್ನೆ​ಲೆ​ಯಲ್ಲಿ ಈ ಬಗ್ಗೆ ಚರ್ಚೆ ಕೈಗೆ​ತ್ತಿ​ಕೊ​ಳ್ಳ​ಲಾ​ಗು​ತ್ತದೆ ಎಂದು ಬ್ರಿಟನ್‌ ಸರ್ಕಾರ ತಿಳಿ​ಸಿದೆ. ಭಾರ​ತ​ದಲ್ಲಿ ಪತ್ರಿಕಾ ಸ್ವಾತಂತ್ರ್ಯ ಮತ್ತು ಪ್ರತಿ​ಭ​ಟ​ನಾ​ಕಾ​ರರ ಸುರ​ಕ್ಷತೆ ಕುರಿ​ತಾಗಿ ಚರ್ಚೆ ನಡೆ​ಸ​ಬೇಕೆಂಬ ಇ-ಅರ್ಜಿ​ಗಳು 1 ಲಕ್ಷ ಪೂರೈ​ಸಿದ್ದು, ಈ ಬಗ್ಗೆ ಸೋಮ​ವಾರ ಚರ್ಚೆ ನಡೆ​ಯ​ಲಿದೆ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಮದುವೆಯಾದ್ಮೇಲೆ ನಟನೆ ಬಿಟ್ಟಿದ್ದೆ; ಪತಿ ಬೆಂಬಲಕ್ಕೆ ಕೊನೆಗೂ ಮಣಿದೆ: Nandagokula Serial ಪ್ರಿಯಾ Interview
ನಿಮ್ಮನ್ನು ನೋಡಿದ್ರೆ ಸಿಟ್ಟು ಬರುತ್ತೆ, ಪ್ರಿಯಾ ಪಾತ್ರ ಮಾಡ್ಬೇಡಿ ಅಂದ್ರು: Nanda Gokula Serial ಅರ್ಪಿತಾ ಗೌಡ