
ನವದೆಹಲಿ(ಸೆ.26): ಎಟಿಎಂನಲ್ಲಿ ಡ್ರಾ ಮಾಡಿದ ಹಣ ಬರದಿದ್ದರೆ ಗ್ರಾಹಕರಿಗೆ ಪರಿಹಾರವಾಗಿ ದಿನಕ್ಕೆ 100 ರೂ. ಕೊಡಲು ಎಲ್ಲ ಬ್ಯಾಂಕ್’ಗಳಿಗೆ RBI ಆದೇಶ ನೀಡಿದೆ.
ಖಾತೆಯಿಂದ ಹಣ ಕಡಿತವಾಗಿದ್ದರೂ ಎಟಿಎಂನಲ್ಲಿ ಹಣ ಸಿಗದಿದ್ದಾಗ, ಪರಿಹಾರವಾಗಿ ಗ್ರಾಹಕರಿಗೆ ದಿನಕ್ಕೆ 100 ರೂ. ನೀಡಬೇಕು ಎಂದು RBI ಎಲ್ಲ ಬ್ಯಾಂಕ್’ಗಳಿಗೆ ನಿರ್ದೇಶನ ನೀಡಿದೆ.
ಎಟಿಎಂನಲ್ಲಿ ಹಣ ಬರದಿದ್ದರೆ ಕೂಡಲೇ ಸಂಬಂಧಪಟ್ಟ ಬ್ಯಾಂಕ್’ಗೆ ತೆರಳಿ ಲಿಖಿತ ರೂಪದಲ್ಲಿ ದೂರು ನೀಡಬೇಕು. ದೂರು ತೆಗೆದುಕೊಂಡ ಬ್ಯಾಂಕ್ ಟರ್ನ್ ಅರೌಂಡ್ ಟೈಮ್ 5 ದಿನಗಳ ವಿನಾಯಿತಿಯೊಂದಿಗೆ ಆರು ದಿನಗಳ ಒಳಗೆ ದೂರುದಾರರ ಖಾತೆಗೆ ಹಣ ವರ್ಗಾಯಿಸಬೇಕು ಎಂಬುದು ನಿಯಮವಾಗಿದೆ.
ಒಂದು ವೇಳೆ ಬ್ಯಾಂಕ್ ನಿಗದಿತ ಸಮಯಕ್ಕಿಂತ ವಿಳಂಬ ಮಾಡಿದರೆ ಪರಿಹಾರ ಮೊತ್ತವಾಗಿ ದಿನಕ್ಕೆ 100 ರೂ. ನೀಡಬೇಕು ಎಂದು RBI ಸೂಚಿಸಿದೆ.
ಒಂದು ವೇಳೆ ಬ್ಯಾಂಕ್’ಗಳು ಪರಿಹಾರ ಮೊತ್ತ ನೀಡಲು ವಿಫಲವಾದರೇ ಗ್ರಾಹಕರು RBIನ ಬ್ಯಾಂಕಿಂಗ್ ಓಂಬುಡ್ಸ್’ಮನ್’ಗೆ ದೂರು ನೀಡಬಹುದು ಎಂದು RBI ಸ್ಪಷ್ಟಪಡಿಸಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಓದಿರಿ.