Karnataka Budget 2019: ಯಾವ ಜಿಲ್ಲೆಗೆ ಸಿಕ್ಕಿದ್ದೆಷ್ಟು?

By Web DeskFirst Published Feb 8, 2019, 3:26 PM IST
Highlights

ಕಳೆದ ಬಜೆಟ್‌ನಲ್ಲಿ ಹಾಸನ, ಮಂಡ್ಯ ಹಾಗೂ ರಾಮನಗರ ಜಿಲ್ಲೆಗಳನ್ನು ಮಾತ್ರ ಗಮನದಲ್ಲಿಟ್ಟುಕೊಂಡು, ಹಲವು ಯೋಜನೆಗಳನ್ನು ರೂಪಿಸಿದ್ದ ಕುಮಾರಸ್ವಾಮಿ ಈ ಬಾರಿ ಪ್ರತಿಯೊಂದೂ ಜಿಲ್ಲೆಗೂ ಅನುದಾನ ನೀಡಲು ಯತ್ನಿಸಿದ್ದಾರೆ. ಆದರೆ, ಕೆಲವು ಜಿಲ್ಲೆಗಳಿಗೆ ನೀಡಿರುವ ಅನುದಾನ ಕಡಿಮೆಯೇ ಎನ್ನುವ ಮಾತುಗಳ ಕೇಳಿ ಬರುತ್ತಿದೆ.

ಬೆಂಗಳೂರು: ಕೇವಲ ರಾಮನಗರ, ಮಂಡ್ಯ ಹಾಗೂ ಹಾಸನ ಜಿಲ್ಲೆಗೆ ಸೀಮಿತವಾದ ಬಜೆಟ್ ಎಂಬ ಅಪವಾದದಿಂದ ಹೊರಬರಲು ಯತ್ನಿಸಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಪ್ರತಿಯೊಂದೂ ಜಿಲ್ಲೆಗೂ ಒಂದಲ್ಲ ಒಂದು ಅನುದಾನ ನೀಡಿದ್ದಾರೆ. ಯಾವ ಜಿಲ್ಲೆಗೆ ಸಿಕ್ಕ ಅನುದಾನವೆಷ್ಟು? ಯಾವ ಯೋಜನೆಗೆ? ಇಲ್ಲಿದೆ ಮಾಹಿತಿ....

ರಾಮನಗರ 
- ಚನ್ನಪಟ್ಟಣದ ಸಿಲ್ಕ್ ಇಂಡಸ್ಟ್ರ್ಟೀಸ್ ಪುನಶ್ಚೇತನ - 10 ಕೋಟಿ ಅನುದಾನ 
- ರೇಷ್ಮೆ ಘಟಕ ಬಲವರ್ಧನೆ - 5 ಕೋಟಿ ರೂ. 
- ಮಾವು ಸಂಸ್ಕರಣಾ ಘಟಕ - 10 ಕೋಟಿ ರೂ.
-  ಸಿದ್ಧಗಂಗಾಶ್ರೀಗಳ ಹುಟ್ಟೂರು ವೀರಾಪುರದಲ್ಲಿ ಪಾರಂಪರಿಕ ಕೇಂದ್ರ - 25 ಕೋಟಿ ರೂ.

ಹಾಸನ 
-  ಹೊಳೆನರಸೀಪುರದಲ್ಲಿ ಕೆರೆ ತುಂಬಿಸುವ ಯೋಜನೆ - 50 ಕೋಟಿ ರೂ. 
- ವಿಮಾನ ನಿಲ್ದಾಣ - 
ಹಾಸನ - ಅರಸೀಕೆರೆಯಲ್ಲಿ ಉಪ ಕಾರಾಗೃಹ - 30 ಕೋಟಿ ರೂ.

ಮಂಡ್ಯ 
- ಇಸ್ರೇಲ್ ಮಾದರಿ ಕೃಷಿ ಪ್ರಾತ್ಯಕ್ಷಿಕೆ ಕೇಂದ್ರ - 10 ಕೋಟಿ ರೂ. 
- ಮೇಲುಕೋಟೆ ಸಮಗ್ರ ಅಭಿವೃದ್ಧಿ - 5 ಕೋಟಿ ರೂ.
-  ಮೈಸೂರು​ ಶುಗರ್​ ಕಾರ್ಖಾನೆ - 100 ಕೋಟಿ ರೂ.
- ಸಮಗ್ರ ಕೈಗಾರಿಕಾ ಅಭಿವೃದ್ಧಿ - 50 ಕೋಟಿ ರೂ.

ಬೆಂಗಳೂರು 
-  117 ತ್ಯಾಜ್ಯ ನೀರು ಸಂಸ್ಕರಣಾ ಘಟಕ - 8015 ಕೋಟಿ ರೂ. 
- ವಿಮಾನ ನಿಲ್ದಾಣ ಮಾರ್ಗ ನಿರ್ಮಾಣ - 16, 579 ಕೋಟಿ ರೂ.
- ದೊಡ್ಡಬಿದರಕಲ್ಲಿನಲ್ಲಿ ಕಲಾ ಗ್ರಾಮ - 10 ಕೋಟಿ ರೂ.
- ಹಲಸೂರಿನ ಗುರುದ್ವಾರಕ್ಕೆ 25 ಕೋಟಿ ರೂ.
- ಸಂವಿಧಾನ ಮ್ಯೂಸಿಯಂ ಸ್ಥಾಪನೆ - 20 ಕೋಟಿ ರೂ. 
- ಎಲಿವೇಟೆಡ್​ ಕಾರಿಡಾರ್ ಯೋಜನೆ - 1 ಸಾವಿರ ಕೋಟಿ ರೂ.

ರಾಜ್ಯ ರಾಜಧಾನಿಗೆ ಮತ್ತೇನು ಸಿಕ್ಕಿದೆ?

ಬೀದರ್
 - ನಾಗರೀಕ ವಿಮಾನ ನಿಲ್ದಾಣ - 32 ಕೋಟಿ 
- ಪ್ರತ್ಯೇಕ ವಿಶಿಷ್ಟ ಕೇಂದ್ರ ಕಾರಾಗೃಹ - 50 ಕೋಟಿ 
- ಗುರುನಾನಕ್ ಜೀರಾ ಗುರುದ್ವಾರ - 10 ಕೋಟಿ 

ಕೋಲಾರ 
- ಟೋಮ್ಯಾಟೋ ಸಂಸ್ಕರಣಾ ಘಟಕ - 10 ಕೋಟಿ ಅನುದಾನ 
- ಶಿವಾರಪಟ್ಟಣದಲ್ಲಿ ಅಮರಶಿಲ್ಪಿ ಜಕಣಾಚಾರಿ ಶಿಲ್ಪಕಲಾ ಕೇಂದ್ರ - 10 ಕೋಟಿ

ಉಡುಪಿ 
- ಜಟ್ಟಿ ಹಾಗೂ ತ್ಯಾಜ್ಯ ನಿರ್ವಹಣಾ ಘಟಕ - 15 ಕೋಟಿ ಅನುದಾನ 
- ಕಾರ್ಕಳದಲ್ಲಿ ಎಣ್ಣೆ ಹೊಳೆ ಯೋಜನೆ - 40 ಕೋಟಿ ಅನುದಾನ
- ಪಣಂಬೂರು ಪ್ರವಾಸೋದ್ಯಮ ಅಭಿವೃದ್ಧಿ - 7 ಕೋಟಿ
- ಕೆರೆ ತುಂಬಿಸುವ ಯೋಜನೆ - 40 ಕೋಟಿ ಅನುದಾನ

ಬಳ್ಳಾರಿ 
- ಕಂಪ್ಲಿ ನೀರಾವರಿ ಯೋಜನೆಗೆ 75 ಕೋಟಿ
- ಹಂಪಿ ವ್ಯಾಖ್ಯಾನ ಕೇಂದ್ರ - 1 ಕೋಟಿ 

ಗದಗ 
- ಮೆಣಸು, ಹೆಸರುಕಾಳು ಸಂಸ್ಕರಣಾ ಘಟಕ - 50 ಕೋಟಿ ಅನುದಾನ

ಹುಬ್ಬಳ್ಳಿ 
- ಮೆಣಸು, ಹೆಸರುಕಾಳು ಸಂಸ್ಕರಣಾ ಘಟಕ - 50 ಕೋಟಿ ಅನುದಾನ

ಶಿವಮೊಗ್ಗ 
- ಶಿಕಾರಿಪುರದ 200 ಕೆರೆ ತುಂಬಿಸುವಯೋಜನೆ - 200 ಕೋಟಿ ಅನುದಾನ 

ಕೊಡಗು 
- ಪುನರ್ವಸತಿ ನಿರ್ಮಾಣಕ್ಕೆ 2 ಕೋಟಿ ಅನುದಾನ 

ತುಮಕೂರು 
- K - Tech ನಾವೀನ್ಯತೆ ಕೇಂದ್ರ - 7 ಕೋಟಿ 

ಬಾಗಲಕೋಟೆ 
- ಬಾದಾಮಿ ಪ್ರವಾಸಿ ತಾಣ - ಕರಕುಶಲ ಮಾರುಕಟ್ಟೆ ಅಭಿವೃದ್ಧಿ - 25 ಕೋಟಿ 

4 ಹೊಸ ತಾಲೂಕುಗಳ ರಚನೆಗೆ ಅಸ್ತು

ಮೈಸೂರು 
- ಡಬಲ್​ ಡೆಕ್ಕರ್​ ಬಸ್​ ಸೇವೆ - 5 ಕೋಟಿ 

ವಿಜಯಪುರ 
- ಪ್ರತ್ಯೇಕ ವಿಶಿಷ್ಟ ಕೇಂದ್ರ ಕಾರಾಗೃಹ - 50 ಕೋಟಿ 

ಚಿಕ್ಕಮಗಳೂರು 
- ಬಾಲಕಿಯರ ಬಾಲಮಂದಿರ - 3 ಕೋಟಿ 

ನೀರಾವರಿಗೆ ದಕ್ಕಿದ್ದೆಷ್ಟು?

ಚಾಮರಾಜನಗರ
ರೇಷ್ಮೆ ಕಾರ್ಖಾನೆ ಪುನಶ್ಚೇತನ - 5 ಕೋಟಿ ಅನುದಾನ 

ಹಾವೇರಿ 
- ರೇಷ್ಮೆ ಘಟಕ ಬಲವರ್ಧನೆ - 5 ಕೋಟಿ ರೂ ಅನುದಾನ 

ರೈತರಿಗೆ ಮತ್ತಷ್ಟು ಬಲ ತುಂಬದಿ ಕುಮಾರಣ್ಣ

ರಾಯಚೂರು 
- ಕೃಷಿ ಪ್ರಾತ್ಯಕ್ಷಿಕೆ ಕೇಂದ್ರ ಸ್ಥಾಪನೆ - 10 ಕೋಟಿ ರೂ ಅನುದಾನ 

ಬೆಂಗಳೂರು-ಗ್ರಾಮೀಣ
ದೊಡಬಳ್ಳಾಪುರ ಆಸ್ಪತ್ರೆ ಮೇಲ್ದರ್ಜೆಗೆ- 10 ಕೋಟಿ ರೂ.

ಬಜೆಟ್ ಸಂಬಂಧೀ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಉತ್ತರ ಕರ್ನಾಟಕ
ಕಾರವಾರದಲ್ಲಿ ಮೆಡಿಕಲ್ ಕಾಲೇಜ್ ಸ್ಥಾಪಿಸಲು ಮೂರು ವರ್ಷಗಳ ಹಿಂದೆಯೇ ಅನುಮೋದನೆ ಸಿಕ್ಕಿದ್ದು, ಇದೀಗ ಆಸ್ಪತ್ರೆ ನಿರ್ಮಾಣಕ್ಕೆ 150 ಕೋಟಿ ರು. ಅನುದಾನ ನೀಡಲಾಗಿದೆ.

ಚಿತ್ರದುರ್ಗ
- ಕೆರೆ ಅಭಿವೃದ್ದಿಗೆ 105 ಕೋಟಿ ರೂ.
- ಚಳ್ಳಕೆರೆ ತಾಲೂಕಿನಲ್ಲಿ ವೇದಾವತಿ ನದಿಗೆ ಬ್ರಿಡ್ಜ್ ಕಮ್ ಬ್ಯಾರೇಜ್ ನಿರ್ಮಾಣಕ್ಕೆ 25 ಕೋಟಿ ರೂ.
-ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ತರಬೇತಿ ಕೇಂದ್ರಕ್ಕೆ 1 ಕೋಟಿ ರೂ.

click me!