ದೇವರನ್ನು ಒಲಿಸಿಕೊಳ್ಳುವ ಮಾರ್ಗ ಯಾವುದು?

By Web DeskFirst Published Sep 21, 2019, 1:09 PM IST
Highlights

ಯಾವುದು ಆ ಮಾರ್ಗ..? ಎಲ್ಲರಿಗೂ ಅಪೇಕ್ಷೆ ಇದೆ ನಾವು ದೇವರನ್ನ ಕಾಣಬೇಕು, ನಮಗೆ ದೇವರ ಸಾಕ್ಷಾತ್ಕಾರವಾಗಬೇಕು ಅಂತ. ಆದರೆ ಅಷ್ಟು ಸುಲಭಕ್ಕೆ ಸಿಗುತ್ತಾನಾ..!?

ಹೌದು. ಸಿಗುತ್ತಾನೆ. ಆದರೆ ನಮ್ಮ ನಿಮ್ಮಂತವರ ಸಾಮಾನ್ಯ ಕಣ್ಣಿಗೆ ಕಾಣುವುದು ಕಷ್ಟ. ಅಂಥ ಅರ್ಜುನನಿಗೇ ಕೃಷ್ಣನ ನಿಜ ಸ್ವರೂಪ ನೋಡಲು ಸಾಧ್ಯವಾಗಲಿಲ್ಲ.
ಹಾಗಾಗಿ ಕೃಷ್ಣ 'ದಿವ್ಯಂ ದದಾಮಿ ತೇ ಚಕ್ಷು: ಪಶ್ಯ ಮೇ ಯೋಗಮೈಶ್ವರಂ' ಅಂತ ಹೇಳಿದ.

ಅಯ್ಯಾ ದಿವ್ಯ ಕಣ್ಣುಗಳ ದೃಷ್ಟಿಯನ್ನು ನೀಡುತ್ತಿದ್ದೇನೆ ನೋಡು, ನನ್ನ ಯೋಗ ಶಕ್ತಿಯನ್ನು ಅಂದ. ಆಗ ಅರ್ಜುನನಿಗೆ ಕೃಷ್ಣನನ್ನ ನೋಡಲು ಸಾಧ್ಯವಾಯ್ತು. ಅಂಥ ದಿವ್ಯದೃಷ್ಟಿ ಬೇಕಲ್ಲ..! ಆ ದೃಷ್ಟಿಯನ್ನು ತಂದುಕೊಡುವ ಸಾಧನವನ್ನ ನಾವು ಕಂಡುಕೊಂಡರೆ ಭಗವಂತನ ಸಾಕ್ಷಾತ್ಕಾರ ಅಥವಾ ಪರಮಾತ್ಮ ದರ್ಶನ ಸಾಧ್ಯವಾದೀತು.

ಊಟಕ್ಕೆ ಮುನ್ನ ಎಲೆಗೆ ಸುತ್ತುಕಟ್ಟುವುದೇಕೆ?

ದೇವರ ದರ್ಶನ ಸಾಧನ ಯಾವುದು..?

ಆ ಸಾಧನವೇ ಜಪ. ಜಪದಿಂದಲೇ ಭಗವಂತನ ದರ್ಶನ ಅಥವ ಭಗವಂತನನ್ನೇ ಹೊಂದುವ ಸ್ಥಿತಿಯನ್ನ ತಲುಪಲಿಕ್ಕೆ ಸಾಧ್ಯ. ಹಾಗಾದರೆ ಜಪ ಎಂದರೆ ಏನು..?
ಇದು ಅರ್ಥವಾದರೆ ಖಂಡಿತಾ ಭಗವಂತನನ್ನು ಕಾಣುವ ದಿವ್ಯ ದೃಷ್ಟಿ ಲಭ್ಯವಾಯಿತು ಅಂತಲೇ ಅರ್ಥ.

ಜಪದ ಅರ್ಥವೇನು..?

ಜಕಾರೋ ಜನ್ಮ ವಿಚ್ಛೇದ:
ಪಕಾರ: ಪಾಪ ನಾಶನಂ
ತಸ್ಮಾತ್ ಜಪ ಇತಿಪ್ರೀಕ್ತೋ ಜನ್ಮಪಾಪ ವಿನಾಶಕ: ಜಪ ಎಂಬ ಪದದ ಅರ್ಥವಾದರೆ ಜಪದ ಕ್ರಿಯೆಗೆ ಸುಲಭವಾಗಿ ತೊಡಗಬುದು.
ಜಕಾರೋ ಜನ್ಮ ವಿಚ್ಛೇದ:  ಜ ಎಂಬ ಅಕ್ಷರದಿಂದ ಜನ್ಮದ ನಂಟು ಕಳೆಯತ್ತೆ.
ಪ ಕಾರ: ಪಾಪನಾಶನಂ ಪ ಕಾರ ಪಾಪ ನಾಶ ಮಾಡುತ್ತದೆ.
ಹಾಗಾಗಿ ಇದು ಜನ್ಮಪಾಪ ವಿನಾಶಕವಾದ ಪದವಾಗಿದೆ.

ಶಿವನಿಗೆ ಬಿಲ್ವ ಪತ್ರೆ ಪೂಜೆ ಯಾಕೆ?

ಸೂಕ್ಷ್ಮವಾಗಿ ಗಮನಿಸಿದರೆ ನಮ್ಮ ಹುಟ್ಟು-ಸಾವು ಎರಡರಿಂದಲೂ ಮುಕ್ತರನ್ನಾಗಿ ಮಾಡುತ್ತದೆ ಈ ಜಪ. ಯಾವಾಗ ನಮಗೆ ಹುಟ್ಟು ಸಾವುಗಳಿಲ್ಲ ಆಗ ನಾವು ಪರಮಾತ್ಮನಲ್ಲೇ ಸೇರಿದ್ದೇವೆ ಅಂತ.

ಆ ಸ್ಥಿತಿಗೆ ತಲುಪುವುದು ಹೇಗೆ..?

ಅದನ್ನೇ ನಾವು ಅರಿಯಬೇಕಾದದ್ದು. ಹುಟ್ಟು-ಸಾವಿನಿಂದ ಹೊರಬರಲಿಕ್ಕೆ ಕೆಲವು ಜಪ ಮಾರ್ಗಗಳಿವೆ. ಯಾರಿಗೆ ಯಾವ ಜಪ ಸಾಧ್ಯವಿದೆ ಅದನ್ನ ಅವರು ಅನುಸರಿಸಬಹುದು.

ಜಪದ ವಿಧಗಳು

1 ನಿತ್ಯಜಪ
2 ನೈಮಿತ್ತಿಕ ಜಪ
3 ಕಾಮ್ಯ ಜಪ
4. ಪ್ರದಕ್ಷಿಣೆ ಜಪ
5 ಅಖಂಡ ಜಪ
6 ಅಜಪಾಜಪ
7 ಲಿಖಿತ ಜಪ
8 ಅಚಲ ಜಪ
9 ಚಲ ಜಪ
ಹೀಗೆ ಇನ್ನೂ ಕೆಲವಿವೆ. ಈ ಜಪಗಳ ತಾತ್ಪರ್ಯ ಅರ್ಥವಾದರೆ ಜಪ ಮಾಡಲಿಕ್ಕೆ ಸುಲಭವಾಗುತ್ತದೆ.

ಶುಭ ಸಂದರ್ಭದಲ್ಲಿ ಬಳಸೋ ಬೆಳ್ಳಿ ಏಕೆ ಪವಿತ್ರ ಲೋಹ?

ನಿತ್ಯ ಜಪ - ನಿತ್ಯವೂ ತಪ್ಪದೇ ಒಂದು ನಿಗದಿತ ಸಮಯದಲ್ಲಿ ಮಾಡು ಜಪ ಅದೇ ನಿತ್ಯಜಪ ಅದು ಆತ್ಮೋನ್ನತಿಯನ್ನು ತಂದುಕೊಡುತ್ತದೆ.

ನೈಮಿತ್ತಿಕ ಜಪ - ಇದು ವಿಶೇಷ ದಿನಗಳಲ್ಲಿ ಮಾಡುವ ಜಪ. ಸಂಕ್ರಮಣ, ನವರಾತ್ರಿ, ಶಿವರಾತ್ರಿ ಇಂಥ ಪರ್ವ ಕಾಲದಲ್ಲಿ ಮಾಡುವ ಜಪ

ಕಾಮ್ಯ ಜಪ - ಹೆಸರೇ ಹೇಳುವ ಹಾಗೆ ಒಂದು ಅಪೇಕ್ಷೆಯಿಂದ ಮಾಡಬಹುದಾದ ಜಪ. ಉದಾಹರಣೆಗೆ ವಿವಾಹಾಕಾಂಕ್ಷೆಯಿಂದ ಮಾಡುವ ಕಾತ್ಯಾಯಿನಿ ಜಪ, ಆರೋಗ್ಯ ಸದೃಢತೆಗೆ ಮಾಡುವ ಸೂರ್ಯ ಜಪ, ಧನಾಕರ್ಷಣೆಗೆ ಮಾಡುವ ಮಹಾಲಕ್ಷ್ಮೀ ಜಪ ಇತ್ಯಾದಿ.
 
ಪ್ರದಕ್ಷಿಣಾ ಜಪ - ದೇವಾಲಯದಲ್ಲಿ, ಅಶ್ವತ್ಥದ ಬಳಿಯಲ್ಲಿ ಮಾಡುವ ಪ್ರದಕ್ಷಿಣಾ ಜಪ

ಅಖಂಡ ಜಪ - ಹೆಸರೇ ಹೇಳುವ ಹಾಗೆ ಖಂಡ ಮಾಡದೇ ಮಾಡುವ ಜಪ. ಒಂದು ನಿರ್ದಿಷ್ಟ ಕಾಲದಲ್ಲಿ ಪ್ರಾರಂಭಿಸಿ ಎಡಬಿಡದೆ ನಿರ್ದಿಷ್ಟ ಕಾಲದವರೆಗೆ ಹಗಲೂ ರಾತ್ರಿ ಎನ್ನದೆ ನಿರಂತರವಾಗಿ ಮಾಡುವ ಜಪ.

ಅಜಪಾಜಪ - ಇದು ಹಂಸ ಜಪ ಅಂತಾರೆ ಸೋಹಂ ಎಂಬುದನ್ನ ಹೇಳುವುದು
 
ಲಿಖಿತ ಜಪ - ದೇವರ ನಾಮಗಳನ್ನು ಬರೆಯುತ್ತಾ ಜಪಿಸಿವುದು.

ಅಚಲ ಜಪ - ಒಂದೇ ಕಡೆ ಸ್ಥಿರವಾಗಿ ಕುಳಿತು ಮಾಡುವ ಜಪ.

ಚಲ ಜಪ - ಓಡಾಡುತ್ತಾ ಹೇಳಿಕೊಳ್ಳಬಹುದಾದ ಜಪ.

ಹೀಗೆ ಹಲವು ಜಪ ಬಗೆಗಳಿದ್ದಾವೆ. ಕೃಷ್ಣ ಈ ಜಪವನ್ನ ಯಜ್ಞ ಎಂದು ಕರೆದಿದ್ದಾನೆ. ಜಪಯಜ್ಞ ಅಂತಲೇ ಗುರ್ತಿಸಿದ್ದಾನೆ. ಹಾಗಾದರೆ ಯಾವ ಜಪ ಮಾಡಬೇಕು ಎಂಬುದು ನಿರ್ಧಾರವಾಗಬೇಕು. ಮೇಲಿನವು ಜಪ ವಿಧಗಳಾದರೆ ಯಾವ ಮಂತ್ರದ ಜಪವಾಗಬೇಕು ಎಂಬುದೂ ನಿಶ್ಚಿತ ಮಾಡಿಕೊಳ್ಳಬೇಕು.

ಮೌಢ್ಯ ಬಿತ್ತೋ ವಾಸ್ತುಶಾಸ್ತ್ರ: ಜೋಪಾನವಾಗಿರಿ...

ಯಾವ ಜಪ ಬೇಕು..?

ಏಕಾಕ್ಷರಿ ಎನಿಸುವ ಓಂ ಜಪ ದಿಂದ ಹಿಡಿದು ಚತುರ್ವಿಂಶತ್ಯಕ್ಷರಿ ಅಂದರೆ 24 ಅಕ್ಷರಗಳವರೆಗೆ ಇರುವ ಗಾಯತ್ರೀ ಜಪದ ವರೆಗೆ ಹಲವು ಜಪಗಳಿವೆ. ನಿಮಗೆ ಇಷ್ಟವಾದ ಜಪವನ್ನ ಆಯ್ಕೆ ಮಾಡಿಕೊಂಡು ಆ ಭಗವಂತನ ದರ್ಶನಕ್ಕೆ ತೊಡಗಬಹುದು.

ಏಕಾಕ್ಷರಿ  ಮಂತ್ರ  - ಓಂ
ದ್ವ್ಯಕ್ಷರಿ ಮಂತ್ರ - ರಾಮ
ತ್ರ್ಯಕ್ಷರೀ ಮಂತ್ರ - ಶ್ರೀ ರಾಮ, ಓಂ ಶೀವ, ಶಿವೋಹಂ
ಪಂಚಾಕ್ಷರೀ ಮಂತ್ರ - ನಮ: ಶೀವಾಯ
ಷಡಕ್ಷರೀ ಮಂತ್ರ - ಓಂ ನಮ: ಶಿವಾಯ, ಹ್ರೀಂ ನಮ: ಶಿವಾಯ, ಶೊಂ ಶಿವಾಯೈ ನಮ:
 ಅಷ್ಟಾಕ್ಷರೀ ಮಂತ್ರ - ಓಂ ನಮೋ ನಾರಾಯಣಾಯ
ದಶಾಕ್ಷರೀ ಮಂತ್ರ - ಓಂ ನಮೋ ಭಗವತೇ ರುದ್ರಾಯ
ದ್ವಾದಶಾಕ್ಷರೀ ಮಂತ್ರ - ಓಂ ನಮೋ ಭಗವತೇ ವಾಸುದೇವಾಯ / ಶ್ರೀ ಲಲಿತಾತ್ರಿಪುರ ಸೌಂದರ್ಯೈ ನಮ: ತ್ರಯೋದಶಾಕ್ಷರೀ
ಮಂತ್ರ - ಓಂ ಶ್ರೀ ಲಲಿತಾತ್ರಿಪುರ ಸೌದರ್ಯೈ ನಮ:
ಪಂಚದಶಾಕ್ಷರೀ ಮಂತ್ರ - ಕ ಏ ಈ ಲ ಹ್ರೀಂ ಹ ಸ ಕ ಹ ಲ ಹ್ರೀಂ ಸಕಲ ಹ್ರೀಂ
ಚತುರ್ವಿಂಶತ್ಯಕ್ಷರ - ಗಾಯತ್ರೀ ಮಂತ್ರ
ಇವೆಲ್ಲವೂ ಜಪದ ಮಂತ್ರಗಳು ಯಾರಿ ಯಾವ ಜಪ ಬೇಕು ನಿರ್ಣಯಿಸಿ ಗುರುಗಳಿಂದ ಉಪದೇಶ ಸ್ವೀಕರಿಸಿ ಜಪ ಮಾಡಿ ಖಂಡಿತಾ ಇಚ್ಛಿತ ದೇವರ ಸಾಕ್ಷಾತ್ಕಾರವಾಗುವುದರಲ್ಲಿ ಸಂದೇಹವಿಲ್ಲ.

ವೃಕ್ಷದಲ್ಲಿ ಬ್ರಹ್ಮ, ವಿಷ್ಣು, ಶಿವನನ್ನು ನೋಡುವ ಸಂಸ್ಕತಿ ನಮ್ಮದು...
 

click me!