Asianet Suvarna News Asianet Suvarna News

ಇದು ನಿಜ ಜೀವನಕ್ಕೆ ಹಿಡಿದ ಕನ್ನಡಿ... ಇವ್ರನ್ನ ನೋಡಿ ಈಗ್ಲಾದ್ರೂ ಕಲೀರಿ ಅಂತಿರೋದ್ಯಾಕೆ ನೆಟ್ಟಿಗರು?

ತವರಿಗೆ ಬಂದ ಮಗಳನ್ನು ವಾಪಸ್​ ಗಂಡನ ಮನೆಗೆ ಹೋಗು ಎಂದರೆ ಹೀಗೇ ಆಗುತ್ತೆ. ಸ್ವಲ್ಪ ಮಕ್ಕಳನ್ನು ಮನಸ್ಸನ್ನೂ ಅರ್ಥ ಮಾಡಿಕೊಳ್ಳಿ ಅಂತಿರೋದ್ಯಾಕೆ ನೆಟ್ಟಿಗರು?
 

This is what happens if you advise daughter back to husbands house like Puttakkana Makkalu suc
Author
First Published May 2, 2024, 8:57 PM IST

ಸಹನಾ  ಮನೆ ಬಿಟ್ಟು ಹೋಗಿದ್ದಾಳೆ. ಈಗ ಮನೆಯಲ್ಲಿ ಗೋಳೋ ಗೋಳು. ಎಲ್ಲರೂ ಆಕೆಯನ್ನು ಹುಡುಕುವ ಕಾರ್ಯದಲ್ಲಿ ತೊಡಗಿದ್ದಾರೆ. ಒಬ್ಬೊಬ್ಬರು ಒಂದೊಂದು ಕಡೆ ಹೊರಟಿದ್ದಾರೆ. ಆದರೆ ಸಹನಾಳ ಪತ್ತೆ ಇಲ್ಲ. ಮಗಳಿಗೆ ಬುದ್ಧಿ ಹೇಳಿದ್ದಕ್ಕೆ ಪುಟ್ಟಕ್ಕ ರೋಧಿಸುತ್ತಿದ್ದಾಳೆ. ಸಹನಾಗೆ ನಾನು ಹೇಳಿದ್ದು ಹೆಚ್ಚಾಯ್ತೇನೋ ಅನ್ನುತ್ತಿದ್ದಾಳೆ. ಅದೇ ಇನ್ನೊಂದೆಡೆ ಕಂಠಿ, ತನ್ನ ಹುಡುಗರನ್ನು ಸಹನಾ ಹುಡುಕಲು ಬಿಟ್ಟಿದ್ದಾನೆ. ಪುಟ್ಟಕ್ಕ ಕಂಡ ಕಂಡ ದೇವರ ಮೊರೆ ಹೋಗುತ್ತಿದ್ದಾಳೆ. ಹಾಗಿದ್ದರೆ ಇಲ್ಲಿ ಪುಟ್ಟಕ್ಕ ಮಾಡಿದ್ದು ತಪ್ಪಾ? ಮಗಳಿಗೆ ಬುದ್ಧಿ ಹೇಳಿದ್ದೇ ತಪ್ಪಾಯ್ತಾ? ಗಂಡನ ಮನೆ ಏನಿದ್ರೂ ಹೊಂದಿಕೊಂಡು ಹೋಗಬೇಕು ಅನ್ನೋ ಅರ್ಥದಲ್ಲಿ ಪುಟ್ಟಕ್ಕ ಹೇಳಿದ ಮಾತುಗಳೇ ಮುಳುವಾಯ್ತಾ?

ಬಹುಶಃ ಇಂಥದ್ದನ್ನು ಪ್ರತಿನಿತ್ಯವೂ ಕಾಣುತ್ತಿರುತ್ತೇವೆ. ಅಷ್ಟಕ್ಕೂ, ಕೊಟ್ಟ ಹೆಣ್ಣು ಕುಲದಿಂದ ಹೊರಕ್ಕೆ ಎನ್ನುವ ಗಾದೆ ಮಾತು ತಲೆತಲಾಂತರಗಳಿಂದಲೇ ಬಂದುಬಿಟ್ಟಿದೆ.ಮದುವೆ ಮಾಡಿಕೊಟ್ಟ ಮೇಲೆ ಆಕೆ ಗಂಡನ ಮನೆಗೆ ಸೇರಿದವಳು.  ಏನೇ ಆದರೂ ಆಕೆ ಅಲ್ಲಿಯೇ ಇರಬೇಕು. ಎಷ್ಟೇ ಕಷ್ಟವಾದರೂ, ಏನೇ ದೌರ್ಜನ್ಯ ಎಸಗಿದರೂ ಹೆಣ್ಣಾದವಳಿಗೆ ಗಂಡನೇ ಸರ್ವಸ್ವ, ಪತಿಯೇ ಪರದೈವ, ಅತ್ತೆ ಮನೆಯೇ ಎಲ್ಲವೂ ಎನ್ನುವ ಮಾತು ಹಿಂದಷ್ಟೇ ಅಲ್ಲ, ಈಗಲೂ ಹಲವೆಡೆ ಕೇಳಿ ಬರುವುದು ಇದೆ. ಪತಿಯ ಮನೆಯಲ್ಲಿ ದೌರ್ಜನ್ಯ ಸಹಿಸಲಾಗದೇ ಮನೆಬಿಟ್ಟು ತವರು ಮನೆ ಸೇರಿದ ಎಷ್ಟೋ ಹೆಣ್ಣುಮಕ್ಕಳಿಗೆ ಬುದ್ಧಿಮಾತು ಹೇಳಿ ಗಂಡನ ಮನೆಗೆ ವಾಪಸ್​ ಕಳಿಸಿರುವ ಉದಾಹರಣೆಗಳು ಸಾಕಷ್ಟಿವೆ. ಈ ಪೈಕಿ ಆ ಹೆಣ್ಣುಮಕ್ಕಳು ಮತ್ತೆ ಹೆತ್ತವರಿಗೆ ಸಿಗುವುದು ಶವವಾಗಿ ಎನ್ನುವುದೂ ಅಷ್ಟೇ ಸತ್ಯ. ಕೆಲವು ಸಂದರ್ಭಗಳಲ್ಲಿ ಚಿಕ್ಕಪುಟ್ಟ ಜನಗಳಮಾಡಿಕೊಂಡು ತವರು ಸೇರಿದಾಗ ಇಬ್ಬರನ್ನೂ ಕುಳ್ಳರಿಸಿ ಬುದ್ಧಿಮಾತು ಹೇಳಿ ದಂಪತಿಯನ್ನು ಒಂದು ಮಾಡುವುದು ಒಳ್ಳೆಯ ನಿರ್ಧಾರ. ಆದರೆ ದೌರ್ಜನ್ಯ ಸಹಿಸಿಕೊಳ್ಳಲಾಗದೇ ತವರಿಗೆ ಬರುವ ಹೆಣ್ಣುಮಗಳಿಗೂ ಹೀಗೆ ಮಾಡುವುದು ಎಂದರೆ? 

ಧರ್ಮೇಂದ್ರ- ಹೇಮಾ ದಾಂಪತ್ಯಕ್ಕೆ 44 ವರ್ಷ: ಮದ್ವೆಗಾಗಿ ದಿಲಾವರ್ ಖಾನ್- ಆಯೇಷಾಬೀ ಆಗಿದ್ದ ರೋಚಕ ಕಥೆ ಇಲ್ಲಿದೆ...

ಇದು ಒಂದೆಡೆಯಾದರೆ, ತವರು ಸೇರಿದ ಮನೆಮಗಳ ಮೇಲೆ ನೆರೆಹೊರೆಯವರ, ಸಂಬಂಧಿಕರ ಕಣ್ಣುಗಳು ಬೇರೆ, ತಲೆಗೊಂದರಂತೆ ಮಾತು! ಬೇರೆಯವರ ಮನೆಯ ವಿಷಯಗಳೆಂದರೆ ಹೆಚ್ಚಿನವರಿಗೆ ತುಂಬಾ ಪ್ರೀತಿ. ಇದೇ ಕಾರಣಕ್ಕೆ  ತವರು ಸೇರಿದ ಮನೆ ಮಗಳಿಗೆ ಇನ್ನಿಲ್ಲದ ಮಾನಸಿಕ ಚಿತ್ರಹಿಂಸೆ ಕೊಡುವಲ್ಲಿ ಇವರು ಹಿಂದೆ-ಮುಂದೆ ನೋಡಲ್ಲ. ಇದೇ ಕಾರಣಕ್ಕೆ ಹೆಣ್ಣಿಗೆ ಅತ್ತ ಗಂಡನ ಮನೆಯೂ ಇಲ್ಲದೇ, ಇತ್ತ ತವರಿನಲ್ಲಿಯೂ ಇರಲಾಗದೇ ಕೊನೆಗೆ ಆತ್ಮಹತ್ಯೆಗೆ ಶರಣಾಗುವುದೊಂದೇ ದಾರಿಯಾಗಿಬಿಡುತ್ತದೆ. ಇದು ಪ್ರತಿನಿತ್ಯ ನಮ್ಮ ನಡುವೆಯೇ ನಡೆಯುತ್ತಿರುವ ಘಟನೆಗಳೂ ಹೌದು. ಕೊನೆಗೆ ಶವದ ಮುಂದೆ ಕುಳಿತು ಅಳುವುದೊಂದೇ ಕುಟುಂಬದವರಿಗೆ ಇರುವ ದಾರಿ.

ಇದೀಗ ಪುಟ್ಟಕ್ಕನ ಮಗಳು ಸಹನಾ ವಿಷಯಕ್ಕೆ ಬರುವುದಾದರೆ, ಇಲ್ಲಿ ಸಹನಾ ಕೂಡ ತನ್ನನ್ನು ಸಾಯಿಸಲು ಹೊರಟ ಅತ್ತೆ, ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಬಂದಿರುವ ಗಂಡನ ಸಂಬಂಧಿ ವಿರುದ್ಧದ ಸಿಡಿದೆದ್ದು ತವರು ಸೇರಿದ್ದಾಳೆ. ತನ್ನ ಪರವಾಗಿ ಇರಬೇಕಾದ ಪತಿ ತನ್ನನ್ನೇ ಹುಚ್ಚಿ ಎಂದು ಹೇಳಿರುವುದು ಆಕೆಗೆ ನುಂಗಲಾಗದ ತುತ್ತಾಗಿದೆ. ಆದರೆ ಪುಟ್ಟಕ್ಕನಿಗೋ ಮಗಳ ಜೀವನವನ್ನು ಹೇಗಾದರೂ ಸರಿ ಮಾಡುವ ಚಿಂತೆ. ತಾಯಿಯ ಸ್ಥಾನದಲ್ಲಿ ನಿಂತು ಪುಟ್ಟಕ್ಕನನ್ನು ನೋಡುವುದಾದರೆ, ಅವಳಿಗೆ ಮಗಳ ಸಂಸಾರ ಸರಿಯಾಗಬೇಕಷ್ಟೇ. ಏಕೆಂದರೆ ಇಲ್ಲಿ ಸಹನಾಳ ಗಂಡ ತನ್ನ ತಾಯಿಯ ಪರ ಇದ್ದಾನೆ ಎನ್ನುವುದು ಬಿಟ್ಟರೆ ಆತ ತುಂಬಾ ಒಳ್ಳೆಯವ. ಸಹನಾಳನ್ನು ತುಂಬಾ ಪ್ರೀತಿಸುತ್ತಾನೆ. ಇದಕ್ಕಾಗಿ ಪುಟ್ಟಕ್ಕನಿಗೆ ಇಬ್ಬರನ್ನೂ ಒಂದು ಮಾಡುವ ಚಿಂತೆ. ಇದಕ್ಕಾಗಿ ಸಹನಾಳಿಗೆ ಬುದ್ಧಿ ಮಾತು ಹೇಳಿದ್ದಾಳೆ. ಆದರೆ ಸಹನಾ ಮನೆ ಬಿಟ್ಟಿದ್ದಾಳೆ. ಇವಳನ್ನು ನೋಡಿ ಕಲಿಯಬೇಕಾದದ್ದು ಬಹಳಷ್ಟು ಇದೆ ಅಂತಿದ್ದಾರೆ ಅಭಿಮಾನಿಗಳು. 

ಅವ್ನ ಜೊತೆ ಮದ್ವೆಯಾಯ್ತು, ನಾಲ್ಕು ಸಲ ಗರ್ಭಪಾತವಾಗಿ ಸತ್ತೇ ಹೋಗಿದ್ದೆ... ನಟಿ ಭಾವನಾ ಶಾಕಿಂಗ್‌ ಹೇಳಿಕೆ

 

Follow Us:
Download App:
  • android
  • ios