7 ದಿನದಲ್ಲಿ ಇಡೀ ಅಫ್ಘಾನಿಸ್ತಾನ ತಾಲಿಬಾನ್‌ ವಶಕ್ಕೆ

Published : Aug 14, 2021, 10:14 AM ISTUpdated : Aug 14, 2021, 10:20 AM IST
7 ದಿನದಲ್ಲಿ ಇಡೀ ಅಫ್ಘಾನಿಸ್ತಾನ ತಾಲಿಬಾನ್‌ ವಶಕ್ಕೆ

ಸಾರಾಂಶ

7 ದಿನದಲ್ಲಿ ಇಡೀ ಅಷ್ಘಾನಿಸ್ತಾನ ತಾಲಿಬಾನ್‌ ವಶ? ನಿನ್ನೆ ಮತ್ತೆ 3 ಪ್ರಾಂತಗಳು ತಾಲಿಬಾನ್‌ ಬಂಡುಕೋರರ ತೆಕ್ಕೆಗೆ ಇನ್ನು 7 ದಿನದೊಳಗೆ ಕಾಬೂಲ್‌ ವಶ: ತಾಲಿಬಾನ್‌ ಘೋಷಣೆ

ಕಾಬೂಲ್‌(ಆ.14): ಅಷ್ಘಾನಿಸ್ತಾನದ ಸುಮಾರು ಮುಕ್ಕಾಲು ಭಾಗವನ್ನು ತೆಕ್ಕೆಗೆ ತೆಗೆದುಕೊಂಡಿರುವ ತಾಲಿಬಾನ್‌ ಬಂಡುಕೋರರು ಇನ್ನು 7 ದಿನದೊಳಗೆ ರಾಜಧಾನಿ ಕಾಬೂಲ್‌ ನಗರವೂ ಸೇರಿದಂತೆ ಇಡೀ ದೇಶವನ್ನು ವಶಪಡಿಸಿಕೊಳ್ಳುವುದಾಗಿ ಘೋಷಿಸಿದ್ದಾರೆ. ಈಗ ಶೇ.90ರಷ್ಟುಆಷ್ಘಾನಿಸ್ತಾನ ತಮ್ಮ ವಶದಲ್ಲಿದೆ ಎಂದು ಹೇಳಿಕೊಂಡಿದ್ದಾರೆ.

ಶುಕ್ರವಾರ ಹೊಸತಾಗಿ 3 ಪ್ರಾಂತಗಳ ರಾಜಧಾನಿಯನ್ನು ಬಂಡುಕೋರರು ವಶಪಡಿಸಿಕೊಂಡು ತಮ್ಮ ಆಡಳಿತ ಸ್ಥಾಪಿಸಿದ್ದಾರೆ. ಎರಡು ದಶಕಗಳ ಅವಧಿಯಲ್ಲಿ ಅಮೆರಿಕ, ಬ್ರಿಟನ್‌ ಮತ್ತು ನ್ಯಾಟೋ ಪಡೆಗಳು ಅತಿಹೆಚ್ಚು ದಾಳಿಗಳನ್ನು ನಡೆಸಿದ ಹೆಲ್ಮಾಂಡ್‌ ಪ್ರಾಂತವನ್ನು ಬಂಡುಕೋರರು ವಶಪಡಿಸಿಕೊಂಡಿದ್ದಾರೆ. ಇದು ಕಾಬೂಲ್‌ಗೆ ಸನಿಹದಲ್ಲಿದೆ. ಜೊತೆಗೆ, ಜಬುಲ್‌ ಹಾಗೂ ಉರುಜ್ಗಲ್‌ ಎಂಬ ಇನ್ನೆರಡು ಪ್ರಾಂತಗಳನ್ನೂ ವಶಪಡಿಸಿಕೊಂಡಿದ್ದಾರೆ.

ಪಾಕ್‌ನಿಂದ ಭಾರತ ತಲುಪಬಲ್ಲ ಘಜ್ನವಿ ಕ್ಷಿಪಣಿ ಯಶಸ್ವಿ ಪರೀಕ್ಷೆ!

ಬಹುತೇಕ ಈಗ ತಾಲಿಬಾನಿಗಳು ರಾಜಧಾನಿ ಕಾಬೂಲ್‌ ಅನ್ನು ಸುತ್ತುವರೆದಂತಾಗಿದ್ದು, ರಾಜಧಾನಿಯನ್ನು ರಕ್ಷಿಸಿಕೊಳ್ಳಲು ಅಷ್ಘಾನಿಸ್ತಾನದ ಸರ್ಕಾರ ಹೋರಾಡುತ್ತಿದೆ. ಅದರ ನಡುವೆಯೇ ಇನ್ನು 7 ದಿನದಲ್ಲಿ ಕಾಬೂಲ್‌ ವಶಪಡಿಸಿಕೊಳ್ಳುವುದಾಗಿ ತಾಲಿಬಾನ್‌ ವಕ್ತಾರರು ಪ್ರಕಟಿಸಿದ್ದಾರೆ.

ಭಾರತವು ಈಗಾಗಲೇ ಕಾಬೂಲ್‌ನಲ್ಲಿರುವ ದೂತಾವಾಸಗಳಿಂದ ದೇಶದ ರಾಜತಾಂತ್ರಿಕರನ್ನು ಏರ್‌ಲಿಫ್ಟ್‌ ಮಾಡುತ್ತಿದೆ. ಈಗ ಅಮೆರಿಕ, ಬ್ರಿಟನ್‌, ಕೆನಡಾ ಮುಂತಾದ ದೇಶಗಳೂ ಕೂಡ ಸಾವಿರಾರು ಸೈನಿಕರನ್ನು ಕಾಬೂಲ್‌ಗೆ ಕಳುಹಿಸಿ ತಮ್ಮ ದೇಶದ ರಾಜತಾಂತ್ರಿಕರನ್ನು ಸುರಕ್ಷಿತವಾಗಿ ಕರೆದುಕೊಂಡು ಹೋಗಲು ಆರಂಭಿಸಿವೆ.

ತಾಲಿಬಾನ್‌ ಜೊತೆ ಅಧಿಕಾರ ಹಂಚಿಕೆಗೆ ಅಷ್ಘಾನಿಸ್ತಾನ ರೆಡಿ

‘ನಾವು ಹಿಂಸಾಚಾರ ನಡೆಸಲು ಬಯಸುವುದಿಲ್ಲ. ದೇಶದಲ್ಲಿ ಶಾಂತಿಯುತ ಆಡಳಿತ ಸ್ಥಾಪಿಸಲು ನಮಗೆ ವಿದೇಶಿ ಪಡೆಗಳು ಸಹಕಾರ ನೀಡಬೇಕು. ನಾವು ಯಾವುದೇ ವಿದೇಶಿ ಪ್ರಜೆಗೂ ಹಾನಿ ಮಾಡುವುದಿಲ್ಲ’ ಎಂದು ತಾಲಿಬಾನ್‌ ಬಂಡುಕೋರರು ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಪ್ರಧಾನಿಗೆ ಜೋರ್ಡಾನ್‌ನಲ್ಲಿ ಭವ್ಯ ಸ್ವಾಗತ: ಐಎಂಇಸಿ ಕಾರಿಡಾರ್ ಕುರಿತು ಚರ್ಚೆ ನಿರೀಕ್ಷೆ
ಸಿಡ್ನಿಯ ಬೋಂಡಿ ಬೀಚ್‌ನಲ್ಲಿ 15 ಜನರ ಬಲಿ ಪಡೆದ ಯಹೂದಿ ಹಬ್ಬದ ಮೇಲಿನ ದಾಳಿಯ ಹಿಂದೆ ಪಾಕಿಸ್ತಾನಿ ಅಪ್ಪ ಮಗ