ಆಫ್ಘನ್‌ನಲ್ಲಿ ಪತ್ರಕರ್ತ ಸಿದ್ಧಿಖಿ ಸಾವು: ತಾಲಿಬಾನ್‌ ವಿಷಾದ!

Published : Jul 18, 2021, 08:40 AM IST
ಆಫ್ಘನ್‌ನಲ್ಲಿ ಪತ್ರಕರ್ತ ಸಿದ್ಧಿಖಿ ಸಾವು: ತಾಲಿಬಾನ್‌ ವಿಷಾದ!

ಸಾರಾಂಶ

* ಗುಂಡಿನ ಕಾಳಗದಲ್ಲಿ ಭಾರತದ ಪತ್ರಕರ್ತ ಗುಂಡಿನ ದಾಳಿಗೆ ಬಲಿಯಾಗಿರುವುದು ತಿಳಿದಿದೆ * ಡ್ಯಾನಿಷ್ ಸಿದ್ಧಿಖಿ ಹೇಗೆ ಸಾವನ್ನಪ್ಪಿದ ಎಂದು ಗೊತ್ತಿಲ್ಲ * ಆಫ್ಘನ್‌ನಲ್ಲಿ ಪತ್ರಕರ್ತ ಸಿದ್ಧಿಖಿ ಸಾವು: ತಾಲಿಬಾನ್‌ ವಿಷಾದ  

ಕಾಬೂಲ್‌(ಜು.18): ಆಷ್ಘಾನಿಸ್ತಾನ ಮತ್ತು ತಾಲಿಬಾನ್‌ ಉಗ್ರರ ನಡುವಿನ ವರದಿಗಾರಿಕೆ ವೇಳೆ ಗುಂಡಿನ ದಾಳಿಗೆ ಬಲಿಯಾದ ಪ್ರತಿಷ್ಠಿತ ಪುಲಿಟ್ಜರ್‌ ಪ್ರಶಸ್ತಿ ವಿಜೇತರಾದ ಭಾರತದ ಛಾಯಾಗ್ರಾಹಕ ಡ್ಯಾನಿಷ್‌ ಸಿದ್ಧಿಖಿ (40) ಅವರ ಸಾವಿನ ಬಗ್ಗೆ ತಾಲಿಬಾನ್‌ ಉಗ್ರ ಸಂಘಟನೆ ಮರುಕ ವ್ಯಕ್ತಪಡಿಸಿದೆ.

ಆಷ್ಘಾನಿಸ್ತಾನದ ಕಂದಾಹಾರ್‌ನಲ್ಲಿ ಆಷ್ಘಾನಿಸ್ತಾನದ ಪಡೆಗಳು ಮತ್ತು ತಮ್ಮ ಸೇನಾನಿ (ತಾಲಿಬಾನ್‌ ಉಗ್ರರು)ಗಳ ನಡುವಿನ ಗುಂಡಿನ ಕಾಳಗದಲ್ಲಿ ಭಾರತದ ಪತ್ರಕರ್ತ ಗುಂಡಿನ ದಾಳಿಗೆ ಬಲಿಯಾಗಿರುವುದು ತಿಳಿದಿದೆ. ಅವರ ಸಾವಿನ ಬಗ್ಗೆ ನಮಗೆ ವಿಷಾದವಿದೆ ಎಂದು ತಾಲಿಬಾನ್‌ ವಕ್ತಾರ ಝಬಿಯುಲ್ಲಾ ಮುಜಾಹಿದ್‌ ಹೇಳಿದ್ದಾನೆ.

‘ಜೊತೆಗೆ ಯಾವುದೇ ಪತ್ರಕರ್ತ ಯುದ್ಧದ ವಲಯಗಳಿಗೆ ಬರುತ್ತಿದ್ದರೆ, ಈ ಬಗ್ಗೆ ನಮಗೆ ಮಾಹಿತಿ ನೀಡಬೇಕು. ಆದರೆ ಸಿದ್ದಿಖಿ ಬಂದ ಬಗ್ಗೆ ನಮಗೆ ಮಾಹಿತಿ ಇರಲಿಲ್ಲ. ಹೀಗಾಗಿ ಭಾರತದ ಪತ್ರಕರ್ತ ಡ್ಯಾನಿಷ್‌ ಸಿದ್ಧಿಖಿ ಅವರ ಸಾವಿನ ಬಗ್ಗೆ ವಿಷಾದವಿದೆ ಎಂದಿದ್ದಾನೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಮದ್ಯಪ್ರಿಯರಿಗೆ ಶಾಕ್.. ಮಧ್ಯಾಹ್ನ 2 ರಿಂದ 5 ರವರೆಗೆ ಮದ್ಯ ಮಾರಾಟ ಬಂದ್: ಏನಿದು ಥಾಯ್‌ ವಿಚಿತ್ರ ನಿಯಮ!
ಮುದ್ದಿನ ಶ್ವಾನಗಳಿಗಾಗಿ ಅನಿಮೇಟೆಡ್ ಸಿನಿಮಾ ಶೋ ಆಯೋಜಿಸಿದ ಥಿಯೇಟರ್: ರೆಡ್ ಕಾರ್ಪೆಟ್ ಹಾಸಿ ಸ್ವಾಗತ