ಅಧಿಕಾರ ಉಳಿಸಲು ಇಮ್ರಾನ್ ಖಾನ್ ಈ 'ಹೊಸ ರಣತಂತ್ರ', ಉಳಿಸಿಕೊಳ್ತಾರಾ ಕುರ್ಚಿ?

Published : Apr 03, 2022, 04:20 AM ISTUpdated : Apr 03, 2022, 02:24 PM IST
ಅಧಿಕಾರ ಉಳಿಸಲು ಇಮ್ರಾನ್ ಖಾನ್ ಈ 'ಹೊಸ ರಣತಂತ್ರ', ಉಳಿಸಿಕೊಳ್ತಾರಾ ಕುರ್ಚಿ?

ಸಾರಾಂಶ

* ಪಾಕಿಸ್ತಾನ ರಾಜಕೀಯದಲ್ಲಿ ಬಿಕ್ಕಟ್ಟು * ಕುರ್ಚಿ ಉಳಿಸಿಕೊಳ್ಳಲು ಇಮ್ರಾನ್ ಖಾನ್ ಸಾಹಸ * ಕೊನೆಯ ಪ್ರಯತ್ನ ಮಾಡಲು ಮುಂದಾದ ಪಾಕಿಸ್ತಾನ ಪ್ರಧಾನಿ

ಇಸ್ಲಮಾಬಾದ್(ಏ.03): ಪಾಕಿಸ್ತಾನ ಸರ್ಕಾರ ಇತ್ತೀಚಿನ ದಿನಗಳಲ್ಲಿ ರಾಜಕೀಯ ಬಿಕ್ಕಟ್ಟನ್ನು ಎದುರಿಸುತ್ತಿದೆ. ಪ್ರಧಾನಿ ಇಮ್ರಾನ್ ಖಾನ್‌ಗೆ ಕುರ್ಚಿ ಉಳಿಸಿಕೊಳ್ಳುವುದೇ ಬಹುದೊಡ್ಡ ಸವಾಲಾಗಿದೆ. ಆದರೆ ಈ ಬಿಕ್ಕಟ್ಟಿಗೆ ಆಡಳಿತ ಪಕ್ಷ ಹೊಸ ಪರಿಹಾರ ಕಂಡುಕೊಂಡಿದೆ. ಅಧ್ಯಕ್ಷ ಸ್ಥಾನವನ್ನು ಉಳಿಸಿಕೊಳ್ಳಲು ಪಾಕಿಸ್ತಾನ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಅವಿಶ್ವಾಸ ನಿರ್ಣಯವನ್ನು ಎದುರಿಸಲು ಹೊಸ ತಂತ್ರವನ್ನು ರೂಪಿಸಿದೆ.

ಈ ಯೋಜನೆಯಡಿಯಲ್ಲಿ, ಈಗ ಪ್ರಧಾನಿ ಇಮ್ರಾನ್ ಖಾನ್ ಮತ್ತು ಎಲ್ಲಾ ಎಂಎನ್‌ಎಗಳು ಭಾನುವಾರ ರಾಷ್ಟ್ರೀಯ ಅಸೆಂಬ್ಲಿಯ ಕಲಾಪದಲ್ಲಿ ಭಾಗವಹಿಸಲಿದ್ದಾರೆ ಎಂಬುವುದು ಉಲ್ಲೇಖನೀಯ. ಈ ನಿಟ್ಟಿನಲ್ಲಿ ಪಿಎಂ ಇಮ್ರಾನ್ ಖಾನ್ ಅವರು ಪಿಟಿಐನ ಎಂಎನ್‌ಎ (ರಾಷ್ಟ್ರೀಯ ಅಸೆಂಬ್ಲಿ ಸದಸ್ಯ)ಗೆ ಸೂಚನೆಗಳನ್ನು ನೀಡಿದ್ದಾರೆ.

ನನ್ನ ಬಳಿ ಎಲ್ಲಾ ಇದೆ ಎಂದ ಪಾಕ್ ಪ್ರಧಾನಿಗೆ ಮಾಜಿ ಪತ್ನಿ ಏನಂದ್ಲು ನೋಡಿ!

ಈ ನಿರ್ಧಾರ ತೆಗೆದುಕೊಳ್ಳಲಾಗಿದೆ

ಪ್ರಧಾನಿ ಇಮ್ರಾನ್ ಖಾನ್ ವಿರುದ್ಧದ ಅವಿಶ್ವಾಸ ನಿರ್ಣಯದ ಮತದಾನದ ದಿನದಂದು ಎಲ್ಲಾ ಎಂಎನ್‌ಎಗಳು ಗೈರುಹಾಜರಾಗಲು ಈ ಹಿಂದೆ ನಿರ್ಧರಿಸಲಾಗಿತ್ತು. ಇದಕ್ಕಾಗಿ ಅವಿಶ್ವಾಸ ನಿರ್ಣಯದ ಮೇಲಿನ ಮತದಾನದ ದಿನದಂದು ಎಲ್ಲರೂ ರಾಷ್ಟ್ರೀಯ ಅಸೆಂಬ್ಲಿಯ (ಎನ್‌ಎ) ಅಧಿವೇಶನದಲ್ಲಿ ಭಾಗವಹಿಸದಂತೆ ಇಮ್ರಾನ್ ಖಾನ್ ಪಿಟಿಐನ ಎಂಎನ್‌ಎಗೆ ಸೂಚನೆ ನೀಡಿದ್ದರು.

ಸೂಚನೆಗಳನ್ನು ಪಾಲಿಸದಿದ್ದರೆ ಕ್ರಮ ಕೈಗೊಳ್ಳಲಾಗುವುದು

ಮತದಾನದ ದಿನದಂದು ಯಾವುದೇ ಎಂಎನ್‌ಎ ಸಂಸತ್ ಭವನದಲ್ಲಿ ಉಳಿಯಬಾರದು ಎಂದು ನಿರ್ದೇಶನ ನೀಡಲಾಗಿದೆ. ಪಕ್ಷದ ಅಧ್ಯಕ್ಷರ ಸೂಚನೆಗಳನ್ನು ಯಾರಾದರೂ ಉಲ್ಲಂಘಿಸಿದರೆ ಅವರ ವಿರುದ್ಧ ಕಲಂ 63 (ಎ) ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು. ಸೂಚನೆಗಳ ಪ್ರತಿಯನ್ನು ಆ ಹೊತ್ತಿಗೆ ಎಲ್ಲಾ ಪಿಟಿಐ ಸಂಸದರಿಗೆ ವೈಯಕ್ತಿಕವಾಗಿ ಕಳುಹಿಸಲಾಗಿತ್ತು.

ಅಂಕಿ ಅಂಶಗಳ ವಿವರ

69ರ ಹರೆಯದ ಕ್ರಿಕೆಟಿಗ-ರಾಜಕಾರಣಿಯಾಗಿರುವ ಇವರು ಅವಿಶ್ವಾಸ ನಿರ್ಣಯವನ್ನು ಎದುರಿಸುತ್ತಿದ್ದಾರೆ. ಮಾರ್ಚ್ 28 ರಂದು, ರಾಷ್ಟ್ರೀಯ ಅಸೆಂಬ್ಲಿಯಲ್ಲಿ ವಿರೋಧ ಪಕ್ಷದ ನಾಯಕ ಶಹಬಾಜ್ ಷರೀಫ್ ಅವರು ಅವಿಶ್ವಾಸ ನಿರ್ಣಯವನ್ನು ಮಂಡಿಸಿದರು. ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಅವಿಶ್ವಾಸ ನಿರ್ಣಯದ ಮೇಲಿನ ಮತದಾನ ಭಾನುವಾರ ನಡೆಯಲಿದೆ. ಇಮ್ರಾನ್ ಖಾನ್ ಅಧಿಕಾರ ಉಳಿಸಲು ಮ್ಯಾಜಿಕ್ ಸಂಖ್ಯೆ 172 ಅನ್ನು ಸಾಬೀತುಪಡಿಸಬೇಕಾಗಿದೆ. ಆದರೆ, ತನಗೆ 175 ಸಂಸದರ ಬೆಂಬಲವಿದೆ ಎಂದು ಪ್ರತಿಪಕ್ಷಗಳು ಹೇಳಿಕೊಂಡಿವೆ. ಹಾಗಾಗಿ ಪ್ರಧಾನಿ ಕೂಡಲೇ ರಾಜೀನಾಮೆ ನೀಡಬೇಕಾಗುತ್ತದೆ.

ಇತ್ತ ಪಾಕ್‌ನಲ್ಲಿ ರಾಜಕೀಯ ಬಿಕ್ಕಟ್ಟು ಅತ್ತ ಮಾಜಿ ಪ್ರಧಾನಿ ಮೇಲೆ ದಾಳಿ, ಕೇಳಿ ಬಂತು ಗಂಭೀರ ಆರೋಪ!

ಕೊನೆಯ ಕ್ಷಣದವರೆಗೂ ಪ್ರಯತ್ನ

ಅದೇ ವೇಳೆ ಬಹುಮತ ಕಳೆದುಕೊಂಡರೂ ರಾಜೀನಾಮೆ ನೀಡುವುದಿಲ್ಲ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ. ‘ಕೊನೆಯ ಎಸೆತದವರೆಗೂ ಹೋರಾಡುತ್ತೇನೆ’ ಎಂದು ಪಟ್ಟು ಹಿಡಿದಿದ್ದಾರೆ. ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಅವಿಶ್ವಾಸ ನಿರ್ಣಯವನ್ನು ಎದುರಿಸಲಿದ್ದಾರೆ. ಅದೇ ಸಮಯದಲ್ಲಿ, ಸರ್ಕಾರಕ್ಕೆ ಬೆಂಬಲ ಹಿಂತೆಗೆದುಕೊಂಡ ಬಂಡಾಯ ಸಂಸದರನ್ನು ಇಮ್ರಾನ್ ಖಾನ್ ದೇಶ ವಿರೋಧಿಗಳು ಎಂದು ಕರೆದಿದ್ದಾರೆ. ಅಲ್ಲದೆ ಈ ಜನರು ತಮ್ಮ ಜೀವನದುದ್ದಕ್ಕೂ ಹೀಗೆ ಗುರುತಿಸಲ್ಪಡುತ್ತಾರೆ ಎಂದು ಹೇಳಿದರು.

ಪಾಕಿಸ್ತಾನದ ಇತಿಹಾಸ ಇಲ್ಲಿದೆ

ಗಮನಾರ್ಹವೆಂದರೆ ಇದುವರೆಗೆ ಪಾಕಿಸ್ತಾನದ ಯಾವ ಪ್ರಧಾನಿಯೂ ತಮ್ಮ ಅಧಿಕಾರಾವಧಿಯಲ್ಲಿ 5 ವರ್ಷಗಳನ್ನು ಪೂರೈಸಿಲ್ಲ. ಹೀಗಿದ್ದರೂ, ಪಾಕಿಸ್ತಾನದ ಇತಿಹಾಸದಲ್ಲಿ ಯಾವುದೇ ಪ್ರಧಾನಿಯನ್ನು ಅವಿಶ್ವಾಸ ನಿರ್ಣಯದ ಮೂಲಕ ಪದಚ್ಯುತಗೊಳಿಸಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಇಮ್ರಾನ್ ಖಾನ್ ಈ ಸವಾಲನ್ನು ಎದುರಿಸುತ್ತಿರುವ ಮೂರನೇ ಪ್ರಧಾನಿಯಾಗಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಆಕಾಶಕ್ಕೇ ಕನ್ನಡಿ ಹಾಕಿ ರಾತ್ರಿಗೆ ಗುಡ್‌ ಬೈ ಸಾಹಸ!
PUBG ಗೇಮ್​ನಿಂದ 6ನೇ ಮಗುವಿನತ್ತ ಪಯಣ: ಅಕ್ರಮವಾಗಿ ಭಾರತಕ್ಕೆ ಬಂದಿದ್ದಾಕೆ ಮತ್ತೊಮ್ಮೆ ಗರ್ಭಿಣಿ!