ನವದೆಹಲಿ (ಮಾ.12): ಪಾಕ್ ಪ್ರಧಾನಿ ಇಮ್ರಾನ್ ಖಾನ್ (Imran Khan) ಅವರಿಗೆ ಭೂಗೋಳಶಾಸ್ತ್ರ (geography)ಪಾಠದ ಅಗತ್ಯವಿದೆ. ಈ ಹಿಂದೆಯೂ ಮುಜುಗರದ ಹೇಳಿಕೆಗಳನ್ನು ನೀಡಿದ್ದ ಪಾಕ್ ಪ್ರಧಾನಿ, ನೇಪಾಳ ಕಠ್ಮಂಡುವಿನಲ್ಲಿದೆ, ಅಲ್ಲಿ ನವಾಜ್ ಷರೀಫ್ ಅವರು ನರೇಂದ್ರ ಮೋದಿ ಅವರನ್ನು ರಹಸ್ಯವಾಗಿ ಭೇಟಿಯಾಗಿದ್ದಾರೆ ಎಂದು ಹೇಳುವ ಮೂಲಕ ಮತ್ತೊಮ್ಮೆ ನಗೆಪಾಟಾಲಿಗೀಡಾಗಿದ್ದಾರೆ. ಇಮ್ರಾನ್ ಹೀಗೆ ಮಾತನಾಡಿದ ವಿಡಿಯೋವನ್ನು ಪಾಕಿಸ್ತಾನಿ ಪತ್ರಕರ್ತೆ ನೈಲಾ ಇನಾಯತ್ ಹಂಚಿಕೊಂಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
'ಜರ್ಮನಿ-ಜಪಾನ್ ಗಡಿಯನ್ನು ಸೇರಿದ ನಂತರ, ಆಫ್ರಿಕಾವನ್ನು ದೇಶವನ್ನಾಗಿ ಮಾಡಿದ ನಂತರ, ಈಗ ಹೊಸ ಸಂಶೋಧನೆ ಇಲ್ಲಿದೆ: ನೇಪಾಳ ಕಠ್ಮಂಡುವಿನಲ್ಲಿದೆ' ಎಂದು ಬರೆದು ಅವರು ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಜರ್ಮನಿ-ಜಪಾನ್ (Japan) ಗಡಿಯನ್ನು ಹಂಚಿಕೊಳ್ಳುತ್ತದೆ ಅದು ಜರ್ಮನಿ (Germany) ಯಲ್ಲಿದೆ ಎಂದು ನಾನು ಯಾವಾಗಲೂ ಭಾವಿಸಿದೆ. ನಾನು ಈಗ ವಿಶ್ವ ಭೂಪಟವನ್ನು ಮರುಪರಿಶೀಲಿಸಬೇಕಾಗಿದೆ. ನಮ್ಮ ಭೌಗೋಳಿಕತೆ ನಕಾಶೆಯನ್ನು ನವೀಕರಿಸಿದ್ದಕ್ಕಾಗಿ ಕಪ್ತಾನ್ ಸಾಬ್ ಅವರಿಗೆ ಧನ್ಯವಾದಗಳು. ನಾವು ಭೌಗೋಳಶಾಸ್ತ್ರದಲ್ಲಿ ತುಂಬಾ ಹಿಂದಿದ್ದೇವೆ. ಕಪ್ತಾನ್ ಸಾಬ್ಗೆ ಇದೆಲ್ಲವೂ ತಿಳಿದಿದೆ ಎಂಬುದನ್ನು ಇದು ಸಾಬೀತುಪಡಿಸುತ್ತದೆ ಎಂದು ಅವರು ಟ್ವೀಟ್ ಮಾಡಿದ್ದಾರೆ. ಇದಕ್ಕೆ ವ್ಯಂಗ್ಯವಾಡಿದ ನೆಟ್ಟಿಗರೊಬ್ಬರು ಹಾಗಾದರೆ ಚೀನಾ ಈಗ ನೇಪಾಳದೊಂದಿಗೆ ಮಾತನಾಡುವುದೋ ಅಥವಾ ಕಠ್ಮಂಡುವಿನೊಂದಿಗೋ ಎಂಬ ಗೊಂದಲಕ್ಕೀಡಾಗಿದೆ ಎಂದರು.
2021 ರಲ್ಲಿ, ಖಾನ್ ಅವರು ಉಜ್ಬೇಕಿಸ್ತಾನ್ಗೆ ಭೇಟಿ ನೀಡಿದಾಗ ಉಜ್ಬೇಕಿಸ್ತಾನ್ನ (Uzbekistan) ಇತಿಹಾಸದ ಬಗ್ಗೆ ಉಜ್ಬೇಕಿಸ್ತಾನ್ ಜನರಿಗಿಂತ ಹೆಚ್ಚು ತಿಳಿದಿದ್ದೇನೆ ಎಂದು ಹೇಳಿದ್ದರು. ಪಾಕಿಸ್ತಾನ ಮತ್ತು ಉಜ್ಬೇಕಿಸ್ತಾನ್ ನಡುವಿನ ಧಾರ್ಮಿಕ, ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಸಂಬಂಧಗಳ ಕುರಿತು ಮಾತನಾಡುತ್ತಾ ಅವರು ಈ ಹೇಳಿಕೆ ನೀಡಿದ್ದರು. 2019ರಲ್ಲಿ, ಜಪಾನ್ ಜರ್ಮನಿಯೊಂದಿಗೆ ಗಡಿಯನ್ನು ಹಂಚಿಕೊಳ್ಳುತ್ತದೆ ಎಂದು ಅವರು ಹೇಳಿದರು. ಪಾಕಿಸ್ತಾನದ ಪ್ರಧಾನಿ ಫ್ರಾನ್ಸ್ (France) ಬದಲು ಜಪಾನ್ ಎಂದು ತಪ್ಪಾಗಿ ಹೇಳಿದರು ಮತ್ತು ವೀಡಿಯೊದಲ್ಲಿ ಅವರು ಜರ್ಮನಿ ಮತ್ತು ಜಪಾನ್ ಗಡಿ ಪ್ರದೇಶದಲ್ಲಿ ಈ ಎರಡು ದೇಶಗಳು ಜಂಟಿಯಾಗಿ ಕೈಗಾರಿಕೆಗಳನ್ನು ಹೊಂದಿದ್ದರು ಎಂದು ಹೇಳುವುದನ್ನು ಕೇಳಬಹುದು.
Russia Ukraine Crisis: ಪುಟಿನ್ ಎದುರು ಕಾಶ್ಮೀರ ವಿಚಾರ ಪ್ರಸ್ತಾಪಿಸಿದ ಪಾಕ್ ಪ್ರಧಾನಿ!
2018 ರಲ್ಲಿ, ಅವರು ಆಫ್ರಿಕಾವನ್ನು 'ಉದಯೋನ್ಮುಖ ದೇಶ ಎಂದು ಕರೆಯುವ ಮೂಲಕ ಎಲ್ಲರಿಗೂ ಆಘಾತ ನೀಡಿದರು. ಏತನ್ಮಧ್ಯೆ, ತನ್ನ ದೇಶದಲ್ಲಿ ಹಲವು ರಾಜಕೀಯ ಸವಾಲುಗಳು ಮತ್ತು ಅಸಮಾಧಾನವನ್ನು ಎದುರಿಸುತ್ತಿರುವ ಇಮ್ರಾನ್ ಖಾನ್ (Imran Khan) ಪಾಕಿಸ್ತಾನದ ಸೇನೆಯ ವಿರುದ್ಧ ವಾಗ್ದಾಳಿ ನಡೆಸುತ್ತಾ ಪ್ರಾಣಿಗಳು ಮಾತ್ರ ತಟಸ್ಥವಾಗಿ ಉಳಿಯುತ್ತವೆ. ಮನುಷ್ಯರು ಒಳ್ಳೆಯದು ಅಥವಾ ಕೆಟ್ಟದ್ದರ ಪರವಾಗಿರುತ್ತವೆ ಎಂದು ಹೇಳಿದರು. ಸೇನೆಗೂ ರಾಜಕೀಯಕ್ಕೂ ಯಾವುದೇ ಸಂಬಂಧವಿಲ್ಲ ಹಾಗೂ ರಾಜಕೀಯ ವ್ಯವಹಾರಗಳಲ್ಲಿ ಪಾಕ್ ಸೇನೆ ತೊಡಗಿಸಿಕೊಂಡಿದೆ ಎಂದು ಹೇಳಲಾದ ಯಾವುದೇ ಊಹಾಪೋಹಗಳನ್ನು ತಪ್ಪಿಸುವಂತೆ ಪಾಕಿಸ್ತಾನದ ಮಿಲಿಟರಿ ವಕ್ತಾರರು ಹೇಳಿದ ನಂತರ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರು ಈ ಹೇಳಿಕೆ ನೀಡಿದ್ದರು.
ಟೀವಿ ಚರ್ಚೆಗೆ ಬನ್ನಿ: ಭಾರತ-ಪಾಕ್ ಭಿನ್ನಮತ ಬಗೆಹರಿಸಲು ಮೋದಿಗೆ ಇಮ್ರಾನ್ ಖಾನ್ ಆಹ್ವಾನ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ