
ಕೀವ್: ರಷ್ಯಾ ಹಾಗೂ ಉಕ್ರೇನ್ ನಡುವೆ 16 ತಿಂಗಳಿನಿಂದ ನಡೆಯುತ್ತಿರುವ ಯುದ್ಧದಲ್ಲಿ ಅತ್ಯಂತ ಭೀಕರ ಎನ್ನಲಾದ ಘಟನೆಯೊಂದು ಮಂಗಳವಾರ ಸಂಭವಿಸಿದ್ದು, ದಕ್ಷಿಣ ಉಕ್ರೇನ್ನ ಖೇರ್ಸನ್ ಬಳಿ ರಷ್ಯಾದ ವಶದಲ್ಲಿದ್ದ ಸೋವಿಯತ್ ಕಾಲದ ಬೃಹತ್ ಕಖೋವ್ಕಾ ಅಣೆಕಟ್ಟೆಸ್ಫೋಟಗೊಂಡಿದೆ. ಪರಿಣಾಮ, ಖೇರ್ಸನ್ ಹಾಗೂ ಕ್ರಿಮಿಯಾದ ಸುಮಾರು 100 ಹಳ್ಳಿ ಹಾಗೂ ಪಟ್ಟಣಗಳು ಮುಳುಗಡೆ ಭೀತಿ ಎದುರಿಸುತ್ತಿದ್ದು, ಜನರು ಜೀವ ಉಳಿಸಿಕೊಳ್ಳಲು ಊರು ತೊರೆಯುತ್ತಿದ್ದಾರೆ. ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರು ಕೂಡಲೇ ಜಾಗ ಖಾಲಿ ಮಾಡಬೇಕೆಂದು ಎರಡೂ ದೇಶಗಳು ಆದೇಶ ಹೊರಡಿಸಿವೆ. ಅಣೆಕಟ್ಟೆಇರುವ ನೋವಾ ಕಖೋವ್ಕಾ ಊರು ಈಗಾಗಲೇ ಮುಳುಗಿದೆ.
ಉದ್ದೇಶಪೂರ್ವಕವಾಗಿ ರಷ್ಯಾ ಈ ಡ್ಯಾಂ ಹಾಗೂ ಜಲವಿದ್ಯುತ್ ಉತ್ಪಾದನೆ (hydroelectric power plant) ಘಟಕವನ್ನು ಸ್ಫೋಟಿಸಿದೆ ಎಂದು ಉಕ್ರೇನ್ ಆರೋಪಿಸಿದ್ದರೆ, ಉಕ್ರೇನ್ ದೇಶವೇ ಇದನ್ನು ಸ್ಫೋಟಿಸಿದೆ ಎಂದು ರಷ್ಯಾ ಆರೋಪಿಸಿದೆ. ಡ್ಯಾಂ ಧ್ವಂಸದಿಂದ ಯಾವ ದೇಶಕ್ಕೆ ಅನುಕೂಲವಾಗಲಿದೆ ಎಂಬುದು ಇನ್ನೂ ಖಚಿತವಾಗಿಲ್ಲ. ಎರಡೂ ದೇಶಗಳ ವಶದಲ್ಲಿರುವ ಊರುಗಳು ಇದರಿಂದಾಗಿ ಮುಳುಗಲಿವೆ. ಜೊತೆಗೆ, 2014ರಿಂದ ರಷ್ಯಾದ ವಶದಲ್ಲಿರುವ ಉಕ್ರೇನ್ನ ಕ್ರಿಮಿಯಾ ಪ್ರದೇಶಕ್ಕೆ ಕುಡಿಯುವ ನೀರಿನ ಪೂರೈಕೆ ನಿಲ್ಲಲಿದೆ. ಹಾಗೆಯೇ ಉಕ್ರೇನ್ನಲ್ಲಿ ರಷ್ಯಾದ ವಶದಲ್ಲಿರುವ ಯುರೋಪ್ನ ಅತಿದೊಡ್ಡ ಝಪೋರಿಜಿಯಾ (Zaporizhia)ಅಣುಸ್ಥಾವರ ಇದರಿಂದ ಅಪಾಯಕ್ಕೆ ಸಿಲುಕಿದೆ. ಈ ಅಣುಸ್ಥಾವರದ ಕೂಲಿಂಗ್ ವ್ಯವಸ್ಥೆಗೆ ಡ್ಯಾಂ ನೀರು ಬಳಕೆಯಾಗುತ್ತಿತ್ತು.
Russia-Ukraine war: ಯುದ್ಧದ ಭೀಕರತೆ ನಡುವೆಯೂ ಉಕ್ರೇನ್ ಸೈನಿಕರ 'ನಾನು ನಾಟು' ಡಾನ್ಸ್, ವಿಡಿಯೋ ವೈರಲ್
ಡ್ಯಾಂ ಸ್ಫೋಟದ ಬೆನ್ನಲ್ಲೇ ಎರಡೂ ದೇಶಗಳು ತುರ್ತು ಸಭೆಗಳನ್ನು (emergency meetings) ನಡೆಸಿ ರಕ್ಷಣಾ ಕಾರ್ಯಾಚರಣೆಗೆ ಇಳಿದಿವೆ. ಈ ದುರ್ಘಟನೆಯಿಂದ ಉಕ್ರೇನ್ನಲ್ಲಿ ಪರಿಸರ ಹಾಗೂ ಜೀವವ್ಯವಸ್ಥೆಗೆ ಸಂಬಂಧಿಸಿದ ಬಹುದೊಡ್ಡ ಆಪತ್ತು ಎದುರಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಮುಂದಿನ ಕೆಲ ಗಂಟೆಗಳಲ್ಲಿ ಸಾವಿರಾರು ಜನರು, ಪ್ರಾಣಿಗಳು ನೀರಿನಲ್ಲಿ ಮುಳುಗಿ ಸಾವನ್ನಪ್ಪುವ ಸಾಧ್ಯತೆಯಿದೆ ಎನ್ನಲಾಗಿದೆ.
ರಷ್ಯಾ-ಉಕ್ರೇನ್ ಯುದ್ಧ ನಿಲ್ಲಿಸಲು ಸರ್ವಪ್ರಯತ್ನ: ಮೋದಿ
ಮಹತ್ವದ ಡ್ಯಾಂನ ಹಿನ್ನೆಲೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ