
ಹೊಸದಿಲ್ಲಿ (ನವೆಂಬರ್ 26, 2023): ಇಸ್ರೇಲ್ - ಹಮಾಸ್ ಯುದ್ಧ ನಲ್ಲುವ ಆಶಾಕಿರಣವೊಂದು ಕಾಣಿಸಿಕೊಂಡಿದ್ದು, ಸದ್ಯ 4 ದಿನಗಳ ಕದನ ವಿರಾಮ ಘೋಷಿಸಲಾಗಿದೆ. ಈ ವೇಳೆ, ಇಸ್ರೇಲ್ ಸೇರಿ ಇತರೆ ದೇಶಗಳ ಪ್ರಜೆಗಳನ್ನು ಒತ್ತೆಯಾಳುಗಳಾಗಿದ್ದವರನ್ನು ಬಿಡುಗಡೆ ಮಾಡಲಾಗಿದೆ. ಕತಾರ್, ಈಜಿಪ್ಟ್ ಮತ್ತು ಯುನೈಟೆಡ್ ಸ್ಟೇಟ್ಸ್ ಮಧ್ಯಸ್ಥಿಕೆಯಲ್ಲಿ 4 ದಿನಗಳ ಕದನ ವಿರಾಮದ ಅಡಿಯಲ್ಲಿ ಗಾಜಾದಲ್ಲಿ ಹಮಾಸ್ ಕೈಯಲ್ಲಿ 49 ದಿನಗಳ ಸೆರೆಯಲ್ಲಿ 4 ಮಕ್ಕಳು ಮತ್ತು 6 ವೃದ್ಧ ಮಹಿಳೆಯರು ಸೇರಿದಂತೆ 13 ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲಾಗಿದೆ. 13 ಮಂದಿ ಶುಕ್ರವಾರ ಬಿಡುಗಡೆಯಾದ ಒತ್ತೆಯಾಳುಗಳ ಮೊದಲ ಬ್ಯಾಚ್ನ ಭಾಗವಾಗಿದ್ದರು.
ಈ ಒಪ್ಪಂದದ ಅಡಿಯಲ್ಲಿ, ಹಮಾಸ್ ಒತ್ತೆಯಾಳಾಗಿ ಇಟ್ಟುಕೊಂಡಿದ್ದ 50 ಮಹಿಳೆಯರು ಮತ್ತು 19 ವರ್ಷದೊಳಗಿನ ಮಕ್ಕಳನ್ನು ಪ್ರಸ್ತುತ ಇಸ್ರೇಲ್ ಬಂಧನದಲ್ಲಿರುವ 150 ಪ್ಯಾಲೆಸ್ತೀನ್ ಜನರ ಬದಲಾಗಿ ಬಿಡುಗಡೆ ಮಾಡಬಹುದು. ಷ್ನೇಯ್ಡರ್ ಚಿಲ್ಡ್ರನ್ಸ್ ಮೆಡಿಕಲ್ ಸೆಂಟರ್ (SCMC) ಬಿಡುಗಡೆ ಮಾಡಿದ ವಿಡಿಯೋದಲ್ಲಿ, 9 ವರ್ಷದ ಓಹದ್ ಮುಂಡರ್, ತನ್ನ ತಂದೆಯನ್ನು ನೋಡಿದ ಕೂಡಲೇ ಅವರ ಬಳಿಗೆ ಓಡಿ ತಬ್ಬಿಕೊಂಡಿದ್ದಾನೆ. ಓಹದ್ ಜತೆಗೆ ಆತನ ತಾಯಿ ಕೆರೆನ್ ಮುಂದರ್ (55) ಮತ್ತು ಅಜ್ಜಿ ರುತಿ ಮುಂದರ್ (78) ಸಹ ಬಿಡುಗಡೆಯಾಗಿದ್ದಾರೆ.
ಇದನ್ನು ಓದಿ: ಇಸ್ರೇಲ್ಗೆ ರಹಸ್ಯವಾಗಿ ಪಾಕ್ನಿಂದ ಶಸ್ತ್ರಾಸ್ತ್ರ ಪೂರೈಕೆ? ಹಮಾಸ್ ವಿರುದ್ಧದ ಯುದ್ಧದಲ್ಲಿ ಯಹೂದಿ ರಾಷ್ಟ್ರಕ್ಕೆ ಬೆಂಬಲ!
ಇನ್ನು, ಈ ಸಂಬಂಧ ಓಹದ್ ಸಹೋದರ ರಾಯ್ ಜಿಚ್ರಿ ಮುಂಡರ್ ಇಸ್ರೇಲಿ ರಕ್ಷಣಾ ಪಡೆಗೆ (ಐಡಿಎಫ್) ಧನ್ಯವಾದ ಅರ್ಪಿಸಿದ್ದಾರೆ. ಎಲ್ಲಾ ಇಸ್ರೇಲ್ ಜನರಿಗೆ ಧನ್ಯವಾದಗಳು. ನಾವು ಇಂದು ಆಚರಿಸುತ್ತಿಲ್ಲ ಎಂದು ಹೇಳುವುದು ನನಗೆ ಬಹಳ ಮುಖ್ಯವಾಗಿದೆ.
ನಾವು ಸಂತೋಷವಾಗಿದ್ದೇವೆ, ಆದರೆ, ನಾವು ಹೆಚ್ಚು ಒತ್ತೆಯಾಳುಗಳನ್ನು ಹೊಂದಿರುವುದರಿಂದ ನಮ್ಮ ಅಭಿಯಾನವನ್ನು ನಾವು ಮುಂದುವರಿಸಬೇಕಾಗಿದೆ. ಎಲ್ಲಾ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವವರೆಗೆ ನಾವು ನಮ್ಮ ಪ್ರಯತ್ನಗಳನ್ನು ಮುಂದುವರಿಸುತ್ತೇವೆ ಎಂದು ಓಹಾದ್ ಸಹೋದರ ರಾಯ್ ಜಿಚ್ರಿ ಮುಂಡರ್ ಇಸ್ರೇಲಿ ರಕ್ಷಣಾ ಪಡೆಗೆ (ಐಡಿಎಫ್) ಧನ್ಯವಾದ ಅರ್ಪಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ಉಲ್ಲೇಖಿಸಿದೆ. ಭರವಸೆ ಕಳೆದುಕೊಳ್ಳಬೇಡಿ, ಅವರು ಶೀಘ್ರದಲ್ಲೇ ಹಿಂತಿರುಗುತ್ತಾರೆ ಎಂದೂ ಅವರು ಹೇಳಿದರು.
ಇದನ್ನು ಓದಿ: ಗಾಜಾದಲ್ಲಿರೋ ಹಮಾಸ್ ಸಂಸತ್ತಿನ ಕಟ್ಟಡವನ್ನೇ ವಶಪಡಿಸಿಕೊಂಡ ಇಸ್ರೇಲ್ ಸೇನೆ: ಉಗ್ರರ ಖೇಲ್ ಖತಂ?
4 ದಿನಗಳ ಕದನ ವಿರಾಮದ ಸಮಯದಲ್ಲಿ, ಅಕ್ಟೋಬರ್ 7 ರ ದಾಳಿಯ ಸಮಯದಲ್ಲಿ ಹಮಾಸ್ 50 ಒತ್ತೆಯಾಳುಗಳನ್ನು ಬ್ಯಾಚ್ಗಳಲ್ಲಿ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಎರಡನೇ ಬ್ಯಾಚ್ನಲ್ಲಿ 13 ಇಸ್ರೇಲಿ ಮತ್ತು ನಾಲ್ವರು ಥಾಯ್ ಪ್ರಜೆಗಳನ್ನು ಶನಿವಾರ ಬಿಡುಗಡೆ ಮಾಡಲಾಗಿದೆ.
ಇದನ್ನೂ ಓದಿ: 16 ವರ್ಷಗಳ ಬಳಿಕ ಹಮಾಸ್ ಗಾಜಾ ಪಟ್ಟಿಯ ನಿಯಂತ್ರಣ ಕಳೆದುಕೊಂಡಿದೆ: ಇಸ್ರೇಲ್ ರಕ್ಷಣಾ ಸಚಿವ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ