
ಕುವೈತ್: ಮುಂಬೈನಿಂದ ಬ್ರಿಟನ್ನ ಮ್ಯಾಂಚೆಸ್ಟರ್ಗೆ ತೆರಳುತ್ತಿದ್ದ ಭಾರತೀಯರು 23 ತಾಸು ಕಾಲ ಕುವೈತ್ನಲ್ಲಿ ಸಿಲುಕಿದ್ದು, ಊಟ-ತಿಂಡಿ ಇಲ್ಲದೇ ಬಳಲಿದ್ದಾರೆ. ಭಾರತೀಯರು ಗಲ್ಫ್ ಏರ್ ಮೂಲಕ ಬಹ್ರೇನ್ಗೆ ತೆರಳಿ ಅಲ್ಲಿಂದ ಅದೇ ಸಂಸ್ಥೆಯ ವಿಮಾನದಲ್ಲಿ ಮ್ಯಾಂಚೆಸ್ಟರ್ಗೆ ಹೊರಟಿದ್ದರು. ಬಹ್ರೇನ್ನಿಂದ ಟೇಕಾಫ್ ಆದ 20 ನಿಮಿಷದಲ್ಲಿ ಎಂಜಿನ್ನಲ್ಲಿ ತೊಂದರೆ ಕಾಣಿಸಿಕೊಂಡ ಕಾರಣ ವಿಮಾನವನ್ನು ಕುವೈತ್ನಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿದೆ.
‘ಆದರೆ ವಿಮಾನ ನಿಲ್ದಾಣದಲ್ಲಿ ಐರೋಪ್ಯ ಒಕ್ಕೂಟ, ಬ್ರಿಟನ್ ಮತ್ತು ಅಮೆರಿಕ ಪ್ರಜೆಗಳಿಗೆ ಮಾತ್ರ ವಸತಿ, ಊಟ ಕೊಟ್ಟು ಭಾರತೀಯರನ್ನು ಗಲ್ಫ್ ಏರ್ ಸಿಬ್ಬಂದಿ ಮತ್ತು ವಿಮಾನ ನಿಲ್ದಾಣ ಕಡೆಗಣಿಸಿದೆ. ಏಕೆಂದರೆ ಭಾರತೀಯ ಪ್ರಯಾಣಿಕರು ಈ ಸವಲತ್ತಿಗೆ ನಿಯಮಾನುಸಾರ ಅರ್ಹರಲ್ಲ ಎಂದು ಗಲ್ಫ್ ಏರ್ ಹೇಳಿದೆ’ ಎಂದು ಸಂಕಷ್ಟಕ್ಕೆ ಸಿಲುಕಿರುವ ಪ್ರಯಾಣಿಕರು ಎಕ್ಸ್ನಲ್ಲಿ ಗಲ್ಫ್ ಏರ್ ಮತ್ತು ಏರ್ಪೋರ್ಟ್ನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ನಡುವೆ ಈ ವಿಷಯವನ್ನು ಗಲ್ಫ್ ಏರ್ ಮುಂದೆ ಪ್ರಸ್ತಾಪಿಸಿ, ಸಮಸ್ಯೆ ಬಗೆಹರಿಸುವಂತೆ ಭಾರತ ಸರ್ಕಾರ ಕೋರಿಕೆ ಸಲ್ಲಿಸಿದೆ.
ಇದನ್ನೂ ಓದಿ: ಪ್ರತಿ ದಂಪತಿ ಕನಿಷ್ಠ 3 ಮಕ್ಕಳ ಹೆರಬೇಕು : ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ