ಟರ್ಕಿ - ಸಿರಿಯಾ ಭೂಕಂಪ: ಪರಿಹಾರ ಕಾರ್ಯ ಸುಗಮಕ್ಕೆ ಭಾರತೀಯ ಸೇನೆಯಿಂದ ಟ್ರ್ಯಾಕಿಂಗ್ ವ್ಯವಸ್ಥೆ ಜಾರಿ

Published : Feb 16, 2023, 03:37 PM IST
ಟರ್ಕಿ - ಸಿರಿಯಾ ಭೂಕಂಪ: ಪರಿಹಾರ ಕಾರ್ಯ ಸುಗಮಕ್ಕೆ ಭಾರತೀಯ ಸೇನೆಯಿಂದ ಟ್ರ್ಯಾಕಿಂಗ್ ವ್ಯವಸ್ಥೆ ಜಾರಿ

ಸಾರಾಂಶ

ಮಧ್ಯಪ್ರಾಚ್ಯ ದೇಶಗಳು ಶತಮಾನದ ಭೀಕರ ಭೂಕಂಪ, ಮಾರಣಾಂತಿಕ ವಿಪತ್ತನ್ನು ಅನುಭವಿಸುತ್ತಿದೆ. ಈ ಹಿನ್ನೆಲೆ ಭಾರತವು ಟರ್ಕಿ ಮತ್ತು ಸಿರಿಯಾಕ್ಕೆ ನಿರ್ಣಾಯಕ ಔಷಧಗಳು, 7 C-17 ವಿಮಾನಗಳು ಮತ್ತು ಈಗ ಟ್ರ್ಯಾಕಿಂಗ್ ವ್ಯವಸ್ಥೆಯಿಂದಲೂ ಭೂಕಂಪದ ಸಹಾಯವನ್ನು ಒದಗಿಸಿದೆ.

ಇಸ್ತಾನ್‌ಬುಲ್‌ (ಫೆಬ್ರವರಿ 16, 2023): ಟರ್ಕಿ, ಸಿರಿಯಾದಲ್ಲಿ ಈ ತಿಂಗಳು ಸಂಭವಿಸಿದ ಪ್ರಬಲ ಭೂಕಂಪದಲ್ಲಿ 40 ಸಾವಿರಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ. ರಕ್ಷಣಾ ಕಾರ್ಯ ಇನ್ನೂ ನಡೆಯುತ್ತಲೇ ಇದ್ದು, ಸಾವಿನ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಈ ಹಿನ್ನೆಲೆ ಭಾರತ ಸೇರಿ ಹಲವು ದೇಶಗಳು ಭೂಕಂಪ ಪೀಡಿತ ರಾಷ್ಟ್ರಗಳಿಗೆ ನೆರವು ನೀಡುತ್ತಿದೆ. ಟರ್ಕಿಗೆ ನೆರವಿನ ಮಹಾಪೂರವೇ ಹರಿದುಬಂದಿದೆ. ಅಲ್ಲದೆ, ಭಾರತ ಸರ್ಕಾರ ಮತ್ತು ಅಂತರಾಷ್ಟ್ರೀಯ ಸಮುದಾಯದಿಂದ ಸಂಗ್ರಹಿಸಲಾದ ಪರಿಹಾರ ಸಾಮಗ್ರಿಗಳೊಂದಿಗೆ ಮೊದಲ ಬೆಂಗಾವಲು ಪಡೆಯನ್ನು ಫೆಬ್ರವರಿ 15 ರಂದು ಸಿರಿಯಾಕ್ಕೆ ಸಹ ಸಾಗಿಸಲಾಗಿದೆ. ಸಿರಿಯಾ ಸರ್ಕಾರವು ವಿಶ್ವಸಂಸ್ಥೆಗೆ ಮಾಡಿದ ಮನವಿಯ ಮೇರೆಗೆ ಅಲ್ಲೆಪೋದಲ್ಲಿನ ಸ್ಥಳೀಯ ಆಡಳಿತಗಾರರಿಗೆ ಪಡಿತರ ಮತ್ತು ಔಷಧಿಗಳನ್ನು ಹಸ್ತಾಂತರಿಸಲಾಗಿದೆ. 

ಮಧ್ಯಪ್ರಾಚ್ಯ ದೇಶಗಳು ಶತಮಾನದ ಭೀಕರ ಭೂಕಂಪ, ಮಾರಣಾಂತಿಕ ವಿಪತ್ತನ್ನು ಅನುಭವಿಸುತ್ತಿದೆ. ಈ ಹಿನ್ನೆಲೆ ಭಾರತವು ಟರ್ಕಿ ಮತ್ತು ಸಿರಿಯಾಕ್ಕೆ ನಿರ್ಣಾಯಕ ಔಷಧಗಳು, 7 C-17 ವಿಮಾನಗಳು ಮತ್ತು ಈಗ ಟ್ರ್ಯಾಕಿಂಗ್ ವ್ಯವಸ್ಥೆಯಿಂದಲೂ ಭೂಕಂಪದ ಸಹಾಯವನ್ನು ಒದಗಿಸಿದೆ. ಹೌದು, ಟರ್ಕಿ, ಸಿರಿಯಾಗೆ ನೆರವು ನೀಡುವುದು ಮಾತ್ರವಲ್ಲದೆ ಟ್ರ್ಯಾಕಿಂಗ್ ವ್ಯವಸ್ಥೆಯನ್ನು ಸಹ ಮಾಡಿದೆ. 

ಇದನ್ನು ಓದಿ: 1939ರ ಮರಣ ದಾಖಲೆ ಮುರಿದ ಟರ್ಕಿ ಭೂಕಂಪ: 35 ಸಾವಿರ ಗಡಿ ದಾಟಿದ ಮೃತರ ಸಂಖ್ಯೆ

ಭಾರತೀಯ ಸೇನೆಯು "SANCHAR" ಎಂಬ ನೆಟ್‌ವರ್ಕ್- ಇಂಡಿಪೆಂಡೆಂಟ್‌ ನೈಜ-ಸಮಯದ ಟ್ರ್ಯಾಕಿಂಗ್ ಮತ್ತು ಸಂದೇಶ ಮಾಡ್ಯೂಲ್ ಅನ್ನು ಅಭಿವೃದ್ಧಿಪಡಿಸಿದೆ. ಇದನ್ನು ರಿಪಬ್ಲಿಕ್ ಆಫ್ ಟರ್ಕಿಯಲ್ಲಿ ಭಾರತೀಯ ಸೈನಿಕರನ್ನು ನಿಯೋಜಿಸಲಾಗಿರುವ ಪ್ರದೇಶಗಳಲ್ಲಿ ಬಳಸಲಾಗುತ್ತಿದೆ ಎಂದು ತಿಳಿದುಬಂದಿದೆ. ಸ್ಥಳೀಯ ಜನಸಂಖ್ಯೆಗೆ ಪರಿಹಾರ ಒದಗಿಸಲು ಟರ್ಕಿಯ ಪ್ರದೇಶಗಳಲ್ಲಿ ಭಾರತೀಯ ಸೇನಾ ಪಡೆಗಳನ್ನು ಸಹ ನಿಯೋಜಿಸಲಾಗಿದೆ. ಅಲ್ಲಿ, ಅವರು ಕ್ಯಾಪ್ಟನ್ ಕರಣ್ ಸಿಂಗ್ ಮತ್ತು ಸಬ್ ಪಿ.ಜಿ. ಸಪ್ರೆ ಅಭಿವೃದ್ಧಿಪಡಿಸಿದ "ಸಂಚಾರ್" ವ್ಯವಸ್ಥೆಯನ್ನು ಬಳಸಬಹುದು ಎಂದು ಸುದ್ದಿಸಂಸ್ಥೆ ಎಎನ್‌ಐ ವರದಿ ಮಾಡಿದೆ.

ಯುದ್ಧಭೂಮಿಯಲ್ಲಿ ತಂಡದ ಸದಸ್ಯರು ಮತ್ತು ಸ್ವತ್ತುಗಳನ್ನು ಪತ್ತೆಹಚ್ಚಲು ಸಹಾಯ ಮಾಡಲು ಎಲ್ಲಾ ರಕ್ಷಣಾ ಪಡೆಗಳು ಮತ್ತು ಅರೆಸೈನಿಕ ಕಾರ್ಯಾಚರಣೆಗಳಲ್ಲಿ ಈ ಉಪಕರಣವನ್ನು ಬಳಸಲು ಮತ್ತು ಭೂಕಂಪ ಪೀಡಿತ ಪ್ರದೇಶಗಳಲ್ಲಿ ಉತ್ತಮ ಪರಿಹಾರ ಕಾರ್ಯಾಚರಣೆಗಳನ್ನು ಪತ್ತೆಹಚ್ಚಲು ಇದನ್ನು ಬಳಸಲಾಗುತ್ತದೆ ಎಂದು ತಿಳಿದುಬಂದಿದೆ. ಫೆಬ್ರವರಿ 6 ರಂದು ಟರ್ಕಿ ಮತ್ತು ಸಿರಿಯಾದಲ್ಲಿ 7.8 ತೀವ್ರತೆಯ ದುರಂತ ಮತ್ತು ವಿನಾಶಕಾರಿ ಭೂಕಂಪ ಸಂಭವಿಸಿತ್ತು. ಹಲವಾರು ದಾಖಲೆಗಳನ್ನು ಮುರಿದ ಈ ಭೂಕಂಪದಲ್ಲಿ 40,000 ಕ್ಕೂ ಹೆಚ್ಚು ಸಾವುಗಳು ದೃಢಪಟ್ಟಿದ್ದು, ಸಾವಿನ ಸಂಖ್ಯೆ ಇನ್ನೂ ಹೆಚ್ಚುತ್ತಲೇ ಇದೆ. ಸರಿಸುಮಾರು $84.1 ಶತಕೋಟಿ ನಷ್ಟವನ್ನು ಉಂಟುಮಾಡಿದ ದಾಖಲೆಯ ನಾಲ್ಕನೇ ಅತ್ಯಂತ ದುಬಾರಿ ಭೂಕಂಪವಾಗಿದೆ.

ಇದನ್ನೂ ಓದಿ: ಟರ್ಕಿ ಜನರಿಗೆ ಭಾರತದ ಸೇನಾ ಆಸ್ಪತ್ರೆಯೇ ಸಂಜೀವಿನಿ: ಭೂಕಂಪಕ್ಕೆ ಬಲಿಯಾದವರ ಸಂಖ್ಯೆ 50000?

ವಿಶ್ವಸಂಸ್ಥೆಯ ಡಿಸ್ ಎಂಗೇಜ್‌ಮೆಂಟ್ ಅಬ್ಸರ್ವರ್ ಫೋರ್ಸ್‌ನಲ್ಲಿ (ಯುಎನ್‌ಡಿಒಎಫ್) ನಿಯೋಜಿಸಲಾದ ಭಾರತೀಯ ಸೇನೆಯ ತಂಡವು ಬುಧವಾರ ಸಿರಿಯಾದ ಅಲೆಪ್ಪೋಗೆ ಪರಿಹಾರ ಸಾಮಗ್ರಿಗಳನ್ನು ತಲುಪಿಸಿದೆ. ಈ ನಿಯೋಜನೆಯು ಅಂತಾರಾಷ್ಟ್ರೀಯ ಸಮುದಾಯದ ಕೊಡುಗೆಗಳನ್ನು ಒಳಗೊಂಡಂತೆ ಭಾರತ ಸರ್ಕಾರದಿಂದ ಪಡಿತರ ಮತ್ತು ಔಷಧಿಗಳನ್ನು ಒಳಗೊಂಡಿದೆ ಎಂದು ಸೇನೆಯು ಘೋಷಿಸಿತು. ಸಿರಿಯಾ ಸರ್ಕಾರ ವಿಶ್ವಸಂಸ್ಥೆಯಿಂದ ನೆರವು ಕೋರಿದೆ ಎಂದು ಮೂಲಗಳು ಎಎನ್‌ಐಗೆ ತಿಳಿಸಿವೆ.

UNDOF ಮೂಲದ ಸುಮಾರು 40 ಸಿಬ್ಬಂದಿಗಳ ಸೇನಾ ತಂಡವು ಪರಿಹಾರ ಸಾಮಗ್ರಿಗಳನ್ನು ಸಾಗಿಸಲು ಅಲೆಪೋಗೆ ಅನೇಕ ಪ್ರವಾಸಗಳನ್ನು ಕೈಗೊಳ್ಳಲು ಭಾರತ ಸರ್ಕಾರ ನಿರ್ಧರಿಸಿತ್ತು. ಇವುಗಳಲ್ಲಿ ಪಡಿತರ, ವೈದ್ಯಕೀಯ ಸರಬರಾಜು, ಬಟ್ಟೆ ಮತ್ತು ಇತರ ನೆರವು ಸೇರಿವೆ.

ಇದನ್ನೂ ಓದಿ: Turkey: 128 ಗಂಟೆ ಕಾಲ ಅವಶೇಷದಡಿ ಸಿಲುಕಿದ್ದ 2 ತಿಂಗಳ ಮಗು ಜೀವಂತವಾಗಿ ಪತ್ತೆ: ಪವಾಡ ಅಂದ್ರೆ ಇದು..!

ದೇಶದಲ್ಲಿ 35,418 ಸಾವುಗಳು ವರದಿಯಾಗಿವೆ ಎಂದು ಟರ್ಕಿಯ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೋಗನ್ ಮಂಗಳವಾರ ಘೋಷಿಸಿದ್ದು, ಭೂಕಂಪವು ದೇಶವು ಒಂದು ಶತಮಾನದಲ್ಲೇ ಕಂಡ ಅತ್ಯಂತ ಭೀಕರ ದುರಂತವಾಗಿದೆ.

ಇದನ್ನೂ ಓದಿ: ಭೂಕಂಪ ಸಂತ್ರಸ್ಥರಿಗೆ ತನ್ನ ಉಳಿತಾಯ ಹಣ ದಾನ ಮಾಡಿದ 9 ವರ್ಷದ ಬಾಲಕ..!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮದ್ಯಪ್ರಿಯರಿಗೆ ಶಾಕ್.. ಮಧ್ಯಾಹ್ನ 2 ರಿಂದ 5 ರವರೆಗೆ ಮದ್ಯ ಮಾರಾಟ ಬಂದ್: ಏನಿದು ಥಾಯ್‌ ವಿಚಿತ್ರ ನಿಯಮ!
ಮುದ್ದಿನ ಶ್ವಾನಗಳಿಗಾಗಿ ಅನಿಮೇಟೆಡ್ ಸಿನಿಮಾ ಶೋ ಆಯೋಜಿಸಿದ ಥಿಯೇಟರ್: ರೆಡ್ ಕಾರ್ಪೆಟ್ ಹಾಸಿ ಸ್ವಾಗತ