ಸಣ್ಣ ಬಕೆಟ್ ಕದ್ದಿದ್ದಕ್ಕೆ ನಡೆದಿದ್ದು 2000 ಸೈನಿಕರ ಜೀವ ಕಸಿದ ಘೋರ ಯುದ್ಧ!

Published : Mar 23, 2024, 04:13 PM ISTUpdated : Mar 23, 2024, 04:21 PM IST
ಸಣ್ಣ ಬಕೆಟ್ ಕದ್ದಿದ್ದಕ್ಕೆ ನಡೆದಿದ್ದು 2000 ಸೈನಿಕರ ಜೀವ ಕಸಿದ ಘೋರ ಯುದ್ಧ!

ಸಾರಾಂಶ

ಸೈನಿಕರ ಗುಂಪೊಂದು ಯಕಃಶ್ಚಿತ್ ನೀರಿನ ಬಕೆಟ್ ಕದ್ದಿದ್ದಕ್ಕೆ ದೊಡ್ಡ ಯುದ್ಧವೇ ನಡೆದು ಹೋಯ್ತು! ಸುಮಾರು 2000 ಸೈನಿಕರು ಈ ಬಕೆಟ್ ಜಗಳಕ್ಕೆ ಜೀವ ಕಳೆದುಕೊಂಡರು.  

ನೀರಿಗಾಗಿ, ಬಕೆಟ್ಟು ಕೊಡಪಾನಕ್ಕಾಗಿ ಆಗುವುದೇನಿದ್ದರೂ ಜಡೆ ಜಗಳ ಎಂದು ನೀವಂದುಕೊಂಡಿದ್ದರೆ ಅದು ಖಂಡಿತಾ ತಪ್ಪು. ಇತಿಹಾಸದ ಈ ಖ್ಯಾತ ಘಟನೆ ನೋಡಿ- ಯಕಃಶ್ಚಿತ್ ಒಂದು ಬಕೆಟ್ ಕಾರಣಕ್ಕೆ 2000ಕ್ಕೂ ಅಧಿಕ ಸೈನಿಕರು ಪ್ರಾಣ ತೆತ್ತರು. 30,000ಕ್ಕೂ ಅಧಿಕ ಸೈನಿಕರು ಯುದ್ಧ ಮಾಡಿದರು!

'ದಿ ವಾರ್ ಆಫ್ ಓಕ್ ಬಕೆಟ್' ಎಂದೇ ಖ್ಯಾತಿ ಪಡೆದಿರುವ ಈ ಘಟನೆ ನಡೆದಿದ್ದು ಇಟಲಿಯಲ್ಲಿ. 1325ರಲ್ಲಿ ಮೊಡೆನಾದ ಸೈನಿಕರ ಗುಂಪು ಬೊಲೊಗ್ನಾ ನಗರವನ್ನು ಪ್ರವೇಶಿಸಿದಾಗ ಮತ್ತು ನಗರದ ಮಧ್ಯಭಾಗದಲ್ಲಿರುವ ಬಾವಿಯ ಬಳಿ ಇರಿಸಲಾಗಿದ್ದ ಬಕೆಟ್ ಅನ್ನು ಸುಖಾಸುಮ್ಮನೆ ಕದ್ದಾಗ ಯುದ್ಧ ಪ್ರಾರಂಭವಾಯಿತು. ಮೊಡೆನಾ ಮತ್ತು ಬೊಲೆಗ್ನಾ ಇಟಲಿಯ ಎರಡು ಪ್ರತಿಸ್ಪರ್ಧಿ ನಗರಗಳು. 


 

ಬೊಲೊಗ್ನಾ ಈ ಕ್ರಮವನ್ನು ನೆರೆಯ ನಗರ ಎಸಗಿದ ಅವಮಾನವೆಂದು ಪರಿಗಣಿಸಿದರು ಮತ್ತು ಅವರು ಬಕೆಟ್ ಅನ್ನು ಹಿಂದಿರುಗಿಸಲು ಮೊಡೆನಾ ಸೈನಿಕರನ್ನು ಕೇಳಿದರು. ಈ ಪ್ರಸ್ತಾಪವನ್ನು ಮೊಡೆನಾ ನಗರವು ನಿರಾಕರಿಸಿತು, ಅದು ಬೊಲೊಗ್ನಾ ಅಧಿಕಾರಿಗಳಿಗೆ ಯಾವುದೇ ಆಯ್ಕೆಯನ್ನು ಬಿಡಲಿಲ್ಲ ಮತ್ತು ಆದ್ದರಿಂದ ಅವರು ತಮ್ಮ ನೆರೆಯವರ ವಿರುದ್ಧ ಯುದ್ಧವನ್ನು ಘೋಷಿಸಿದರು. ಈ ಯುದ್ಧಕ್ಕೆ ಪ್ರಮುಖ ಕಾರಣವಾದ ಬಕೆಟ್ ಈಗಲೂ ಇಟಲಿಯ ಮೊಡೆನಾದಲ್ಲಿನ ಚರ್ಚ್‌ನಲ್ಲಿ ಇರಿಸಲಾಗಿದೆ.

ಜಪ್ಪೋಲಿನಾ ನಗರದಲ್ಲಿ ಈ ಹೋರಾಟ ನಡೆದ ಕಾರಣ ಇದನ್ನು ಜಪ್ಪೊಲಿನಾ ಯುದ್ಧ ಎಂದೇ ಕರೆಯಲಾಗುತ್ತದೆ. ಬೊಲೊಗ್ನಾ 30,000 ಪದಾತಿ ಮತ್ತು 2,000 ಅಶ್ವಸೈನ್ಯವನ್ನು ಒಳಗೊಂಡ ಸೈನ್ಯವನ್ನು ಹೊಂದಿತ್ತು. ಇದಕ್ಕೆ ವಿರುದ್ಧವಾಗಿ, ಮೊಡೆನಾ ಕೇವಲ 5,000 ಪದಾತಿದಳ ಮತ್ತು 2,000 ಅಶ್ವಸೈನ್ಯವನ್ನು ಹೊಂದಿತ್ತು. ಸಂಖ್ಯೆಯಲ್ಲಿ ಭಾರೀ ಅಂತರವಿದ್ದರೂ, ಮೊಡೆನಾ ಸೈನ್ಯವು ಬೊಲೊಗ್ನಾದ ಸೈನ್ಯವನ್ನು ಯುದ್ಧಭೂಮಿಯಲ್ಲಿ ಸೋಲಿಸಿತು. ಈ ಯುದ್ಧದಲ್ಲಿ, ಬೊಲೊಗ್ನಾದಿಂದ 1500 ಸೈನಿಕರು ಮತ್ತು ಮೊಡೆನಾದಿಂದ 500 ಸೈನಿಕರು ಕೊಲ್ಲಲ್ಪಟ್ಟರು. ಬೊಲೋಗ್ನಾದ ಕೋಟೆಕೊತ್ತಲಗಳನ್ನು ಹಾಳುಗೆಡವಿದರು.

ಇಲ್ನೋಡಿ, ಅನಂತ್ ಅಂಬಾನಿಯ 200 ಕೋಟಿ ಮೌಲ್ಯದ ವಾಚ್‌ಗಳ ಸಂಗ್ರಹ!
 

ಸುಮಾರು 2,000 ಜನರ ಮರಣದ ನಂತರ, ಮೊಡೆನಾ ಮತ್ತು ಬೊಲೊಗ್ನಾ ನಗರಗಳ ನಡುವೆ ಒಪ್ಪಂದವನ್ನು ತರಲಾಯಿತು. ಇದರ ಅಡಿಯಲ್ಲಿ, ಮೊಡೆನಾ ಬಕೆಟ್ ಹೊರತುಪಡಿಸಿ ಬೊಲೊಗ್ನಾದಿಂದ ಲೂಟಿ ಮಾಡಿದ ಸರಕುಗಳನ್ನು ಹಿಂದಿರುಗಿಸಿತು. ಆದರೆ, ಬೊಲೊಗ್ನಾವನ್ನು ಅವಮಾನಿಸಲು ಯುದ್ಧ ಮುಗಿಸಿ ಹಿಂದಿರುಗುವಾಗ ಮೊಡೆನಾ ಸೈನಿಕರು ಮತ್ತೊಂದು ಬಕೆಟನ್ನು ಕೂಡಾ ತೆಗೆದುಕೊಂಡು ಹೋದರು. ಇಂದಿಗೂ ಈ ಬಕೆಟ್ ಮೊಡೆನ್ನಾ ನಗರದಲ್ಲೇ ಇದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಆಕಾಶಕ್ಕೇ ಕನ್ನಡಿ ಹಾಕಿ ರಾತ್ರಿಗೆ ಗುಡ್‌ ಬೈ ಸಾಹಸ!
PUBG ಗೇಮ್​ನಿಂದ 6ನೇ ಮಗುವಿನತ್ತ ಪಯಣ: ಅಕ್ರಮವಾಗಿ ಭಾರತಕ್ಕೆ ಬಂದಿದ್ದಾಕೆ ಮತ್ತೊಮ್ಮೆ ಗರ್ಭಿಣಿ!