
ಸೌದಿ ಅರೇಬಿಯಾದ ರಾಜ ಮನೆತನದ ರಾಜಕುಮಾರನೊಬ್ಬನಿಗೆ ಮೊನ್ನೆ 36 ವರ್ಷ ತುಂಬಿತು. ಎಲ್ಲರೂ ಅದನ್ನು ಭರ್ಜರಿಯಾಗಿ ಆಚರಿಸಿದರು. ಆದರೆ ಅದನ್ನು ನೋಡಲು ಆ ರಾಜಕುಮಾರ ಎಚ್ಚರವಿರಲಿಲ್ಲ. ಅವನು ಸುದೀರ್ಘ ನಿದ್ರೆಯಲ್ಲಿದ್ದ. ಅಂತಿಂಥ ನಿದ್ರೆಯಲ್ಲ, 20 ವರ್ಷಗಳಿಂದ ಆತ ನಿದ್ರೆ ಅಥವಾ ಕೋಮಾದಲ್ಲಿದ್ದಾನೆ. ಹೀಗಾಗಿಯೇ ಅವನನ್ನು ʼಸ್ಲೀಪಿಂಗ್ ಪ್ರಿನ್ಸ್ʼ ಅಥವಾ ನಿದ್ರಿಸುವ ರಾಜಕುಮಾರ ಎಂದು ಕರೆಯಲಾಗುತ್ತೆ. ಯಾರಿವನು? ಬನ್ನಿ ತಿಳಿಯೋಣ.
"ಸ್ಲೀಪಿಂಗ್ ಪ್ರಿನ್ಸ್" ಎಂದೇ ಪ್ರಸಿದ್ಧನಾಗಿರುವ ಸೌದಿ ರಾಜಮನೆತನದ ಸದಸ್ಯ, ಪ್ರಿನ್ಸ್ ಅಲ್-ವಲೀದ್ ಬಿನ್ ಖಲೀದ್ ಬಿನ್ ತಲಾಲ್ ಏಪ್ರಿಲ್ 18, 2025ರಂದು ತಮ್ಮ 36ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಬೇಕಿತ್ತು. ಅವರ ಪರವಾಗಿ ಕುಟುಂಬದ ಎಲ್ಲರೂ ಆಚರಿಸಿದರು. ನಿದ್ರೆಯಲ್ಲಿರುವ ಪ್ರಿನ್ಸ್ ಮುಂದೆ ಕೇಕ್ ಕಟ್ ಮಾಡಿದರು. ಹುಟ್ಟುಹಬ್ಬದ ನಂತರ 'ಸ್ಲೀಪಿಂಗ್ ಪ್ರಿನ್ಸ್'ನ ಫೋಟೋಗಳನ್ನು ಕುಟುಂಬದವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡರು. ಇದು ವ್ಯಾಪಕ ಗಮನ ಸೆಳೆಯಿತು.
2005ರಲ್ಲಿ ನಡೆದ ಒಂದು ಕಾರು ಅಪಘಾತದಲ್ಲಿ ಈತನ ತಲೆಗೆ ಬಲವಾದ ಏಟು ಬಿತ್ತು. ಕೋಮಾಗೆ ಹೋದ. ನಂತರ ಈ ರಾಜಕುಮಾರ ಕೋಮಾದಲ್ಲಿದ್ದಾನೆ. ಈ ಮಾಯಾನಿದ್ರೆಗೆ ಈಗ ಇಪ್ಪತ್ತು ವರ್ಷ. ಈತನನ್ನು ಜೀವರಕ್ಷಕ ಸಾಧನಗಳ ಮೇಲೆ ಇಡಲಾಗಿದೆ. ಇದರಿಂದ ಏನೂ ಪ್ರಯೋಜನವಿಲ್ಲ ಎಂದಿದ್ದಾರೆ ವೈದ್ಯರು. ಆದರೆ ವೈದ್ಯಕೀಯ ಸಲಹೆಯ ಹೊರತಾಗಿಯೂ ಅವನ ತಂದೆ ಆತನನ್ನು ಹಾಸಿಗೆಯ ಮೇಲೆ ಉಳಿಸಿಕೊಂಡದ್ದಾರೆ. ಇವನು ಸೌದಿ ಅರೇಬಿಯಾದ ಸಂಸ್ಥಾಪಕ ಕಿಂಗ್ ಅಬ್ದುಲಜೀಜ್ ಅವರ ಮರಿಮೊಮ್ಮಗ. ರಿಯಾದ್ನಲ್ಲಿ ಒಂದು ಐಷಾರಾಮಿ ಮನೆಯಲ್ಲಿ ಲೈಫ್ ಸಪೋರ್ಟ್ನಲ್ಲಿದ್ದಾನೆ. ಯಾವತ್ತಾದರೊಂದು ದಿನ ಆತ ನಿದ್ರೆ ತಿಳಿದೇಳಬಹುದು ಎಂದು ಅವನ ಕುಟುಂಬಕ್ಕೆ ಇನ್ನೂ ಆಶೆಯಿದೆ.
ರೋಯಾ ನ್ಯೂಸ್ ವರದಿ ಮಾಡಿದಂತೆ ರಾಜಕುಮಾರನಿಗೆ ವೆಂಟಿಲೇಟರ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕಳೆದ ಎರಡು ದಶಕಗಳಿಂದ ಫೀಡಿಂಗ್ ಟ್ಯೂಬ್ ಮೂಲಕ ಆಹಾರವನ್ನು ನೀಡಲಾಗುತ್ತಿದೆ. 2019ರಲ್ಲಿ ಈತ ಬೆರಳನ್ನು ಸ್ವಲ್ಪ ಎತ್ತಿದ. ತಲೆಯನ್ನು ಕೊಂಚ ಚಲಿಸಿದ. ಹೀಗೆ ಅರಿವಿನ ಸ್ವಲ್ಪ ಲಕ್ಷಣಗಳನ್ನು ತೋರಿಸಿದ. ಆದರೆ ಪೂರ್ಣ ಪ್ರಜ್ಞೆಗೆ ಮರಳಲಿಲ್ಲ. ಜೀವರಕ್ಷಕ ತೆಗೆಯಲು ವೈದ್ಯಕೀಯ ಸಲಹೆ ನೀಡಿದಾಗ ಅವನ ತಂದೆ ಖಲೀದ್ ಬಿನ್ ತಲಾಲ್ ಅಲ್ ಸೌದ್, "ಅವನು ಅಪಘಾತದಲ್ಲಿ ಸಾಯಬೇಕೆಂದು ದೇವರು ಬಯಸಿದ್ದರೆ ಅವನು ಈಗಾಗಲೇ ಸಮಾಧಿಯಲ್ಲಿ ಇರುತ್ತಿದ್ದ" ಎಂದರು.
Shakti Dubey: ಬನಾರಸ್ ಹಿಂದು ವಿವಿ ವಿದ್ಯಾರ್ಥಿನಿ, ಪೊಲೀಸಪ್ಪನ ಮಗಳು ದೇಶಕ್ಕೆ ನಂ.1
ರಾಜಕುಮಾರ ಅಲ್-ವಲೀದ್ ಬಿನ್ ಖಲೀದ್ ಬಿನ್ ತಲಾಲ್, ಸೌದಿ ರಾಜಮನೆತನದ ಸದಸ್ಯನಾಗಿದ್ದರೂ ಪ್ರಸ್ತುತ ರಾಜನ ನೇರ ಮಗ ಅಥವಾ ಸಹೋದರನಲ್ಲ. ಇವನ ಅಜ್ಜ ರಾಜಕುಮಾರ ತಲಾಲ್ ಬಿನ್ ಅಬ್ದುಲಜೀಜ್ ಅಲ್ ಸೌದ್, ಆಧುನಿಕ ಸೌದಿ ಅರೇಬಿಯಾದ ಸ್ಥಾಪಕ ದೊರೆ ರಾಜ ಅಬ್ದುಲ್ ಅಜೀಜ್ ಅಲ್ ಸೌದ್ ಅವರ ಅನೇಕ ಪುತ್ರರಲ್ಲಿ ಒಬ್ಬರು. ಈ ವಂಶಾವಳಿಯ ಮೂಲಕ ನೋಡಿದರೆ ರಾಜಕುಮಾರ ಅಲ್-ವಲೀದ್, ಹಿರಿಯ ರಾಜ ಅಬ್ದುಲ್ ಅಜೀಜ್ ಅವರ ಮರಿಮೊಮ್ಮಗ. ಪ್ರಸ್ತುತ ಆಡಳಿತಗಾರ ರಾಜ ಸಲ್ಮಾನ್ ಬಿನ್ ಅಬ್ದುಲ್ ಅಜೀಜ್ ಅಲ್ ಸೌದ್ ಈತನಿಗೆ ಮಾವ ಆಗಬೇಕು.
ಕನ್ನಡಿಗನ ಮೇಲೆ ಹಲ್ಲೆಗೆ ವಾಯುಪಡೆ ವಿಷಾದ! ವಿಂಗ್ ಕಮಾಂಡರ್ ಕೆಲಸ ಕುತ್ತು?
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ