
ವಾಯು ಮಾಲೀನ್ಯ ಹೆಚ್ಚಿದಷ್ಟೂ ಕೊರೋನಾ ವೈರಸ್ನಿಂದಾಗಿರುವುದಕ್ಕಿಂತಲೂ ಹೆಚ್ಚು ಸಾವು ನೋವು ಹವಾಮಾನ ವೈಪರೀತ್ಯದಿಂದ ಉಂಟಾಗಲಿದೆ ಎಂದು ಬಿಲ್ಗೆಟ್ಸ್ ಹೇಳಿದ್ದಾರೆ.
ಕೊರೋನಾ ವೈರಸ್ನಿಂದಾಗಿ ಈ ವರ್ಷ ಉಂಟಾಗಿರುವ ಸಾವಿಗಿಂತಲೂ ಭವಿಷ್ಯದಲ್ಲಿ ಹವಾಮಾನ ವೈಪರೀತ್ಯದಿಂದ ಉಂಟಾಗುವ ಸಾವು ಹೆಚ್ಚಾಗಲಿರಲಿದೆ ಎಂದಿದ್ದಾರೆ.
ಜಗತ್ತಿಗೇ ಕೊರೋನಾ ಔಷಧ ನೀಡಲು ಭಾರತದ ಫಾರ್ಮಸಿಗಳಿಂದ ಸಾಧ್ಯ: ಬಿಲ್ಗೇಟ್ಸ್
2060ರಲ್ಲಿ ಹವಾಮಾನ ಬದಲಾವಣೆಯೇ ಕೊರೋನಾದಷ್ಟು ಭೀಕರವಾಗಲಿದೆ. 2100ಕ್ಕಾಗುವಾಗ ಹವಾಮಾನ ಬದಲಾವಣೆ ತಂದೊಡ್ಡುವ ಸಾವು ನೋವು 5 ಪಟ್ಟು ಭೀಕರವಾಗಿರಲಿದೆ ಎಂದಿದ್ದಾರೆ.
ಈಗ ಕೊರೋನಾದಿಂದಾಗಿ ಜಗತ್ತು ಎದುರಿಸುತ್ತಿರುವ ಆರ್ಥಿಕ ಹೊಡೆತಕ್ಕಿಂತ ಹವಾಮಾನ ಬದಲಾವಣೆ ನೀಡುವ ಹೊಡೆತ ಹೆಚ್ಚು ಬಲವಾಗಿರಲಿದೆ. ದೇಶಗಳು ತಮ್ಮ ಜಿಡಿಪಿಯನ್ನು ಹವಾಮಾನ ಬದಲಾವಣೆಯಿಂದಾಗುವ ಅನಾಹುತಗಳನ್ನು ಎದುರಿಸುವುದಕ್ಕೇ ವ್ಯಯಿಸುವ ಸ್ಥಿತಿ ಬರಲಿದೆ ಎಂದಿದ್ದಾರೆ.
ಬಡ ರಾಷ್ಟ್ರಗಳಿಗೆ ಉಚಿತ ಕೊರೋನಾ ಲಸಿಕೆ; $10 ಬಿಲಿಯನ್ ಹೂಡಿಕೆ ಮಾಡಿದ ಬಿಲ್ ಗೇಟ್ಸ್!
ಜಗತ್ತೇ ಕೊರೋನಾ ವೈರಸ್ನಿಂದಾಗಿ ಸಂಕಷ್ಟಕ್ಕೆ ಬಿದ್ದಿದ್ದು, ಜನರು ಮನೆಯೊಳಗೇ ಉಳಿದುಕೊಂಡಿದ್ದಾರೆ. ಉದ್ಯೋಗ ಭದ್ರತೆ ಸೇರಿ ಹಲವು ಸವಾಲುಗಳನ್ನು ಜನರು ಎದುರಿಸುತ್ತಿದ್ದಾರೆ.
ಜನರ ಈ ಎಲ್ಲ ಜೀವನ ಹೋರಾಟದ ಮಧ್ಯೆ ಸ್ವಲ್ಪ ನೆಮ್ಮದಿಯ ವಿಚಾರವೆಂದರೆ ನಮ್ಮ ನಿಸರ್ಗ ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ. ಕೊರೋನಾ ಸಾವು ನೋವಿನ ಮಧ್ಯೆ ಇದೊಂದೇ ಆಶಾದಾಯಕ ವಿಚಾರ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ