ಶ್ರೀಲಂಕಾ ಸಂಸತ್ ಚುನಾವಣೆ: ರಾಜಪಕ್ಷೆ ಸಹೋದರರಿಗೆ ಭರ್ಜರಿ ಗೆಲುವು

Suvarna News   | Asianet News
Published : Aug 07, 2020, 12:10 PM ISTUpdated : Aug 07, 2020, 12:47 PM IST
ಶ್ರೀಲಂಕಾ ಸಂಸತ್ ಚುನಾವಣೆ: ರಾಜಪಕ್ಷೆ ಸಹೋದರರಿಗೆ ಭರ್ಜರಿ ಗೆಲುವು

ಸಾರಾಂಶ

ಶ್ರೀಲಂಕಾದ ಸಂಸದೀಯ ಚುನಾವಣೆಯಲ್ಲಿ ಬಲಿಷ್ಠ ರಾಜಪಕ್ಷೆ ಸಹೋದರರು ಜಯ ಗಳಿಸಿದ್ದಾರೆ. ಚುನಾವಣೆಯ ಅಂತಿಮ ಫಲಿತಾಂಶದ ಪ್ರಕಾರ ರಾಜಪಕ್ಷೆ ಸಹೋದರರು ಗೆಲುವಿನ ನಗು ಬೀರಿದ್ದಾರೆ.

ಶ್ರೀಲಂಕಾದ ಸಂಸದೀಯ ಚುನಾವಣೆಯಲ್ಲಿ ಬಲಿಷ್ಠ ರಾಜಪಕ್ಷೆ ಸಹೋದರರು ಜಯ ಗಳಿಸಿದ್ದಾರೆ. ಚುನಾವಣೆಯ ಅಂತಿಮ ಫಲಿತಾಂಶದ ಪ್ರಕಾರ ರಾಜಪಕ್ಷೆ ಸಹೋದರರು ಗೆಲುವಿನ ನಗು ಬೀರಿದ್ದಾರೆ.

ಶ್ರೀಲಂಕಾ ಪ್ರಧಾನಿ ಮಹೀಂದ್ರ ರಾಜಪಕ್ಷೆ ಅವರ ಶ್ರೀಲಂಕಾ ಪೊದುಜನ ಪಾರ್ಟಿ 145 ಸ್ಥಾನಗಳನ್ನು ಗೆದ್ದಿದ್ದು, 225 ಸ್ಥಾನಗಳಲ್ಲಿ  ಕೆಲವರು ಎಸ್‌ಎಲ್‌ಪಿಪಿ ಜೊತೆ ಮೈತ್ರಿ ಮಾಡಲಿದ್ದಾರೆ ಎಂಬುದು ತಿಳಿದು ಬಂದಿದೆ.

ಗರ್ಭದಲ್ಲೇ 'ನೇಣು' ಬಿಗಿದುಕೊಂಡ ಕಂದ, ವೈದ್ಯರು ಹೀಗೆ ಹೊರಗೆಳೆದರು!

ಪಕ್ಷದ ಪ್ರಮುಖ ಎದುರಾಳಿ ಕೇವಲ 54 ಸ್ಥಾನಗಳನ್ನು ಗಳಿಸಿದ್ದು, ಶ್ರೀಲಂಕಾದ ಶೇ.75 ಜನ ಮತ ಚಲಾಯಿಸಿದ್ದಾರೆ. ಪ್ರಧಾನಿ ಪ್ರಮಾಣ ವಚನ ಸ್ವೀಕರಿಸಲಿದ್ದು, ಅಧ್ಯಕ್ಷ ಗೊಟಬಯಾ ರಾಜಪಕ್ಷೆ ಹಾಗೂ ಈಗ ಸಿಕ್ಕಿರುವ ಬಹುಮತದ ಗೆಲುವಿನಿಂದ ಸಂವಿಧಾನ ಬದಲಿಸಿ, ರಾಜವಂಶದ ಆಡಳಿತ ಮುಂದುವರಿಯುವ ಸಾಧ್ಯತೆ ಇದೆ.

ಶ್ರೀಲಂಕಾ ಪೀಪಲ್ ಫ್ರಂಟ್ ಮತ್ತೊಮ್ಮೆ ಗೆಲುವು ಸಾಧಿಸಲಿದೆ ಎಂದು ಗೊಟಬಯಾ ಪಕ್ಷ ಟ್ವೀಟ್ ಮೂಲಕ ತಿಳಿಸಿದ್ದಾರೆ. ನನ್ನ 'ಸಮೃದ್ಧಿಯ ದೃಷ್ಟಿಕೋನದ ನೀತಿಯ ಅನುಷ್ಠಾನಕ್ಕೆ ಅನುವು ಮಾಡಿಕೊಡುವ ಸಂಸತ್ತನ್ನು ಹೊಂದುವ ನಿರೀಕ್ಷೆ ಇದೆ. ನಾಳೆ ಈ ನಿರೀಕ್ಷೆ ವಾಸ್ತವವಾಗಲಿದೆ ಎಂಬ ನಂಬಿಕೆಯಿದೆ ಎಂದು ಟ್ವೀಟ್ ಮಾಡಿದ್ದಾರೆ.

ಲೆಕ್ಕ ತಂದಿಟ್ಟ ಆತಂಕ; ಪ್ರತಿ 15 ಸೆಕೆಂಡಿಗೆ ಒಬ್ಬರು ಕೊರೋನಾಕ್ಕೆ ಬಲಿ!

ಇದೀಗ ರಾಜಪಕ್ಷ ಸಹೋದರರು ತಮಿಳು ಪ್ರತ್ಯೇಕತಾವಾದಿಗಳನ್ನು ಇನ್ನಷ್ಟು ಮಟ್ಟಹಾಕಲಿದ್ದಾರೆ ಎಂಬ ಮಾತುಗಳೂ ಕೇಳಿ ಬಂದಿವೆ. ವಿರೋಧ ಪಕ್ಷ ಆಡಳೀತ ಪಕ್ಷ ಭ್ರಷ್ಟ ಎಂದೂ ಆರೋಪಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ನೆತನ್ಯಾಹು ಪ್ರಧಾನಿ ಮೋದಿಗೆ ಕರೆ ಮಾಡಿ ಮಾತುಕತೆ: ಭಯೋತ್ಪಾದನೆ ವಿರುದ್ಧ ದೊಡ್ಡ ನಿರ್ಧಾರ!
ಸ್ಲಿಮ್ ಆಗೋಕೆ ಹೋಗಿ ಆರೋಗ್ಯವೇ ಹೋಯ್ತು: 11691 ರೂ ಪಾವತಿಸಿ ತೂಕ ಇಳಿಕೆ ಇಂಜೆಕ್ಷನ್ ಪಡೆದಾಕೆಗೆ ಆಘಾತ