ನಾನು ಪ್ರಧಾನಿ ಆಗಲು ಭಾರತೀಯ ಉದ್ಯಮಿ ಕಾರಣ: ನೇಪಾಳ ಪ್ರಧಾನಿ ಹೇಳಿಕೆಗೆ ವಿಪಕ್ಷಗಳ ತೀವ್ರ ವಿರೋಧ

Published : Jul 07, 2023, 06:30 AM IST
ನಾನು ಪ್ರಧಾನಿ ಆಗಲು ಭಾರತೀಯ ಉದ್ಯಮಿ ಕಾರಣ: ನೇಪಾಳ ಪ್ರಧಾನಿ ಹೇಳಿಕೆಗೆ ವಿಪಕ್ಷಗಳ ತೀವ್ರ ವಿರೋಧ

ಸಾರಾಂಶ

ನೇಪಾಳ ಪ್ರಧಾನಿ ಪುಷ್ಪ ಕಮಲ್ ದಹಲ್ ಪ್ರಚಂಡ ಅವರು, ತಾವು ಪ್ರಧಾನಿ ಆಗಲು ಭಾರತ ಮೂಲದ ಉದ್ಯಮಿ ಕಾರಣ ಎಂದು ಹೇಳಿಕೆ ನೀಡಿರುವುದು ನೇಪಾಳದಲ್ಲಿ ಭಾರಿ ವಿವಾದಕ್ಕೆ ಕಾರಣವಾಗಿದೆ.

ಕಾಠ್ಮಂಡು: ನೇಪಾಳ ಪ್ರಧಾನಿ ಪುಷ್ಪ ಕಮಲ್ ದಹಲ್ ಪ್ರಚಂಡ ಅವರು, ತಾವು ಪ್ರಧಾನಿ ಆಗಲು ಭಾರತ ಮೂಲದ ಉದ್ಯಮಿ ಕಾರಣ ಎಂದು ಹೇಳಿಕೆ ನೀಡಿರುವುದು ನೇಪಾಳದಲ್ಲಿ ಭಾರಿ ವಿವಾದಕ್ಕೆ ಕಾರಣವಾಗಿದೆ. ಪ್ರಚಂಡ ರಾಜೀನಾಮೆಗೆ ವಿಪಕ್ಷಗಳು ಆಗ್ರಹಿಸಿವೆ. ಆದರೆ ರಾಜೀನಾಮೆಗೆ ಪ್ರಚಂಡ ನಿರಾಕರಿಸಿದ್ದಾರೆ. ಸಮಾರಂಭವೊಂದರಲ್ಲಿ ಮಾತನಾಡಿದ ಪ್ರಚಂಡ,‘ನಾನು ಇಲ್ಲಿವರೆಗೆ ಬಂದಿರುವುದಕ್ಕೆ ಭಾರತ ಮೂಲದ ಉದ್ಯಮಿ ಸರ್ದಾರ್‌ ಪ್ರೀತಮ್‌ ಸಿಂಗ್‌ ಅವರ ಕೊಡುಗೆ ಅಪಾರ. ಅವರು ಹಲವಾರು ಬಾರಿ ದೆಹಲಿಯಲ್ಲಿ ಹಾಗೂ ಕಾಠ್ಮಂಡುವಿನಲ್ಲಿ ಸಭೆ ನಡೆಸಿ ನನಗೆ ಸಹಾಯ ಮಾಡಿದ್ದಾರೆ. ಅದರಿಂದಾಗಿ ನಾನು ಪ್ರಧಾನಿ ಆಗಲು ಸಾಧ್ಯವಾಗಿದೆ ಎಂದರು.

ಇದಕ್ಕೆ ಕೆಂಡಾಮಂಡಲಗೊಂಡ ನೇಪಾಳ ವಿಪಕ್ಷಗಳು,ನಮಗೆ ದೆಹಲಿಯಿಂದ ಆಯ್ಕೆಯಾದ ಪ್ರಧಾನಿ ಬೇಕಿಲ್ಲ. ನೇಪಾಳದ ಆಂತರಿಕದಲ್ಲಿ ಭಾರತದ ಹಸ್ತಕ್ಷೇಪ ಇರುವುದು ಬೇಡ. ಪ್ರಚಂಡರಿಂದ ದೇಶದ ಸಾರ್ವಭೌಮತೆಗೆ ಧಕ್ಕೆ ಬಂದಿದೆ. ಅವರು ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿವೆ.

ನೇಪಾಳ ಜೊತೆ ವಿವಿಧ 7 ಕ್ಷೇತ್ರಗಳ ಒಪ್ಪಂದಕ್ಕೆ ಪ್ರಧಾನಿ ಮೋದಿ- ಪ್ರಚಂಡ ಸಹಿ

ಚೀನಾ ಬೆಂಬಲಿತ ಒಲಿ ಟೀಮ್‌ಗೆ ಶಾಕ್‌, ರಾಮಚಂದ್ರ ಪೌದೆಲ್‌ ನೇಪಾಳದ ರಾಷ್ಟ್ರಪತಿಯಾಗಿ ಆಯ್ಕೆ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪುರುಷರ ಕೊರತೆ: ಈ ದೇಶದಲ್ಲಿ ಗಂಡನ ಬಾಡಿಗೆಗೆ ಪಡೆಯುತ್ತಾರೆ ಹೆಣ್ಣು ಮಕ್ಕಳು
ಅಸ್ವಸ್ಥ ಖಲೀದಾ ಜಿಯಾ ಹೆಚ್ಚಿನ ಚಿಕಿತ್ಸೆಗೆ ನಾಳೆ ಲಂಡನ್‌ಗೆ