ಜಸ್ಟಿನ್ ಟ್ರುಡೋಗೆ ಭಾರತದಲ್ಲಿ ಅವಮಾನ, ಕೆನಡಾದಲ್ಲಿ ವಿಪಕ್ಷಗಳ ಹೋರಾಟ

Sep 12, 2023, 11:47 PM IST

ನವದೆಹಲಿ(ಸೆ.12) ಜಿ20 ಶೃಂಗಸಭೆಗೆ ಆಗಮಿಸಿದ ಕೆನಡಾ ಪ್ರಧಾನಿ ಜಸ್ಟಿನ್ ಟುಡ್ರೋಗೆ ಖಡಕ್ ಎಚ್ಚರಿಕೆ ನೀಡಿದ ಘಟನೆ ಕೆನಡಾದಲ್ಲಿ ತೀವ್ರ ಹೋರಾಟಕ್ಕೆ ಕಾರಣವಾಗಿದೆ. ಖಲಿಸ್ತಾನಿ ಹೋರಾಟ, ಹಿಂಸೆಗೆ ಪ್ರಚೋದನೆ, ಉಗ್ರರ ಜೊತೆಗೆ ಲಿಂಕ್, ಕೆನಡಾ ಹಿಂದೂ ದೇವಸ್ಥಾನದ ಮೇಲೆ ದಾಳಿ, ಭಾರತೀಯ ರಾಯಭಾರ ಅಧಿಕಾರಿಗಳ ಟಾರ್ಗೆಟ್ ಮಾಡುತ್ತಿರುವ ಖಲಿಸ್ತಾನಿಗಳನ್ನು ನಿಯಂತ್ರಿಸಬೇಕು ಎಂದು ಎಚ್ಚರಿಕೆ ನೀಡಿದ್ದರು.  ಇದರ ಬೆನ್ನಲ್ಲೇ ಕೆನಡಾ ಮಾಧ್ಯಮಗಳು, ವಿಪಕ್ಷಗಳು ಹೋರಾಟ ನಡೆಸುತ್ತಿದೆ.  2018ರ ಬಳಿಕ ಇದೀಗ ಮತ್ತೆ ಕೆನಡಾ ಪ್ರಧಾನಿಗೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.