ಬಡಪಾಯಿ ಕುರಿ & ಹುಲಿ ಆಟ ಶುರು, ದೊಡ್ಮನೆಯಲ್ಲಿ ಉಳೀತಾನಾ ಹಳ್ಳಿ ಹೈದ ಹನುಮಂತ!?

Oct 21, 2024, 3:29 PM IST

ಬಿಗ್ ಬಾಸ್ ಮನೆಯಿಂದ ಲಾಯರ್ ಜಗದೀಶ್ ಔಟ್ ಆದ ಮೇಲೆ ಇನ್ಮೇಲೆ ಶೋ ನೋಡಲ್ಲ ಅಂತ ಅನೇಕ ವೀಕ್ಷಕರು ಫಿಕ್ಸ್ ಆಗಿದ್ದಾರೆ. ದೊಡ್ಮನೆಯಲ್ಲಿ ಅಸಲೀ ಎಂಟರ್​​ಟೈನರ್ ಆಗಿದ್ದ ಜಗದೀಶ್ ಹೊರಬಿದ್ದ ನೋಡೋದಕ್ಕಾದ್ರೂ ಇನ್ನೇನಿದೆ ಅನ್ನೋದು ಜನರ ಕಂಪ್ಲೆಂಟ್. ಆದ್ರೆ ಲಾಯರ್ ಸ್ಥಾನ ನಾನು ತುಂಬ್ತಿನಿ ಅಂತ ಹೇಳ್ತಾ ಎಂಟ್ರಿ ಕೊಟ್ಟಿದ್ದಾನೆ ಸಿಂಗರ್ ಹನುಮಂತ.

ಯೆಸ್ ಬಿಗ್ ಬಾಸ್ ಸೀಸನ್​-11ನಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಕ್ತಾ ಇವೆ. ಈ ವಾರ ಬಿಗ್ ಬಾಸ್​​ ಮನೆಯಿಂದ ಇಬ್ಬರು ಸ್ಪರ್ಧಿಗಳನ್ನ ಎವಿಕ್ಷನ್ ಮಾಡಲಾಗಿದೆ. ಹೆಣ್ಣುಮಕ್ಕಳ ಬಗ್ಗೆ ಅವಹೇಳನಕಾರಿ ಪದ ಬಳಸಿದ್ದಕ್ಕೆ ಲಾಯರ್ ಜಗದೀಶ್​​ರನ್ನ ಹೊರಹಾಕಿದ್ರೆ, ದೈಹಿಕ ಹಲ್ಲೆ ಮಾಡಿದ ರಂಜಿತ್​ರನ್ನೂ ಬಿಗ್ ಬಾಸ್ ಕಿಕ್ ಔಟ್ ಮಾಡಿದ್ದಾರೆ. 

ಅಸಲಿಗೆ ಈ ಸಾರಿಯ ಬಿಗ್ ಬಾಸ್ ಸೀಸನ್​ನಲ್ಲಿ ಹೈಲೈಟ್ ಅಂತ ಇದ್ದಿದ್ದೇ ಜಗದೀಶ್. ಕಂಡಕಂಡವರ ಜೊತೆಗೆ ಕಾಲು ಕೆರೆದುಕೊಡು ಜಗಳ ಆಡ್ತಾ, ಲಾಯರ್ ಪಾಯಿಂಟ್​​ಗಳನ್ನ ಹಾಕ್ತಾ ಇದ್ದ ಜಗ್ಗಿ ಜನರಿಗೆ ಹೇರಳ ಮನರಂಜನೆ ಕೊಟ್ಟಿದ್ರು. ಇಂಥಾ ಜಗದೀಶ್​ ಔಟ್ ಆದಮೇಲೆ ಬಿಗ್ ಬಾಸ್​ನ ಸ್ವಾರಸ್ಯವೇ ಹೋಯ್ತು ಅಂತ ವೀಕ್ಷಕರು ಬೇಸರಗೊಂಡಿದ್ರು. ಆದ್ರೆ ಬಿಗ್ ಬಾಸ್ ಹೊಸತೊಂದು ಟ್ವಿಸ್ಟ್ ಕೊಟ್ಟಿದ್ದಾರೆ. ಪಿಕ್ಚರ್ ಅಭೀ ಬಾಕಿ ಹೈ ಅಂದಿದ್ದಾರೆ. 

ಯೆಸ್ ಬಿಗ್ ಬಾಸ್ ಮನೆಗೆ ಮೊದಲ ವೈಲ್ಡ್ ಕಾರ್ಡ್ ಎಂಟ್ರಿಯಾಗಿದೆ. ಸಿಂಗರ್ ಹನುಮಂತ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ದೊಡ್ಮನೆಯೊಳಗೆ ಕಾಲಿಟ್ಟಿದ್ದಾನೆ. ಅಲ್ಲಿಗೆ ಲಾಯರ್ ಹೋದ್ರೆ ಏನಂತೆ ಈ ಸಿಂಗರ್ ನಿಮಗೆ ಮನರಂಜನೆ ಕೊಡ್ತಾನೆ ಅಂತ ಬಿಗ್ ಬಾಸ್ ಆಶ್ವಾಸನೆ ಕೊಟ್ಟಿದ್ದಾರೆ.

ಹನುಮಂತ, ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಚಿಲ್ಲೂರಬಡ್ನಿ ತಾಂಡಾದಲ್ಲಿ ಕುರಿ ಕಾಯ್ದುಕೊಂಡಿದ್ದ ಕುರಿಗಾಹಿ. ಈ ಕುರಿಗಾಹಿಯ ಹಾಡುವ ಪ್ರತಿಭೆಯನ್ನ ಗುರಿತಿಸಿ ಸರಿಗಮಪ ಟೆಲಿವಿಶನ್​ ಶೋನಲ್ಲ ಅವಕಾಶ ನೀಡಲಾಗಿತ್ತು. ಈತ ತನ್ನ ಮುಗ್ದತೆ, ನಿಷ್ಕಲ್ಮಶ ಮಾತಿನಿಂದ ಎಲ್ಲರ ಮನಸು ಗೆದ್ದಿದ್ದ. 

ಸರಿಗಮಪ ಶೋನಲ್ಲಿ ಹನುಮಂತನೇ ದೊಡ್ಡ ಆಕರ್ಷಣೆ ಆಗಿದ್ದ. ಅಲ್ಲಿಂದ ಹೊರಬಂದವನು ಅನೇಕ ಕಾರ್ಯಕ್ರಮಗಳಿಗೆ ಹೋಗಿ ಗಾಯಕನಾಗಿ ಹೆಸರು ಮಾಡಿದ್ದ. ಹಲವು ಬೇರೆ ಬೇರೆ ಟಿವಿ ಶೋಗಳಲ್ಲೂ ಹನುಮಂತ ಭಾಗಿಯಾಗಿ ಮೋಡಿ ಮಾಡಿದ್ದಾನೆ.

ಇದೀಗ ಬಿಗ್ ಬಾಸ್​​ ಮನೆಗೆ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಹನುಮಂತ ಎಂಟ್ರಿ ಕೊಟ್ಟಿದ್ದು, ದೊಡ್ಮನೆಯಲ್ಲಿ ಹೊಸ ಇನ್ನಿಂಗ್ಸ್ ಶುರುಮಾಡಿದ್ದಾನೆ. ಬಿಗ್ ಬಾಸ್ ಬೇರೆ ಶೋಗಳ ರೀತಿ ಅಲ್ಲವೇ ಇಲ್ಲ. ಇದೇನಿದ್ರೂ ಬುದ್ದಿವಂತರ, ಕಲಾಕಾರರ ಆಟ. ಇಲ್ಲಿ ಈ ಮುಗ್ದ ಹಳ್ಳಿಹೈದ ಹೇಗೆ ಉಳಿತಾನೇ ಅನ್ನೋ ಪ್ರಶ್ನೆ ಎಲ್ಲರಲ್ಲೂ ಹುಟ್ಟಿದೆ.

ಯೆಸ್ ಹನುಮಂತನನ್ನ ಒಳಗೆ ಬರುತ್ತಲೇ ನೇರ ಕ್ಯಾಪ್ಟನ್ ಮಾಡಲಾಗಿದೆ. ಇದು ಬಿಗ್ ಬಾಸ್ ಸ್ಪರ್ಧಿಗಳಿಗೆ ಶಾಕ್ ಕೂಡ ಕೊಟ್ಟಿದೆ. ಇವನೇನು ಕ್ಯಾಪ್ಟನ್ ಶಿಪ್ ಮಾಡ್ತಾನೆ ಅಂತ ಸ್ಪರ್ಧಿಗಳೆಲ್ಲಾ ಆಡಿಕೊಂಡಿದ್ದಾರೆ. ಆದ್ರೆ ಈ ದೊಡ್ಮನೆಯ ಹುಲಿ ಕುರಿ ಆಟದಲ್ಲಿ ಈ ಕುರಿಗಾಹಿ ತನ್ನ ಆಟವನ್ನಂತೂ ಶುರುಮಾಡಿದ್ದಾನೆ.

ಒಟ್ಟಾರೆ ಲಾಯರ್ ಜಗದೀಶ್ ಹೊರಹೋದ ಮೇಲೆ ಬಿಗ್ ಬಾಸ್​​ನಲ್ಲಿ ಸ್ವಾರಸ್ಯವೇ ಇಲ್ಲ ಅಂದುಕೊಂಡವರಿಗೆ ಹನುಮಂತನ ಎಂಟ್ರಿ ಸಮಾಧಾನ ಕೊಟ್ಟಿದೆ. ಈ ಸಿಂಗರ್ ಲಾಯರ್ ಸ್ಥಾನ ತುಂಬ್ತಾನಾ..?ದೊಡ್ಮನೆಯ ಆಟದಲ್ಲಿ ಮನರಂಜನೆ ಕೊಟ್ಟು ಮೋಡಿ ಮಾಡ್ತಾನಾ ಕಾದುನೋಡಬೇಕಿದೆ.