'ಹರ್ಷ ಭುವಿ ಮದುವೆ ನಮ್ಮ ಮನೆ ಮದುವೆ ಅಂತ ಅನ್ಸುತ್ತೆ' ನಿರ್ದೇಶಕ ಯಶವಂತ್‌ ಮಾತುಗಳು

Jun 13, 2022, 10:11 PM IST

'ಕನ್ನಡತಿ' ಧಾರಾವಾಹಿಯನ್ನು ಯಶವಂತ್ ಪಾಂಡು ಅವರು ನಿರ್ದೇಶನ ಮಾಡುತ್ತಿದ್ದು, ಮದುವೆ ಎಪಿಸೋಡ್‌ನ್ನು ಯಾವ ರೀತಿಯಲ್ಲಿ ಚಿತ್ರೀಕರಣ ಮಾಡಬೇಕು ಎಂದುಕೊಳ್ಳಲಾಗಿತ್ತು? ಅಂದುಕೊಂಡಂತೆ ಮದುವೆ ಎಪಿಸೋಡ್ ಶೂಟಿಂಗ್ ಬಂದಿದೆಯಾ? ಸಂಪ್ರದಾಯ ಸೊಗಡಿನ ಬಗ್ಗೆ ಓದುವುದಕ್ಕೂ ಹೇಳುವುದಕ್ಕೂ ಸುಲಭ, ಆದರೆ ಅದನ್ನು ತೆರೆ ಮೇಲೆ ತರುವುದು ನಿಮಗೆ ಎಷ್ಟು ಕಷ್ಟವಾಗಿತ್ತು? ಹರ್ಷ, ಭುವಿ ಮದುವೆ ಹಂತಕ್ಕೆ ಈಗ ಧಾರಾವಾಹಿ ಬಂದು ತಲುಪಿದ್ದು ಪ್ರೇಕ್ಷಕರು ಏನು ಹೇಳುತ್ತಾರೆ? ಪ್ರೇಕ್ಷಕರಿಂದ ಸದಾ ಸಿಗುವ ಪ್ರತಿಕ್ರಿಯೆ, ಬೇಡಿಕೆ ಏನು? ಕನ್ನಡತಿ ಧಾರಾವಾಹಿ ಮುಗಿಯುವುದೇ? ಮುಂತಾದ ಪ್ರಶ್ನೆಗಳಿಗೆ ಮಾಧ್ಯಮಕ್ಕೆ ನಿರ್ದೇಶಕ ಯಶವಂತ್ ಪಾಂಡು ಅವರು ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಇನ್ನು ಸಂಭಾಷಣೆ, ಕತೆ, ಚಿತ್ರಕಥೆಯಿಂದ ಈಗಾಗಲೇ ಕನ್ನಡ ಕಿರುತೆರೆಯಲ್ಲಿ ವಿಭಿನ್ನವಾಗಿ 'ಕನ್ನಡತಿ' ಧಾರಾವಾಹಿ ಗುರುತಿಸಿಕೊಂಡಿದೆ.

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies