ಸಾರಿಗೆ ನೌಕರರ ವಿಚಾರದಲ್ಲಿ ಮಧ್ಯದಲ್ಲಿ ಯಾರೋ ಬಂದು ಕಡ್ಡಿ ಅಲ್ಲಾಡಿಸೋದು ಬೇಡ ಎಂದು ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಪರೋಕ್ಷವಾಗಿ ಕೋಡಿಹಳ್ಳಿ ಚಂದ್ರಶೇಖರ್ಗೆ ಟಾಂಗ್ ನೀಡಿದ್ದಾರೆ.
ಬೆಂಗಳೂರು (ಫೆ. 02): ಸಾರಿಗೆ ನೌಕರರ ವಿಚಾರದಲ್ಲಿ ಬೇರೆಯವರ ಹಸ್ತಕ್ಷೇಪ ಬೇಡ. ಸಾರಿಗೆ ನೌಕರರು ಮತ್ತು ಸಾರಿಗೆ ಸಿಬ್ಬಂದಿ ಕುಟುಂಬದಂತೆ ಇದ್ದೇವೆ. ಮಧ್ಯದಲ್ಲಿ ಯಾರೋ ಬಂದು ಕಡ್ಡಿ ಅಲ್ಲಾಡಿಸೋದು ಬೇಡ. ನೌಕರರ ಸಂಬಳ ಕಡಿತ ಮಾಡಲ್ಲ ಎಂದು ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಪರೋಕ್ಷವಾಗಿ ಕೋಡಿಹಳ್ಳಿ ಚಂದ್ರಶೇಖರ್ಗೆ ಟಾಂಗ್ ನೀಡಿದ್ದಾರೆ.
ಸಾರಿಗೆ ನೌಕರರ 10 ಬೇಡಿಕೆಗಳಲ್ಲಿ 9 ಬೇಡಿಕೆಗಳ ಈಡೇರಿಕೆಗೆ ಅಸ್ತು ಎಂದಿದ್ದೇವೆ. ಇದಕ್ಕೊಂದು ಸಮಿತಿಯನ್ನೂ ಮಾಡಿ, ಸಮಿತಿ ನಾಲ್ಕೈದು ಸಭೆಗಳನ್ನೂ ಮಾಡಿದೆ. ಬೇಡಿಕೆ ಈಡೇರಿಕೆಗೆ ತ್ವರಿತ ಕ್ರಮ ಕೈಗೊಳ್ಳುತ್ತೇವೆ' ಎಂದು ಡಿಸಿಎಂ ಸವದಿ ಹೇಳಿದ್ದಾರೆ.