ರಾಜಕೀಯದಿಂದ ಸದಾ ದೂರ. ರಾಜಕಾರಣಿಗಳನ್ನು ಹತ್ತಿರವೂ ಬಿಟ್ಟುಕೊಳ್ಳುವುದಿಲ್ಲ. ರಾಜಕಾರಣ ಎಳಷ್ಟೂ ಇಷ್ಟವಾಗುವುದಿಲ್ಲ. ಅವರಾಯ್ತು ಅವರ ಆಶ್ರಮವಾಯ್ತು. ಅವರಾಯ್ತು ಅವರ ಕಾಯಕವಾಯ್ತು. ಹೀಗಿದ್ದ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಪ್ರಧಾನಿ ಮೋದಿ ಕುರಿತು ಮೆಚ್ಚುಗೆ ಮಾತುಗಳನ್ನಾಡಿದ್ದಾರೆ.
ರಾಜಕೀಯದಿಂದ ಸದಾ ದೂರ. ರಾಜಕಾರಣಿಗಳನ್ನು ಹತ್ತಿರವೂ ಬಿಟ್ಟುಕೊಳ್ಳುವುದಿಲ್ಲ. ರಾಜಕಾರಣ ಎಳಷ್ಟೂ ಇಷ್ಟವಾಗುವುದಿಲ್ಲ. ಅವರಾಯ್ತು ಅವರ ಆಶ್ರಮವಾಯ್ತು. ಅವರಾಯ್ತು ಅವರ ಕಾಯಕವಾಯ್ತು. ಹೀಗಿದ್ದ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಪ್ರಧಾನಿ ಮೋದಿ ಕುರಿತು ಮೆಚ್ಚುಗೆ ಮಾತುಗಳನ್ನಾಡಿದ್ದಾರೆ.
ದೇಶ ಕಂಡ ಅಪರೂಪದ ಪ್ರಧಾನಿ ನರೇಂದ್ರ ಮೋದಿ. ಇಂತಹ ಪ್ರಧಾನಿ ದೇಶಕ್ಕೆ ದೊರೆತಿರುವುದು ಸುದೈವ. ದಿನಪೂರ್ತಿ ಕೆಲಸ ಮಾಡಿದರೂ ಅವರ ಮುಖದ ಮೇಲಿನ ಮಂದಸ್ಮಿತ, ಪ್ರಸನ್ನತೆ ಕಡಿಮೆ ಆಗುವುದಿಲ್ಲ ಎಂದು ಬಣ್ಣಿಸಿದರು. ಸಿದ್ದೇಶ್ವರ ಶ್ರೀಗಳು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದಾಗ, ಅವರು ಯಾವ ರಾಜಕಾರಣಿಗಳ ಬಗ್ಗೆಯೂ ಮಾತನಾಡುವುದಿಲ್ಲ, ಅವರು, ಅವರ ಪ್ರವಚನಗಳಾಯ್ತು ಅಂತಿರ್ತಾರೆ. ಆದರೆ ಪ್ರಧಾನಿ ಮೋದಿಯವರ ಬಗ್ಗೆ ಮೊದಲ ಬಾರಿ ಮಾತನಾಡಿದ್ದಾರೆ.