Jun 19, 2024, 11:09 PM IST
ನಟ ದರ್ಶನ್ ಹಾಗೂ ಗ್ಯಾಂಗ್ ನಡೆಸಿದ ಕೊಲೆ ಪ್ರಕರಣ ತನಿಖೆಯಲ್ಲಿ ಹಲವು ಸ್ಫೋಟಕ ಮಾಹಿತಿಗಳು ಬಹಿರಂಗವಾಗಿದೆ. ಒಂದು ಬಾರಿ ಕಸ್ಟಡಿ ವಿಸ್ತರಣೆ ಮಾಡಿ ತನಿಖೆ ನಡೆಸಿರುವ ಪೊಲೀಸರು ನಾಳೆ ದರ್ಶನ್ ಸೇರಿ ಇತರರನ್ನು ಕೋರ್ಟ್ಗೆ ಹಾಜರುಪಡಿಸಲಿದ್ದಾರೆ. ಈಗಾಗಲೇ ಘಟನೆ ಕುರಿತು ದರ್ಶನ್ ಘಟನೆ ಕುರಿತು ಮಾಹಿತಿ ಬಿಚ್ಚಿಟ್ಟಿದ್ದಾರೆ. ಈ ಪ್ರಕರಣ ಸಂಬಂಧ ಪೊಲೀಸರು 100ಕ್ಕೂ ಹೆಚ್ಚು ಸಾಕ್ಷ್ಯಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಬೆಳವಣಿಗೆ ನಡುವೆ ಸ್ಪೆಷಲ್ ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರಸನ್ನ ಕುಮಾರ್ ಬದಲಾವಣೆ ಒತ್ತಡಗಳು ಕೇಳಿಬಂದಿರುವ ಮಾಹಿತಿಯೂ ಬಯಲಾಗಿದೆ.