Cabinet Reshuffle:ಕೇಂದ್ರ ನಾಯಕರ ಸೀಕ್ರೆಟ್ ನಾನು ಹೇಳಲ್ಲ: ಈಶ್ವರಪ್ಪ

Feb 2, 2022, 4:11 PM IST

ಬೆಂಗಳೂರು (ಫೆ. 02): ರಾಜ್ಯ ರಾಜಕಾರಣದಲ್ಲಿ ಸಂಪುಟ ಪುನಾರಚನೆ (Cabinet Reshuffle) ಬಗ್ಗೆ ಚರ್ಚೆಯಾಗುತ್ತಿದೆ. ನಾಳೆ ದೆಹಲಿಗೆ ತೆರಳಿ, ವರಿಷ್ಠರ ಜೊತೆ ಚರ್ಚಿಸುತ್ತೇನೆಂದು ಸಿಎಂ ಬೊಮ್ಮಾಯಿ ಹೇಳಿದ್ಧಾರೆ. ಸಚಿವಾಕಾಂಕ್ಷಿಗಳೂ ದೆಹಲಿಗೆ ಹಾರಲು ತಯಾರಾಗಿದ್ದಾರೆ.

Cabinet Reshuffle:ಗೋಕಾಕ್‌ನಿಂದ ಗೋವೆಗೆ ಜಾರಕಿಹೊಳಿ, ಏನಿದು ಹೊಸ ಆಟ.?

ಸಂಪುಟ ವಿಸ್ತರಣೆಯೋ, ಪುನಾರಚನೆಯೋ.? ಎಂದು ಸಿಎಂಗೆ ತಿಳಿದಿಲ್ಲ. ನನಗೆ ಹೇಗೆ ಗೊತ್ತಾಗಲು ಸಾಧ್ಯ..? ಸಿಎಂ ಹೋಗಿ ಬಂದ ಮೇಲೆ ಗೊತ್ತಾಗುತ್ತದೆ. ಕೇಂದ್ರ ನಾಯಕರ ಜೊತೆ ಸಂಪರ್ಕದಲ್ಲಿರೋದು ನಿಜ, ಹಾಗಂತ ಅವರ ಸೀಕ್ರೆಟ್‌ನೆಲ್ಲಾ ಹೇಳಲ್ಲ' ಎಂದು ಸಚಿವ ಈಶ್ವರಪ್ಪ ಇನ್ನಷ್ಟು ಕುತೂಹಲ ಹೆಚ್ಚಿಸಿದರು.