ಬರೀ ಸಭೆಗಳಿಂದ ಕೆಲಸ ಆಗಲ್ರೀ, ಸಿಎಂ ಸಭೆಯಲ್ಲಿ ಡೀಸಿ ವಿರುದ್ಧ ಪ್ರತಾಪ್ ಸಿಂಹ ಅಸಮಾಧಾನ

May 29, 2021, 3:49 PM IST

ಮೈಸೂರು (ಮೇ. 29): ಡೀಸಿ ರೋಹಿಣಿ ಸಿಂಧೂರಿ ವಿರುದ್ಧ ಸಂಸದಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನೊಂದು ಕಡೆ ಸಿಂಧೂರಿ ಪರ ಜಿಟಿ ದೇವೇಗೌಡ ಬ್ಯಾಟಿಂಗ್ ಮಾಡಿದ್ದಾರೆ. 

ಅಧಿಕಾರಿಗಳೇ ಆಡಳಿತ ನಡೆಸುತ್ತಾರೆ ಎಂಬ ಮನಸ್ಥಿತಿ ಸರಿಯಲ್ಲ. ಜನಪ್ರತಿನಿಧಿಗಳು ಹೆಗಲು ಕೊಟ್ಟಾಗಲೇ ಸಮಸ್ಯೆ ಬಗೆಹರಿಯುವುದು. ಜಿಲ್ಲಾಡಳಿತ ಸಂಜೆ 6 ರಿಂದ 9 ರವರೆಗೆ ಸಭೆ ನಡೆಸುತ್ತಾರೆ. ಹೀಗಾದ್ರೆ ತಾಲ್ಲೂಕು ಅಧಿಕಾರಿಗಳು ಹಳ್ಳಿಗೆ ಹೋಗೋದ್ಹೇಗೆ..? ಬರೀ ಸಭೆಗಳಿಂದ ಕೆಲಸ ಆಗುವುದಿಲ್ಲ. ಅಧಿಕಾರಿಗಳೂ ಫೀಲ್ಡಿಗಿಳಿಯಬೇಕು' ಎಂದು ಪ್ರತಾಪ್ ಸಿಂಹ ಡೀಸಿ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ಧಾರೆ.