Controversy: ಮೈಸೂರು ಜೆಡಿಎಸ್ ಅಭ್ಯರ್ಥಿ ಕಿಡ್ನಿ ಮಾರಾಟಗಾರ, ಎಸ್‌ಟಿಎಸ್‌ ವಿವಾದಾತ್ಮಕ ಹೇಳಿಕೆ

Nov 30, 2021, 9:59 AM IST

ಮೈಸೂರು (ನ. 30): ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್‌ಗೆ (MLC Elections) ನಡೆಯಲಿರುವ ಚುನಾವಣೆ ನಿಮಿತ್ತ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‌ (ST Somashekhar) ಬಿಜೆಪಿ ಅಭ್ಯರ್ಥಿ ರಘು ಕೌಟಿಲ್ಯ ಪರ ಪ್ರಚಾರ ಕಾರ್ಯದಲ್ಲಿ ತೊಡಗಿದರು. ಈ ವೇಳೆ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ. 

KSRTC ಚಾಲಕನಿಂದ Hit & Run: ಪೇಯಿಂಟ್ ಕ್ಲೂ ಹಿಡಿದು ಡ್ರೈವರ್ ಪತ್ತೆ ಹಚ್ಚಿದ ಪೊಲೀಸರು!

'ಮೈಸೂರು ಜೆಡಿಎಸ್ ಅಭ್ಯರ್ಥಿ ಕಿಡ್ನಿ ಮಾರಾಟಗಾರ. ಕಿಡ್ನಿ ಮಾರಾಟದಲ್ಲಿ ಈತ ನಂಬರ್ 1 ಎಂದು ಜೆಡಿಎಸ್ ಅಭ್ಯರ್ಥಿ ಸಿಎನ್ ಮಂಜೇಗೌಡ (CN Manjegowda) ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಒಂದೇ ಸೈಟನ್ನು 4 ಮಂದಿಗೆ ಮಾರಾಟ ಮಾಡಿದ ಮೋಸಗಾರ. ಮಂಜೇಗವಡ ಗೆದ್ರೆ ಮೈಸೂರು- ಚಾಮರಾಜನಗರ ಜನರಿಗೆ ಮಾಡಿದ ಮೋಸವಾಗುತ್ತೆ ಎಂದು ಎಸ್‌ಟಿಎಸ್ ಹೇಳಿದ್ದಾರೆ.