ಡಿ.9ರಿಂದ ಚಳಿಗಾಲದ ಅಧಿವೇಶನ; ಮುಡಾ ಆರೋಪಿ ಸಿದ್ದು ಸೈಲೆಂಟಾದ್ರೆ, ಯಾರಾಗಲಿದ್ದಾರೆ ವಿಧಾನಸಭೆ ವೀರ?

ಡಿ.9ರಿಂದ ಚಳಿಗಾಲದ ಅಧಿವೇಶನ; ಮುಡಾ ಆರೋಪಿ ಸಿದ್ದು ಸೈಲೆಂಟಾದ್ರೆ, ಯಾರಾಗಲಿದ್ದಾರೆ ವಿಧಾನಸಭೆ ವೀರ?

Published : Nov 22, 2024, 01:46 PM ISTUpdated : Nov 22, 2024, 05:44 PM IST

ಡಿಸೆಂಬರ್ 9 ರಿಂದ ಆರಂಭವಾಗುವ ಚಳಿಗಾಲದ ಅಧಿವೇಶನದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಮೇಲಿನ ಆರೋಪಗಳಿಂದಾಗಿ ಅವರು ಸೈಲೆಂಟ್ ಆಗಿರುವ ಸಾಧ್ಯತೆ ಇದೆ. ಹಾಗಾದರೆ, ಈ ಬಾರಿ ವಿಧಾನಸಭೆ ವೀರ ಯಾರಾಗಲಿದ್ದಾರೆ ಎಂಬ ಕುತೂಹಲ ಹೆಚ್ಚಾಗಿದೆ.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಇದು 2ನೇ ಚಳಿಗಾಲದ ಅಧಿವಶೇನ ಡಿಸೆಂಬರ್ 9 ರಿಂಧ ಆರಂಭವಾಗಲಿದೆ. ಪ್ರತಿಬಾರಿ ಅಧಿವೇಶನವನ್ನು ನಡುಗಿಸುತ್ತಿದ್ದ ಸಿಎಂ ಸಿದ್ದರಾಮಯ್ಯ ಅವರು ಈ ಬಾರಿ ವಿಧಾನಸಭೆಯನ್ನು ನಡುಗಿಸುತ್ತಾರೋ ಅಥವಾ ಅವರ ಮೇಲೆ ಬಂದಿರುವ ಗಂಭೀರ ಆರೋಪಗಳಿಂದ ಅಲ್ಲಿ ವಿಧಾನಸಭೆಯಲ್ಲಿಯೇ ನಡುಗುತ್ತಾರೋ ಎಂಬುದನ್ನು ಕಾದುನೋಡಬೇಕಿದೆ. ಇನ್ನು ಸಿದ್ದರಾಮಯ್ಯ ವಿಧಾನಸಭೆ ವೀರನಾಗುವುದು ಅನುಮಾನವಾಗಿದೆ. ಹಾಗದರೆ, ಈ ಬಾರಿ ವಿಧಾನಸಭೆಯನ್ನು ನಡುಗಿಸುವ ವೀರನಾರಾಗಬಹುದು ಎಂಬುದು ಕುತೂಹಲ ಮೂಡಿಸಿದೆ. ಇಲ್ಲಿದೆ ನೋಡಿ ಸ್ಪಷ್ಟ ಉತ್ತರ..

ವಿಧಾನಸಭೆಯ ವೀರ ಸಿಎಂ ಸಿದ್ದರಾಮಯ್ಯ ಮೇಲೆ ಮುಡಾ ಭೂತ ಕೂತಿದೆ. ವಕ್ಫ್ ಬೇತಾಳ ಹೆಗಲೇರಿದೆ. ಬಿಪಿಎಲ್ ಕಾರ್ಡ್ ರದ್ದತಿಯ ಬೆಂಕಿ ಸಿದ್ದು ಸರ್ಕಾರದ ಕೈ ಸುಡ್ತಿದೆ. ನಾಲ್ಕು ದಶಕದ ಸಿದ್ದರಾಮಯ್ಯ ರಾಜಕೀಯದಲ್ಲಿಯೇ ಅತೀ ದೊಡ್ಡ ಅಗ್ನಿಪರೀಕ್ಷೆಯಾಗಿದೆ. ಬೆಂಕಿಯ ಬಲೆಯಲ್ಲಿ ಸಿಲುಕಿರೋ ಸಿಎಂ, ಸದನ ಕದನದಲ್ಲಿ ಸೈಲೆಂಟ್ ಆಗಿ ಹೋಗುತ್ತಾರೆ ಎಂಬ ಸೂಚನೆ ಸಿಗುತ್ತಿವೆ. ಅಧಿವೇಶನದಲ್ಲಿ ಸಿದ್ದರಾಮಯ್ಯ ಒಬ್ಬರಿಗೆ ತಮ್ಮನ್ನ ತಾವು ಡಿಫೆಂಡ್  ಮಾಡಿಕೊಳ್ಳೋದು ಕಷ್ಟ. ಆಗ ಸಿದ್ದರಾಮಯ್ಯ ಅವರ ಪರವಾಗಿ ಸಮರ್ಥವಾಗಿ ನಿಲ್ಲಬಲ್ಲ ಇಬ್ಬರು ನಾಯಕರಿದ್ದಾರೆ. ಸಿದ್ದು ಪಾಲಿನ ಆ ಆಪ್ತರಕ್ಷಕರು ಯಾರು ಅಂತ ತೋರಿಸ್ತೀವಿ ನೋಡಿ..

ಕಳೆದ ಅಧಿವೇಶನದಲ್ಲಿವೂ ಮುಡಾ ವಿಚಾರ ಕೋಲಾಹಲಕ್ಕೆ ಕಾರಣವಾಗಿತ್ತು. ಆದರೆ ಅಂದಿಗೂ.. ಇಂದಿಗೂ ಅಜಗಜಾಂತರವಿದೆ. ಡಿಸೆಂಬರ್ 9ರಿಂದ ಚಳಿಗಾಲದ ಅಧಿವೇಶನ ಆರಂಭವಾಗಲಿದೆ. ಮುಡಾ ಹಗರಣವನ್ನೇ ಸಿದ್ದರಾಮಯ್ಯ ವಿರುದ್ಧ ಬ್ರಹ್ಮಾಸ್ತ್ರವಾಗಿ ಬಳಸೋಕೆ ಕಮಲದಳ ಕೂಟ ಸಜ್ಜಾಗಿದೆ. ಆದರೆ ಕಳೆದ ಅಧಿವೇಶನದಲ್ಲಿಯೂ ಮುಡಾ ಅಸ್ತ್ರ ವಿಪಕ್ಷಗಳ ಕೈಗೆ ಸಿಕ್ಕಿತ್ತು. ಆದರೆ, ಆ ಅಸ್ತ್ರಕ್ಕೀಗ ಮತ್ತಷ್ಟು ಬಲಬಂದಿದೆ. ಅದಕ್ಕೂ ಕಾರಣವಿದೆ. ಇದೀಗ ವಿಪಕ್ಷಗಳ ನಾಯಕರಲ್ಲಿ ಒಬ್ಬರು ವಿಧಾನಸಭೆ ವೀರನಾಗುವ ಸಾಧ್ಯತೆ ಕಂಡುಬರಲಿದೆ.

23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
19:09ಕನಕಾಧಿಪತಿ ಚದುರಂಗ.. BJP ಪಡೆ ಕೋಲಾಹಲ: ಹಸ್ತಕೋಟೆಗೇ ಗೊತ್ತಿರಲಿಲ್ಲ.. ಡಿಕೆ ಹೂಡಿದ ಚಕ್ರವ್ಯೂಹ!
19:50Suvarna Special: 151/5 ಬಂಡೆಯಾಟವಯ್ಯಾ! ಮೊದಲ ಅಗ್ನಿಪರೀಕ್ಷೆ..ಶತ್ರುಪಡೆಯನ್ನೇ ಒಡೆದ ಕನಕಪುರ ಬಂಡೆ!
20:09Suvarna Special: ಆರೆಸ್ಸೆಸ್​ Vs ಖರ್ಗೆ ರಣರಂಗ, 100 ವರ್ಷ ಇತಿಹಾಸದ RSS​​​ ವಿರುದ್ಧ ಖರ್ಗೆ ‘ಸಂಘ’ರ್ಷ..!
19:20Suvarna Special: ಯಾರಿಗುಂಟು ಲಕ್ಷ್ಮೀ?ಯಾರಿಗಿಲ್ಲ ಜ್ಯೋತಿ? ಕಾಸು, ಕರೆಂಟು, ಲಕ್ಷ್ಮೀ, ಜ್ಯೋತಿ..ಇದು ಆಪರೇಷನ್ ಗ್ಯಾರಂಟಿ
47:03RSS ನೋಂದಣಿ ಯಾವಾಗ..? ಗೃಹ ಸಚಿವ ಪ್ರಿಯಾಂಕ್ ಖರ್ಗೆ ಸಾಲು ಸಾಲು ಪ್ರಶ್ನೆಯಿಂದ ಶುರುವಾದ ಚರ್ಚೆ
25:24ಧರ್ಮಸ್ಥಳ ಬುರುಡೆ ಕೇಸ್‌ಗೆ ಬಿಗ್ ಟ್ವಿಸ್ಟ್: ಸಾಥ್ ಕೊಟ್ಟವರ ₹200 ಕೋಟಿ ಷಡ್ಯಂತ್ರ ಬಿಚ್ಚಿಟ್ಟ ಮಾಸ್ಕ್‌ ಮ್ಯಾನ್!
23:20ಧರ್ಮಸ್ಥಳ ವಿರುದ್ಧ ಕೇರಳ ಫಂಡಿಂಗ್, ಚಿತ್ರದುರ್ಗ ಕನೆಕ್ಷನ್, 200 ಕೋಟಿ ಡೀಲ್ ಸೀಕ್ರೆಟ್ ಬಿಚ್ಚಿಟ್ಟ ಮಾಸ್ಕ್ ಮ್ಯಾನ್
21:25DK Shivakumar: ಸಿದ್ದು ಸಂಪ್ರದಾಯ ಮುರಿದ ಡಿಕೆಶಿ: ಗಾಂಧಿಗಿರಿ ಹಿಂದಿನ ರಣತಂತ್ರವೇನು?
21:34ಡಿಫರೆಂಟ್ ಡಿಕೆ: ವಿದುರ ನೀತಿ.. ಚಾಣಕ್ಯ ತಂತ್ರ.. ರಾಜ್ಯ ರಾಜಕಾರಣದಲ್ಲಿ 'ಬಂಡೆ'ಯ ಹೊಸ ಚದುರಂಗದಾಟ!
Read more