ಹೈಕಮಾಂಡ್ ಶ್ರೀರಕ್ಷೆ, ಭಿನ್ನಮತರ ಅಸಮಾಧಾನ; ಸಿಎಂ ವಿರುದ್ಧ ಸ್ಫೋಟಗೊಳ್ಳುತ್ತಾ ಬಂಡಾಯ.?

Jun 13, 2021, 3:25 PM IST

ಬೆಂಗಳೂರು (ಜೂ. 13): ರಾಜ್ಯ ರಾಜಕೀಯದಲ್ಲಿ ನಾಯಕತ್ವ ಬದಲಾವಣೆ ಸುದ್ದಿ ಬೆನ್ನಲ್ಲೇ ಬೇರೆ ಬೇರೆ ರಾಜಕೀಯ ಬದಲಾವಣೆಗಳು ನಡೆಯುತ್ತಿದೆ. ಬಿಎಸ್‌ವೈ ಸಿಎಂ ಆಗಿ ಮುಂದುವರೆಯುವುದು ಬೇಡ ಅಂತ ಯಾರು ಹೇಳಿದ್ದಾರೆ? ಅವರೇ ಮುಂದುವರೆಯಲಿ ಎಂದು ಯೋಗೇಶ್ವರ್ ಹೇಳಿದ್ದಾರೆ.

ಉತ್ತರದಲ್ಲಿ ಯೋಗಿ ನೇತೃತ್ವದಲ್ಲೇ ಮುಂದಿನ ಚುನಾವಣೆ, ಬಂಗಾಳದಲ್ಲಿ ಕಂಗಾಲಾಗಿದ್ಯಾ ಬಿಜೆಪಿ?

ಇನ್ನೊಂದು ಕಡೆ ಬಿಜೆಪಿ ಭಿನ್ನಮತರ ಗುಂಪಿನಲ್ಲಿ ಗುರುತಿಸಿಕೊಂಡಿರುವ ಶಾಸಕ ಅರವಿಂದ್ ಬೆಲ್ಲದ್ ದೆಹಲಿ ಭೇಟಿ ಹಿಂದಿನ ರಹಸ್ಯ ಕುತೂಹಲ ಮೂಡಿಸಿದೆ. ಇದೆಲ್ಲದರ ನಡುವೆ  ಬೆಕ್ಕಿನ ಕಲ್ಮಠ ಶ್ರೀ ಸಿಎಂ ನಾಯಕತ್ವ ಬದಲಾವಣೆಗೆ ಪ್ರಯತ್ನಿಸಿದರೆ ತಮ್ಮ ತಲೆ ಮೇಲೆ ತಾವೇ ಕಲ್ಲು ಎತ್ತಿ ಹಾಕಿಕೊಂಡ ಹಾಗೆ ಎಂದು ಎಚ್ಚರಿಸಿದ್ದಾರೆ. ಇವೆಲ್ಲದರ ಇನ್‌ಸೈಡ್ ಸುದ್ದಿ ಇಲ್ಲಿದೆ.