ಕನಕಪುರ ತಮ್ಮನಿಗೆ ಬಿಟ್ಟು ಚನ್ನಪಟ್ಟಣ ಉಪ ಚುನಾವಣೆಗೆ ನಿಲ್ತಾರಾ ಡಿಕೆಶಿ?

Jun 18, 2024, 11:22 PM IST

ಹೆಚ್‌ಡಿ ಕುಮಾರಾಸ್ವಾಮಿ ತಮ್ಮ ಚನ್ನಪಟ್ಟಣ ವಿಧಾನಸಭೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಕಾರಣ ಉಪಚುನಾವಣೆ ಕಾವು ಜೋರಾಗಿದೆ. ಇದೀಗ ಕನಕಪುರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಚನ್ನಪಟ್ಟಣದಿಂದ ಡಿಕೆ ಶಿವಕುಮಾರ್ ಸ್ಪರ್ಧೆಗೆ ತಯಾರಿಗಳು ನಡೆಯುತ್ತಿದೆ ಅನ್ನೋ ಮಾತುಗಳ ಕೇಳಿಬರುತ್ತಿದೆ. ಕನಕಪುರ ಉಪ ಚುನಾವಣೆಯಲ್ಲಿ ಡಿಕೆ ಸುರೇಶ್ ಕಣಕ್ಕಿಳಿಸಿ ತಮ್ಮ ಪಟ್ಟು ಬಿಗಿಗೊಳಿಸಲು ಪ್ಲಾನ್ ನಡೆದಿದೆ ಎಂದು ರಾಜಕೀಯ ಪಡಸಾಲೆಯಲ್ಲಿ ಚರ್ಚೆಯಾಗುತ್ತಿದೆ. ನಾಳೆಯಿಂದ ಚನ್ನಪಟ್ಟಣದ 14ಕ್ಕೂ ಹೆಚ್ಚು ದೇವಸ್ಥಾನಗಳಿಗೆ ಡಿಕೆ ಶಿವಕುಮಾರ್ ಭೇಟಿ ನೀಡಲಿದ್ದಾರೆ.