BIG 3: ಬಳ್ಳಾರಿಯ ಮದಿರೆ ಗ್ರಾಮಸ್ಥರಿಗೆ ಕೊನೆಗೂ ಸಿಕ್ತು ಸ್ಮಶಾನಕ್ಕಾಗಿ ಜಾಗ!

Jul 21, 2022, 11:15 AM IST

ಬಳ್ಳಾರಿ (ಜು. 21): ಇಲ್ಲಿನ ಕುರುಗೋಡು ತಾಲೂಕಿನ ಮದಿರೆ ಗ್ರಾಮದಲ್ಲಿ ಯಾರಾದರೂ ಸತ್ತರೆ ಹೂಳೋದಕ್ಕೆ ಜಾಗವಿಲ್ಲದೇ ಪರದಾಡುತ್ತಿದ್ದರು. ಕಳೆದ 15 ವರ್ಷಗಳಿಂದ ಸ್ಮಶಾನಕ್ಕೆ ಜಾಗವಿಲ್ಲದೇ ಜನ ಪರದಾಡುತ್ತಿದ್ದರು. ಊರಿನಲ್ಲಿ ಸ್ಮಶಾನ ಇಲ್ಲದ ಕಾರಣ ಹಳ್ಳ ದಾಟಿ ಎಲ್ಲಿ ಬೇಕೆಂದರಲ್ಲಿ ಹೂಳುತ್ತಿದ್ದರು.

BIG 3: ರಸ್ತೆಗಳಿಲ್ಲ, ಡೋಲಿಯೇ ಆಂಬುಲೆನ್ಸ್, ನೋ ನೆಟ್‌ವರ್ಕ್, ಚಾಮರಾಜನಗರದ ಹಳ್ಳಿಗಳ ವ್ಯಥೆ

ಮಳೆಗಾಲದಲ್ಲಂತೂ ಇವರ ಪಾಡು ಯಾರಿಗೂ ಬೇಡ. ನಮಗೆ ಸ್ಮಶಾನಕ್ಕಾಗಿ ಜಾಗ ಕೊಡಿ ಸ್ವಾಮಿ ಎಂದು ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಬಗ್ಗೆ ಬಿಗ್ 3 ವರದಿ ಪ್ರಸಾರ ಮಾಡಿ, ಸಂಬಂಧಪಟ್ಟವರಿಗೆ ಕ್ಲಾಸ್ ತೆಗೆದುಕೊಂಡಿತು. ಈಗ ಸ್ಮಶಾನಕ್ಕಾಗಿ ೨ ಎಕರೆ ಜಾಗ ಮೀಸಲಿಡಲಾಗಿದೆ.