ಮುಸ್ಲಿಂ ವರ್ತಕರಿಗೆ ನಿಷೇಧ (Ban Muslim Traders) ಮುಂದುವರೆದ ಬೆನ್ನಲ್ಲೇ, ಉಪ್ಪಿನಂಗಡಿ (Uppinangadi) ವರ್ತಕರ ಸಂಘ ಪೊಲೀಸ್ ಠಾಣೆ ಮೆಟ್ಟಿಲೇರಿದೆ. 'ಅಂಗಡಿ ಸಾಮಗ್ರಿಗಳನ್ನು ಮುಸ್ಲಿಂಮರಿಗೆ ಕೊಡುವುದಿಲ್ಲ. ನಮಗೆ ಹಿಂದೂ ಸಹೋದರರ ವ್ಯಾಪಾರ ಧಾರಾಳ' ಎನ್ನುವ ಸಂದೇಶ ಹರಿದಾಡುತ್ತಿದೆ.
ಮಂಗಳೂರು (ಮಾ. 25): ಮುಸ್ಲಿಂ ವರ್ತಕರಿಗೆ ನಿಷೇಧ (Ban Muslim Traders) ಮುಂದುವರೆದ ಬೆನ್ನಲ್ಲೇ, ಉಪ್ಪಿನಂಗಡಿ (Uppinangadi) ವರ್ತಕರ ಸಂಘ ಪೊಲೀಸ್ ಠಾಣೆ ಮೆಟ್ಟಿಲೇರಿದೆ. 'ಅಂಗಡಿ ಸಾಮಗ್ರಿಗಳನ್ನು ಮುಸ್ಲಿಂಮರಿಗೆ ಕೊಡುವುದಿಲ್ಲ. ನಮಗೆ ಹಿಂದೂ ಸಹೋದರರ ವ್ಯಾಪಾರ ಧಾರಾಳ' ಎನ್ನುವ ಸಂದೇಶ ಹರಿದಾಡುತ್ತಿದೆ.
ಈ ಸಂದೇಶದಲ್ಲಿ ಉಪ್ಪಿನಂಗಡಿಯ 32 ಅಂಗಡಿಗಳ ಹೆಸರು ಉಲ್ಲೇಖಿಸಲಾಗಿದೆ. ಹಿಂದೂ ವರ್ತಕರ ಹೆಸರಿನಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಸಂದೇಶವನ್ನು ವೈರಲ್ ಮಾಡಲಾಗಿದೆ ಎಂದು ಉಪ್ಪಿನಂಗಡಿ ವರ್ತಕರ ಸಂಘ ಪೊಲೀಸರಿಗೆ ದೂರು ನೀಡಿದ್ದಾರೆ. ಕಿಡಿಗೇಡಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಿ ಎಂದು ಒತ್ತಾಯಿಸಿದ್ದಾರೆ.