ಕೊರೋನಾ ಎಂಬುವುದು ಬೋಗಸ್: ಸರ್ಕಾರಕ್ಕೆ ಸ್ವಾಮೀಜಿ ಸವಾಲ್

Aug 30, 2020, 7:42 PM IST

ಬಳ್ಳಾರಿ, (ಆ.30):  ಕೊರೋನಾ ಅಂದ ತಕ್ಷಣ ಇಡೀ ಮನುಕುಲವೇ ಬೆಚ್ಚಿಬೀಳುತ್ತಿದ್ದು, ಮಹಾಮಾರಿಗೆ ಜನರು ತತ್ತರಿಸಿ ಹೋಗಿದ್ದಾರೆ. ಶ್ರೀಮಂತರಿಂದ ಕಡುಬಡವರಿಗೂ ಕೊರೋನಾ ವಕ್ಕರಿಸಿಕೊಳ್ಳುತ್ತಿದೆ.

ಕರ್ನಾಟಕದಲ್ಲಿ ಮುಂದುವರೆದ ಕೊರೋನಾ ಅಟ್ಟಹಾಸ: ಇಲ್ಲಿದೆ ಭಾನುವಾರದ ಜಿಲ್ಲಾವಾರು ಮಾಹಿತಿ

ಇದರ ಮಧ್ಯೆ ಸ್ವಾಮೀಜಿ ಒಬ್ಬರು ಕೊರೋನಾ ಬೋಗಸ್ ರೋಗ. ನೂರು ಜನ ಕೊರೋನಾ ಸೋಂಕಿತರ ಜೊತೆ ಸಮಯ ಕಳೆದು ಬರುವೆ.  ನನಗೆ ಕೊರೋನಾ ಹೇಗೆ ಬರುತ್ತೆ ನೋಡೋಣ ಎಂದು ಸರ್ಕಾರಕ್ಕೆ  ಮತ್ತು ವೈದ್ಯರಿಗೆ ಸವಾಲು ಹಾಕಿದ್ದಾರೆ.