ಹುಚ್ಚ ಸಿನಿಮಾ ರೋಚಕ ಕಥೆ ಬಿಚ್ಚಿಟ್ಟ ನಿರ್ಮಾಪಕ ರೆಹಮಾನ್! ಸಿನಿಮಾಗಾಗಿ ರೀಯಲ್ ಆಗಿ ತಲೆ ಬೋಳಿಸಿಕೊಂಡಿದ್ದ ಸುದೀಪ್‌ !

ಹುಚ್ಚ ಸಿನಿಮಾ ರೋಚಕ ಕಥೆ ಬಿಚ್ಚಿಟ್ಟ ನಿರ್ಮಾಪಕ ರೆಹಮಾನ್! ಸಿನಿಮಾಗಾಗಿ ರೀಯಲ್ ಆಗಿ ತಲೆ ಬೋಳಿಸಿಕೊಂಡಿದ್ದ ಸುದೀಪ್‌ !

Published : Jul 08, 2024, 12:11 PM ISTUpdated : Jul 08, 2024, 12:12 PM IST

ಸದ್ಯ ಸ್ಯಾಂಡಲ್‌ವುಡ್ ಬಾದ್ ಷಾ ಕಿಚ್ಚ ಸುದೀಪ್ ನಟನೆಯ 'ಹುಚ್ಚ' ಸಿನಿಮಾ 23 ವರ್ಷ ಪೂರೈಸಿದೆ. ಈ ಟೈಂನಲ್ಲಿ ಹುಚ್ಚ ಸಿನಿಮಾದ ಬಗ್ಗೆ ಹಲವು ಇಂಟ್ರೆಸ್ಟಿಂಗ್ ಸಂಗತಿಗಳನ್ನ ನಿರ್ಮಾಪಕ ರೆಹಮಾನ್ ಬಿಚ್ಚಿಟ್ಟಿದ್ದಾರೆ. 

ತಮಿಳಿನ ಸೂಪರ್ ಹಿಟ್ 'ಸೇತು' ಸಿನಿಮಾ ರೀಮೆಕ್ ಹುಚ್ಚ ಸಿನಿಮಾ(Huchcha movie). ಈ ಸಿನಿಮಾದ ರಿಮೇಕ್ ರೈಟ್ಸ್ ಮೊದಲು ನಿರ್ಮಾಪಕ ಶಿಲ್ಪಾ ಶ್ರೀನಿವಾಸ್ ಬಳಿ ಇತ್ತು. ಶಿಲ್ಪಾ ಶ್ರೀನಿವಾಸ್ ಅವರೇ ಹೀರೋ ಆಗಿ ಹುಚ್ಚ ಸಿನಿಮಾ ಮಾಡೋಕೆ ರೆಡಿಯಾಗಿದ್ರು. ಆದ್ರೆ ಈ ಸಿನಿಮಾ ನೋಡಿ ಥ್ರಿಲ್ ಆಗಿದ್ದ ನಿರ್ಮಾಪಕ ರೆಹಮಾನ್ (Producer Rehman) ಹುಚ್ಚ ರೈಟ್ಸ್ಅನ್ನ ಶಿಲ್ಪಾ ಶ್ರೀನಿವಾಸ್‌ರಿಂದ ಪಡೆದುಕೊಂಡಿದ್ರಂತೆ. ಆ ನಂತರ ಈ ಕಥೆಯನ್ನ ರಿಯಲ್ ಸ್ಟಾರ್ ಉಪೇಂದ್ರ, ಶಿವಣ್ಣನಿಗೆ ಹೇಳಿದ್ರಂತೆ. ಆದ್ರೆ ತಲೆ ಬೋಳಿಸೋ ಸೀನ್ ಇದ್ದಿದ್ರಿಂದ ಇಬ್ಬರೂ ಈ ಕತೆಗೆ ಒಪ್ಪಿರಲಿಲ್ಲ. ಬಳಿಕ ಉಪೇಂದ್ರ, ಶಿವಣ್ಣ ರಿಜೆಕ್ಟ್ ಮಾಡಿದ್ದ ಹುಚ್ಚ ಸಿನಿಮಾ ಕಥೆ ಸುದೀಪ್ ಬಳಿ ಬಂದಿತ್ತು. ಆ ಸ್ಟೋರಿ ಸುದೀಪ್(Sudeep) ಹುಡುಕಿಕೊಂಡು ಬರೋಕೆ ಕಾರಣ ಡಾಕ್ಟರ್ ರಾಜ್ ಕುಮಾರ್. ಮೈಸೂರಿನಲ್ಲಿ ರಾಜ್‌ಕುಮಾರ್ ಕಾರ್ಯಕ್ರಮ ಒಂದರಲ್ಲಿ ಸುದೀಪ್ ತಂದೆ ಸರೋವರ ಸಂಜೀವ್ ಅವರು ನಿರ್ಮಾಪಕ ರೆಹಮಾನ್ಗೆ ಸಿಕ್ಕಿದ್ರಂತೆ. ಆ ನಂತ್ರ ಏನೆಲ್ಲಾ ಆಯ್ತು ಅಂತ ನಿರ್ಮಾಪಕರೇ ಹೇಳ್ತಾರೆ ಕೇಳಿ. ಹುಚ್ಚ ಸಿನಿಮಾ ನಿರ್ದೇಶಕ ಓಂ ಪ್ರಕಾಶ್ ರಾವ್.. ಆದ್ರೆ ಈ ಸಿನಿಮಾಗೆ ನಿರ್ದೇಶಕರಾಗಿ ಮೊದಲು ಆಯ್ಕೆ ಆಗಿದ್ದು ನಿರ್ದೇಶಕ ಎಸ್, ಮಹೇಂದರ್.. ಕೊನೆಗೆ ಸುದೀಪ್ ಓಂ ಪ್ರಕಾಶ್ ರಾವ್ ನಿರ್ದೇಶನ ಮಾಡಿದ್ರೆ ಚನ್ನಾಗಿರುತ್ತೆ ಅಂತ ನಿರ್ಮಾಪಕರ ಬಳಿ ಕೇಳಿಕೊಂಡಿದ್ರು. ಆ ನಂತರ ಕಿಚ್ಚನ ಒತ್ತಡಕ್ಕೆ ಮಣಿದು ಹುಚ್ಚ ಸಿನಿಮಾಗೆ ಓಂ ಪ್ರಕಾಶ್ ರಾವ್ ಫಿಕ್ಸ್ ಆಗಿದ್ರಂತೆ.

ಇದನ್ನೂ ವೀಕ್ಷಿಸಿ:  ಪವಿತ್ರಾ ಗೌಡಳನ್ನ ಕಣ್ಣೆತ್ತಿಯೂ ನೋಡೋ ಹಾಗಿಲ್ಲ..! ಕುಟುಂಬಸ್ಥರ ಕಂಡೀಷನ್‌ಗೆ ಒಪ್ಪಿದ್ರಾ ದರ್ಶನ್‌..?

04:59ಟಾಕ್ಸಿಕ್ ಹಸಿಬಿಸಿ ದೃಶ್ಯದ ವಿರುದ್ದ ಕಂಪ್ಲೇಂಟ್; ಈ ವಿವಾದದ ಬಗ್ಗೆ ಯಶ್ ಏನಂತಾರೆ..?
03:36Golden Star Ganesh ಬಗ್ಗೆ ಇಂಥ ಚಿಂತಾಜನಕ ಸುದ್ದಿ ಹರಡಿದ್ಯಾಕೆ? ಯಾಕೆ ಹೀಗಾಯ್ತು?
05:51ದರ್ಶನ್ ಪತ್ನಿ ವಿಜಯಲಕ್ಷ್ಮೀ ವಿರುದ್ಧ ಅಶ್ಲೀಲ ಕಾಮೆಂಟ್: ಇಬ್ಬರ ಅರೆಸ್ಟ್, ಫ್ಯಾನ್ಸ್ ವಾರ್‌ಗೆ ಬ್ರೇಕ್
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!
04:23'ತ್ರಿಮೂರ್ತಿ'ಗಳ ಹಾಲಿವುಡ್‌ ರೇಂಜ್ ಮೇಕಿಂಗ್ '45' ಸಿನಿಮಾ ಟ್ರೈಲರ್ ನೋಡಿದವ್ರು ಏನಂತಿದಾರೆ?!
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
04:38Video: ನಟಿ ರಮ್ಯಾಗೆ ಸಂದರ್ಶನದಲ್ಲೇ ತಿರುಗೇಟು ಕೊಟ್ಟ Actor Darshan Wife Vijayalakshmi
04:51ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!
Read more