ಹುಚ್ಚ ಸಿನಿಮಾ ರೋಚಕ ಕಥೆ ಬಿಚ್ಚಿಟ್ಟ ನಿರ್ಮಾಪಕ ರೆಹಮಾನ್! ಸಿನಿಮಾಗಾಗಿ ರೀಯಲ್ ಆಗಿ ತಲೆ ಬೋಳಿಸಿಕೊಂಡಿದ್ದ ಸುದೀಪ್‌ !

ಹುಚ್ಚ ಸಿನಿಮಾ ರೋಚಕ ಕಥೆ ಬಿಚ್ಚಿಟ್ಟ ನಿರ್ಮಾಪಕ ರೆಹಮಾನ್! ಸಿನಿಮಾಗಾಗಿ ರೀಯಲ್ ಆಗಿ ತಲೆ ಬೋಳಿಸಿಕೊಂಡಿದ್ದ ಸುದೀಪ್‌ !

Published : Jul 08, 2024, 12:11 PM ISTUpdated : Jul 08, 2024, 12:12 PM IST

ಸದ್ಯ ಸ್ಯಾಂಡಲ್‌ವುಡ್ ಬಾದ್ ಷಾ ಕಿಚ್ಚ ಸುದೀಪ್ ನಟನೆಯ 'ಹುಚ್ಚ' ಸಿನಿಮಾ 23 ವರ್ಷ ಪೂರೈಸಿದೆ. ಈ ಟೈಂನಲ್ಲಿ ಹುಚ್ಚ ಸಿನಿಮಾದ ಬಗ್ಗೆ ಹಲವು ಇಂಟ್ರೆಸ್ಟಿಂಗ್ ಸಂಗತಿಗಳನ್ನ ನಿರ್ಮಾಪಕ ರೆಹಮಾನ್ ಬಿಚ್ಚಿಟ್ಟಿದ್ದಾರೆ. 

ತಮಿಳಿನ ಸೂಪರ್ ಹಿಟ್ 'ಸೇತು' ಸಿನಿಮಾ ರೀಮೆಕ್ ಹುಚ್ಚ ಸಿನಿಮಾ(Huchcha movie). ಈ ಸಿನಿಮಾದ ರಿಮೇಕ್ ರೈಟ್ಸ್ ಮೊದಲು ನಿರ್ಮಾಪಕ ಶಿಲ್ಪಾ ಶ್ರೀನಿವಾಸ್ ಬಳಿ ಇತ್ತು. ಶಿಲ್ಪಾ ಶ್ರೀನಿವಾಸ್ ಅವರೇ ಹೀರೋ ಆಗಿ ಹುಚ್ಚ ಸಿನಿಮಾ ಮಾಡೋಕೆ ರೆಡಿಯಾಗಿದ್ರು. ಆದ್ರೆ ಈ ಸಿನಿಮಾ ನೋಡಿ ಥ್ರಿಲ್ ಆಗಿದ್ದ ನಿರ್ಮಾಪಕ ರೆಹಮಾನ್ (Producer Rehman) ಹುಚ್ಚ ರೈಟ್ಸ್ಅನ್ನ ಶಿಲ್ಪಾ ಶ್ರೀನಿವಾಸ್‌ರಿಂದ ಪಡೆದುಕೊಂಡಿದ್ರಂತೆ. ಆ ನಂತರ ಈ ಕಥೆಯನ್ನ ರಿಯಲ್ ಸ್ಟಾರ್ ಉಪೇಂದ್ರ, ಶಿವಣ್ಣನಿಗೆ ಹೇಳಿದ್ರಂತೆ. ಆದ್ರೆ ತಲೆ ಬೋಳಿಸೋ ಸೀನ್ ಇದ್ದಿದ್ರಿಂದ ಇಬ್ಬರೂ ಈ ಕತೆಗೆ ಒಪ್ಪಿರಲಿಲ್ಲ. ಬಳಿಕ ಉಪೇಂದ್ರ, ಶಿವಣ್ಣ ರಿಜೆಕ್ಟ್ ಮಾಡಿದ್ದ ಹುಚ್ಚ ಸಿನಿಮಾ ಕಥೆ ಸುದೀಪ್ ಬಳಿ ಬಂದಿತ್ತು. ಆ ಸ್ಟೋರಿ ಸುದೀಪ್(Sudeep) ಹುಡುಕಿಕೊಂಡು ಬರೋಕೆ ಕಾರಣ ಡಾಕ್ಟರ್ ರಾಜ್ ಕುಮಾರ್. ಮೈಸೂರಿನಲ್ಲಿ ರಾಜ್‌ಕುಮಾರ್ ಕಾರ್ಯಕ್ರಮ ಒಂದರಲ್ಲಿ ಸುದೀಪ್ ತಂದೆ ಸರೋವರ ಸಂಜೀವ್ ಅವರು ನಿರ್ಮಾಪಕ ರೆಹಮಾನ್ಗೆ ಸಿಕ್ಕಿದ್ರಂತೆ. ಆ ನಂತ್ರ ಏನೆಲ್ಲಾ ಆಯ್ತು ಅಂತ ನಿರ್ಮಾಪಕರೇ ಹೇಳ್ತಾರೆ ಕೇಳಿ. ಹುಚ್ಚ ಸಿನಿಮಾ ನಿರ್ದೇಶಕ ಓಂ ಪ್ರಕಾಶ್ ರಾವ್.. ಆದ್ರೆ ಈ ಸಿನಿಮಾಗೆ ನಿರ್ದೇಶಕರಾಗಿ ಮೊದಲು ಆಯ್ಕೆ ಆಗಿದ್ದು ನಿರ್ದೇಶಕ ಎಸ್, ಮಹೇಂದರ್.. ಕೊನೆಗೆ ಸುದೀಪ್ ಓಂ ಪ್ರಕಾಶ್ ರಾವ್ ನಿರ್ದೇಶನ ಮಾಡಿದ್ರೆ ಚನ್ನಾಗಿರುತ್ತೆ ಅಂತ ನಿರ್ಮಾಪಕರ ಬಳಿ ಕೇಳಿಕೊಂಡಿದ್ರು. ಆ ನಂತರ ಕಿಚ್ಚನ ಒತ್ತಡಕ್ಕೆ ಮಣಿದು ಹುಚ್ಚ ಸಿನಿಮಾಗೆ ಓಂ ಪ್ರಕಾಶ್ ರಾವ್ ಫಿಕ್ಸ್ ಆಗಿದ್ರಂತೆ.

ಇದನ್ನೂ ವೀಕ್ಷಿಸಿ:  ಪವಿತ್ರಾ ಗೌಡಳನ್ನ ಕಣ್ಣೆತ್ತಿಯೂ ನೋಡೋ ಹಾಗಿಲ್ಲ..! ಕುಟುಂಬಸ್ಥರ ಕಂಡೀಷನ್‌ಗೆ ಒಪ್ಪಿದ್ರಾ ದರ್ಶನ್‌..?

22:40ಗೆಳತಿ ಮನೆಯಲ್ಲಿ Vaishak​​ ನೇಣಿಗೆ ಶರಣಾಗಿದ್ದೇಕೆ ? ದುರಂತದ ಆ ರಾತ್ರಿ ಕೃಷಿ ತಾಪಂಡ ಮನೆಯಲ್ಲಿ ನಡೆದಿದ್ದೇನು?
06:59ಜಿಮ್ ಮಾಡ್ತಿದ್ದ ದರ್ಶನ್ 'ಯೋಗ' ಮಾಡುವಂತಾಗಿದ್ದು ಹೀಗೆ.. ಅವರು ಹೇಳಿಲ್ಲಾ ಅಂದ್ರೆ ಇವರು ಮಾಡ್ತಿರ್ಲಿಲ್ಲ!?
05:4622 ವರ್ಷಗಳ ಬಳಿಕ ಮತ್ತೆ ಬಂತು ಕಲಾಸಿಪಾಳ್ಯ; ಸಿನಿಮಾ ಮೂಲಕ ಫ್ಯಾನ್ಸ್‌ಗೆ 'ಕೆಂಚ'ನ 'ದರ್ಶನ'
13:34Darshan-Boss: ದರ್ಶನ್‌ಗೆ ಯಾಕೆ ಇಷ್ಟೊಂದು ಟೆನ್ಷನ್? 'ಬಾಸ್' ಸಿನಿಮಾದಲ್ಲಿ ಅಂಥದ್ದೇನಿದೆ?
04:23Cine Express: ಸಿನಿ ಪ್ರೇಮಿಗಳಿಗೆ ಗುಡ್ ನ್ಯೂಸ್: ಟೀಸರ್, ಹಾಡು, ಸಿನಿಮಾ ರಿಲೀಸ್ ಮತ್ತು ಮದುವೆ ಸುದ್ದಿ!
04:28ಚಿನ್ನೇಗೌಡರ ಪತ್ನಿ ಜಯಮ್ಮ ವಿಧಿವಶ; ವಿಜಯ್ ರಾಘವೇಂದ್ರ, ಶ್ರೀಮುರುಳಿಗೆ ಮಾತೃವಿಯೋಗ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
04:33Cine Express: '8' ಗ್ಲಿಂಪ್ಸ್‌ನಿಂದ 'ಊರಬ್ಬ' ಟ್ರೇಲರ್‌ವರೆಗೆ: ಸ್ಯಾಂಡಲ್‌ವುಡ್‌ನಲ್ಲಿ ಸಿನಿಮಾಗಳ ಹವಾ
04:30Cine Express: ಈ ವಾರ ಸಿನಿ ಇಂಡಸ್ಟ್ರಿಯಲ್ಲಿ ಹೆಚ್ಚು ಚರ್ಚೆಯಾದ 5 ದೊಡ್ಡ ಅಪ್‌ಡೇಟ್‌ಗಳು ಯಾವುವು?
04:09ಅಪ್ಪನಿಗಾಗಿ ಬಂದ ಹೊಸ ಹಾಡು, ಕಾನ್ಸ್‌ನಲ್ಲಿ ಮೆಚ್ಚುಗೆ ಪಡೆದ ಚಿತ್ರದ ಟ್ರೇಲರ್: ಸಿನಿರಂಗದಲ್ಲಿ ಏನಾಗುತ್ತಿದೆ?
Read more