ಮಾನಸಿಕ ಒತ್ತಡದಿಂದ 10KG ತೂಕ ಕಳೆದುಕೊಂಡ ದರ್ಶನ್: 20X30 ಸೆಲ್​ನಲ್ಲಿ ಡಿ ಗ್ಯಾಂಗ್ ವಿಲ ವಿಲ!

ಮಾನಸಿಕ ಒತ್ತಡದಿಂದ 10KG ತೂಕ ಕಳೆದುಕೊಂಡ ದರ್ಶನ್: 20X30 ಸೆಲ್​ನಲ್ಲಿ ಡಿ ಗ್ಯಾಂಗ್ ವಿಲ ವಿಲ!

Published : Nov 01, 2025, 01:20 PM IST

ರೇಣುಕಾಸ್ವಾಮಿ ಕೊಲೆ ಕೇಸ್​​ನ ಆರೋಪಿಗಳ ಮೇಲೆ ಕೋರ್ಟ್​ನಲ್ಲಿ ದೋಷಾರೋಪ ಹೊರೆಸಲಾಗ್ತಾ ಇದೆ. ಈ ನಡುವೆ ಎರಡೂವರೇ ತಿಂಗಳಿಂದ ಜೈಲಿನಲ್ಲಿರೋ ದಾಸನ ಸ್ಥಿತಿ ಏನಾಗಿದೆ ಅನ್ನೋ ಶಾಕಿಂಗ್ ವಿಷ್ಯ ಬೇರೆ ಹೊರಬಂದಿದೆ.

ರೇಣುಕಾಸ್ವಾಮಿ ಕೊಲೆ ಕೇಸ್​​ನ ಆರೋಪಿಗಳ ಮೇಲೆ ಕೋರ್ಟ್​ನಲ್ಲಿ ದೋಷಾರೋಪ ಹೊರೆಸಲಾಗ್ತಾ ಇದೆ. ಈ ನಡುವೆ ಎರಡೂವರೇ ತಿಂಗಳಿಂದ ಜೈಲಿನಲ್ಲಿರೋ ದಾಸನ ಸ್ಥಿತಿ ಏನಾಗಿದೆ ಅನ್ನೋ ಶಾಕಿಂಗ್ ವಿಷ್ಯ ಬೇರೆ ಹೊರಬಂದಿದೆ. ಎರಡೂವರೇ ತಿಂಗಳು ಜೈಲು ಸಜೆಯಲ್ಲಿ ಕಳೆದ ಗಜ 10 ಕೆಜಿ ತೂಕ ಕಳೆದುಕೊಂಡಿದ್ದಾನಂತೆ. 20X30 ಕೋಣೆಯಲ್ಲಿ ದಾಸನಿಗೆ ಕ್ಷಣ ಕ್ಷಣ ನರಕ ದರ್ಶನವಾಗ್ತಾ ಇದೆ. ಯೆಸ್ ಸುಪ್ರೀಂ ಕೋರ್ಟ್ ಬೇಲ್ ರದ್ದು ಮಾಡಿದ ಬಳಿಕ ಮತ್ತೆ ಪರಪ್ಪನ ಅಗ್ರಹಾರ ಸೇರಿದ ದರ್ಶನ್, ಎರಡೂವರೆ ತಿಂಗಳು ಜೈಲು ಸಜಾ ಅನುಭವಿಸಿ ಆಗಿದೆ. ಆರಂಭದಲ್ಲಿ ದರ್ಶನ್​ನ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡೋದಕ್ಕೆ ಜೈಲು ಅಧಿಕಾರಿಗಳು ಮುಂದಾಗಿದ್ರು. ಆದ್ರೆ ದಾಸನ ಪರ ವಕೀಲರು ಕೋರ್ಟ್​ನಲ್ಲಿ ಫೈಟ್ ಮಾಡಿ ಅದನ್ನ ತಪ್ಪಿಸಿದ್ರು.

ಆದ್ರೆ ಈ ಸಾರಿ ಪರಪ್ಪನ ಅಗ್ರಹಾರದಲ್ಲೂ ದಾಸನಿಗೆ ನರಕ ದರ್ಶನವಾಗ್ತಾ ಇದೆ. ಕಳೆದ ಸಾರಿ ರೌಡಿಗಳ ಜೊತೆ ಸೇರಿ ಪಾರ್ಟಿ ಮಾಡಿದ್ದ ದರ್ಶನ್​ಗೆ ಈ ಸಾರಿ ಕಟ್ಟುನಿಟ್ಟಿನ ಟ್ರೀಟ್​ಮೆಂಟ್ ನೀಡಲಾಗಿದೆ. ಜಸ್ಟ್ ದಿಂಬು, ಹಾಸಿಗೆಗೆ ನಾಲ್ಕಾರು ಬಾರಿ ಕೋರ್ಟ್​ ಗೆ ಅರ್ಜಿ ಸಲ್ಲಿಸಿದ್ದು ನೋಡಿದ್ರೆ ದರ್ಶನ್ ಸ್ಥಿತಿ ಹೇಗಿದೆ ಅನ್ನೋದು ನಿಮಗೆ ಗೊತ್ತಾಗಿರಬಹುದು. ಹೌದು ಕಳೆದ ಎರಡೂವರೇ ತಿಂಗಳಲ್ಲಿ ದರ್ಶನ್ ತೂಕ ಹತ್ತು ಕೆಜಿ ಕಡಿಮೆಯಾಗಿದೆಯಂತೆ. ಕ್ವಾರಂಟೈನ್ ಸೆಲ್‌ನಲ್ಲಿರುವ  ದರ್ಶನ್‌ ಮಾನಸಿಕ ಒತ್ತಡದಿಂದ ದಿನೇ ದಿನೇ ಸಣ್ಣ ಆಗ್ತಾ ಇದ್ದಾರಂತೆ. ಪರಪ್ಪನ ಅಗ್ರಹಾರದಲ್ಲಿ 20X30 ಅಳತೆಯ ಸೆಲ್​ನಲ್ಲಿ ದರ್ಶನ್​ ಆ್ಯಂಡ್​ ಗ್ಯಾಂಗ್​ ನ ಇರಿಸಲಾಗಿದೆ.

ದರ್ಶನ್‌ ಜತೆ ಅನು, ಜಗದೀಶ್, ಪ್ರದೋಶ್, ನಾಗರಾಜ್, ಲಕ್ಷ್ಮಣ್​ ಇದ್ದಾರೆ. ದರ್ಶನ್​ ಸೆಲ್​ನಲ್ಲಿ ಟಿವಿ ಇಲ್ಲ, ಎರಡು ಕ್ಯಾಮರಾಗಳನ್ನ  ಅಳವಡಿಕೆ ಮಾಡಲಾಗಿದೆ. ದರ್ಶನ್ ಅಂಡ್ ಗ್ಯಾಂಗ್ ಪ್ರತಿ ನಡೆಯನ್ನೂ ಕ್ಯಾಮೆರಾದಲ್ಲಿ ದಾಖಲು ಮಾಡಲಾಗ್ತಾ ಇದೆ. ಬ್ಯಾರಕ್‌ನಲ್ಲಿ ಕೆಲಸ ಮಾಡುವ ನಾಲ್ವರಿಗೆ ಬಾಡಿ ಕ್ಯಾಮರಾ ಅಳವಡಿಕೆ ಮಾಡಲಾಗಿದೆ. ಶಿಫ್ಟ್​ ವೈಸ್​ನಲ್ಲಿ ಜೈಲು ಸಿಬ್ಬಂದಿ ಭದ್ರತೆ ಕೆಲಸ ನಿರ್ವಹಿಸ್ತಾ ಇದ್ದಾರೆ. ಶಿಫ್ಟ್​ ಮುಗಿಯುವವರೆಗೂ ಬಾಡಿಕ್ಯಾಮರಾ ಕಾರ್ಯ ನಿರ್ವಹಿಸುತ್ತೆ. ಶಿಫ್ಟ್​ ಮುಗಿದ ಬಳಿಕ ರೆಕಾರ್ಡ್‌ ಆದ ವಿಡಿಯೋ ಅಪ್ಲೋಡ್​ ಮಾಡಲಾಗುತ್ತೆ. ಸೋ ಯಾವುದೇ ಕಾರಣಕ್ಕೂ ದರ್ಶನ್​ಗೆ ಹೆಚ್ಚಿನ ಸೌಲತ್ತು ಸಿಗೋದಕ್ಕೆ ಸಾಧ್ಯವೇ ಇಲ್ಲದಂಥಾ ಪರಿಸ್ಥಿತಿ ಜೈಲಿನಲ್ಲಿದೆ. ಇನ್ನೂ ಹಾಸಿಗೆ ಮತ್ತು ದಿಂಬಿನ ಬೇಡಿಕೆ ತಿರಸ್ಕೃತಗೊಂಡಿದ್ದು ದರ್ಶನ್​ನ ಚಿಂತೆಗೆ ತಳ್ಳಿದೆ. ಜೈಲು ಎಂಥವರನ್ನೂ ಪಶ್ಚಾತ್ತಾಪದ ಬೆಂಕಿಯಲ್ಲಿ ಬೆಂದು ಹೈರಾಣು ಮಾಡಿಬಿಡುತ್ತೆ.

ಜೈಲಿನ ಒಂಟಿತನ ಮಾನಸಿಕವಾಗಿ ಕುಗ್ಗಿಸುತ್ತೆ. ಈ ಹಿಂದೆ ದರ್ಶನ್ , ನಾನು ಇಲ್ಲಿಯೇ ಸಾಯಬೇಕಾ ಅಂತ ಕೂಗಾಡಿದ್ದ ವಿಷ್ಯ ಸುದ್ದಿಯಾಗಿತ್ತು. ಖಂಡಿತ ಸ್ವಾಂತಂತ್ರ ಕಳೆದುಕೊಂಡ ವ್ಯಕ್ತಿ ಹಾಗೆ ಮಾನಸಿಕವಾಗಿ ಸ್ಥಿಮಿತ ಕಳೆದುಕೊಳ್ತಾನೆ. ದರ್ಶನ್ ವಿಚಾರದಲ್ಲೂ ಆದೇ ಆಗ್ತಾ ಇದೆ. ಹೊರಗಿದ್ದಾಗ ಜಿಮ್ ಮಾಡ್ತಾ, ಶೂಟಿಂಗ್​ಗೆ ಹೋಗ್ತಾ, ಸೊಗಸಾದ ಊಟ ಮಾಡ್ತಾ, ಸಂಜೆ ಪಾರ್ಟಿ ಮಾಡ್ತಾ ಖುಷಿ ಖುಷಿಯಾಗಿ  ಇದ್ದ ದರ್ಶನ್ ದೇಹ ಮತ್ತು ಮನಸ್ಸು ಬಂಧಿಖಾನೆಯಲ್ಲಿ ಕುಗ್ಗಿ ಹೋಗಿವೆ. ಬೆನ್ನುನೋವು ಬೇರೆ ಬೆನ್ನು ಬಿದ್ದಿರೋದ್ರಿಂದ ದರ್ಶನ್ ದೈಹಿಕವಾಗಿಯೂ ಬಳಲಿದಂತೆ ಕಾಣ್ತಾ ಇದೆ. ಜೊತೆಗಾರರ ಜೊತೆಗೆ ಹೆಚ್ಚು ಬೆರೆಯದೇ ದಾಸ ಒಬ್ಬಂಟಿಯಾಗೇ ಇರ್ತಾನಂತೆ. ಈ ನಡುವೆ ದರ್ಶನ್ ತೂಕ ಗಣನೀಯವಾಗಿ ಕಡಿಮೆ ಆಗಿದೆ. 20X30 ಜೈಲು ಕೋಣೆ ದಾಸನಿಗೆ ನರಕ ದರ್ಶನ ಮಾಡಿಸ್ತಾ ಇದೆ.

29:53ಜೋಗಿ ಪ್ರೇಮ್‌, ನೋರಾ ಫತೇಹಿ ಸರ್ಸೆ ಸರ್ಸೆ ಹಾಡು; ದೆಹಲಿ, ಮುಂಬೈನಲ್ಲಿ ಸಿನಿಮಾ ತಂಡದ ವಿರುದ್ಧ ಪ್ರತ್ಯೇಕ ದೂರು
02:11ಮತ್ತೊಂದು ವಿಭಿನ್ನ ಪಾತ್ರದಲ್ಲಿ ನಟಿಸಿ ಗೆದ್ದ ರಾಜ್! ಆಗ ಕಾವಿ, ಈಗ ಖಾಕಿ. ನಮ್ ಶೆಟ್ರು ವರ್ಸಟೈಲ್ ಆಕ್ಟರ್!
02:31ಉದ್ಯಮಿ ಅರವಿಂದ್ ರೆಡ್ಡಿಗೆ ನಟಿ ಸ್ನೇಹಿತನಿಂದ ಬೆದರಿಕೆ: ಹಲವು ವಿಚಾರಗಳನ್ನು ಬಾಯ್ಬಿಟ್ಟ ಸ್ಯಾಂಡಲ್‌​ವುಡ್ ನಟಿ!
03:16ಹೊಸ ಅವತಾರದಲ್ಲಿ ಗಿಲ್ಲಿ ನಟ! ಈ ಚಿತ್ರದಲ್ಲಿ ಬಿಗ್ ಬಾಸ್ ಫೇಮ್ ವರ್ಕ್ ಆಗುತ್ತಾ?
02:38ಕ್ರಾಂತಿ ಕಿಡಿ ಹಚ್ಚಿದ ಲ್ಯಾಂಡ್​ ಲಾರ್ಡ್​ ಗೆ ಮೆಚ್ಚುಗೆ; ಕ್ರೂರಿ ಲ್ಯಾಂಡ್ ಲಾರ್ಡ್ ಆಗಿ ರಾಜ್ ಶೆಟ್ಟಿ!
04:59ಟಾಕ್ಸಿಕ್ ಹಸಿಬಿಸಿ ದೃಶ್ಯದ ವಿರುದ್ದ ಕಂಪ್ಲೇಂಟ್; ಈ ವಿವಾದದ ಬಗ್ಗೆ ಯಶ್ ಏನಂತಾರೆ..?
03:36Golden Star Ganesh ಬಗ್ಗೆ ಇಂಥ ಚಿಂತಾಜನಕ ಸುದ್ದಿ ಹರಡಿದ್ಯಾಕೆ? ಯಾಕೆ ಹೀಗಾಯ್ತು?
05:51ದರ್ಶನ್ ಪತ್ನಿ ವಿಜಯಲಕ್ಷ್ಮೀ ವಿರುದ್ಧ ಅಶ್ಲೀಲ ಕಾಮೆಂಟ್: ಇಬ್ಬರ ಅರೆಸ್ಟ್, ಫ್ಯಾನ್ಸ್ ವಾರ್‌ಗೆ ಬ್ರೇಕ್
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
Read more