ಸ್ಟಾರ್‌ವಾರ್‌ನಿಂದ ದೂರ ಉಳಿದ ಸುದೀಪ್..! ಪೈಪೋಟಿಗೆ ಬಿದ್ದು ಸಿನಿಮಾ ಅಪ್‌ಡೇಟ್ ಕೊಡಲ್ಲ ಎಂದ ಕಿಚ್ಚ..!

ಸ್ಟಾರ್‌ವಾರ್‌ನಿಂದ ದೂರ ಉಳಿದ ಸುದೀಪ್..! ಪೈಪೋಟಿಗೆ ಬಿದ್ದು ಸಿನಿಮಾ ಅಪ್‌ಡೇಟ್ ಕೊಡಲ್ಲ ಎಂದ ಕಿಚ್ಚ..!

Published : Feb 10, 2024, 11:39 AM ISTUpdated : Feb 10, 2024, 11:40 AM IST

ಚಿತ್ರರಂಗದಲ್ಲಿ ಸ್ಟಾರ್ ವಾರ್ ಸರ್ವೇ ಸಾಮಾನ್ಯ. ತೆಲುಗು, ತಮಿಳು ಚಿತ್ರರಂಗದಲ್ಲಿ ನಡೆಯೋ  ಸ್ಟಾರ್ ವಾರ್ ಫ್ಯಾನ್ಸ್ ವಾರ್ ನೋಡಿದ್ರೆ ನಮ್ಮ ಸ್ಯಾಂಡಲ್‌ವುಡ್‌ನಲ್ಲಿ ಸ್ಟಾರ್ ವಾರ್ ಸ್ವಲ್ಪ ಕಮ್ಮಿನೇ ಇದೆ. ಆದ್ರೂ ಆಗಾಗ ಸ್ಟಾರ್ ಸಿನಿಮಾಗಳ ಮಧ್ಯೆ ವಾರ್ ಆಗಿದ್ದನ್ನ ನೋಡಿದ್ದೇವೆ.

ಚಿತ್ರರಂಗದಲ್ಲಿ ಸ್ಟಾರ್ ವಾರ್ ಪೈಪೋಟಿ ಇರಬೇಕು. ಪೈಪೋಟಿ ಇದ್ರೇನೆ ಅದ್ಭುತ ಸಿನಿಮಾಗಳ ಬರೋದಕ್ಕೆ ಸಾಧ್ಯ. ಆದ್ರೆ ಪೈಪೋಟಿ ಹೆಲ್ತಿಯಾಗಿರಬೇಕು. ಭಟ್ ಸ್ಟಾರ್ ಫ್ಯಾನ್ಸ್ ಇದನ್ನ ವೈಯಕ್ತಿಯವಾಗಿ ತೆಗೆದುಕೊಂಡು ವಾರ್‌ಗೆ ಇಳಿತಾರೆ. ಈಗ ಚಿತ್ರರಂಗದಲ್ಲಿರೋ ಪೈಪೋಟಿ ಬಗ್ಗೆ ಕನ್ನಡದ ಬಿಗ್ ಸ್ಟಾರ್ ಕಿಚ್ಚ(Sudeep) ಬಾಯ್ಬಿಟ್ಟಿದ್ದಾರೆ. ಪೈಪೋಟಿಗೆ ಬಿದ್ದು ಸಿನಿಮಾ ಅಪ್ಡೇಟ್ ಕೊಡೋಕೆ ಆಗಲ್ಲ ಎಂದಿದ್ದಾರೆ ಬಾದ್ ಷಾ. ಸಾಮಾನ್ಯವಾಗಿ ನೆಚ್ಚಿನ ನಟರ ಸಿನಿಮಾಗಳ ಶೂಟಿಂಗ್ ನಡೆಯುತ್ತಿದ್ದರೆ, ಅದು ಯಾವಾಗ ತೆರೆಗೆ ಬರಲಿದೆ.? ಫಸ್ಟ್ ಲುಕ್ ಯಾವಾಗ ರಿಲೀಸ್..? ಟೀಸರ್ ಯಾವಾಗ ಬರತ್ತೆ..? ಹೀಗೆ ನಾನಾ ಪ್ರಶ್ನೆಗಳನ್ನು ಫ್ಯಾನ್ಸ್ ಕೇಳುತ್ತಾರೆ. ಇದೀಗ ನಟ 'ಕಿಚ್ಚ' ಸುದೀಪ್ ಅವರಿಗೂ ಇಂಥದ್ದೇ ಪ್ರಶ್ನೆ ಬಂದಿತ್ತು. ದರ್ಶನ್ ನಟನೆಯ ಕಾಟೇರ ಸಿನಿಮಾ ರಿಲೀಸ್ ಆಗಿ ಹಿಟ್ ಆಗಿದೆ ನೀವು ಮ್ಯಾಕ್ಸ್ ಅಪ್ಡೇಟ್ ಕೊಡಿ ಫ್ಯಾನ್ಸ್(Fans) ಅಂತ ಫ್ಯಾನ್ಸ್ ಕೇಳಿದ್ರು. ಇದನ್ನ ನೋಡುತ್ತಿದ್ದಂತೆ ಗರಂ ಆದ ಕಿಚ್ಚ 'ಪೈಪೋಟಿಗೋಸ್ಕರ(Competition) ಸಿನಿಮಾದ ಅಪ್‌ಡೇಟ್ ಕೊಡಲು ಸಾಧ್ಯವಿಲ್ಲ..' ಅಂತ ನೇರವಾಗಿ ಫ್ಯಾನ್ಸ್‌ಗೆ ಹೇಳಿದ್ದಾರೆ.

ಸ್ಯಾಂಡಲ್‌ವುಡ್‌ನಲ್ಲಿ ಸ್ಟಾರ್‌ಗಳ ಮಧ್ಯೆಯ ಪೈಪೋಟಿಗೆ ಹಲವಾರು ಉದಹಾರಣೆಗಳಿವೆ. ರಾಜ್ ಕುಮಾರ್ ವಿಷ್ಣುವರ್ಧನ್ ಮಧ್ಯೆಯೂ ಪೈಪೋಟಿ ಇತ್ತು. ಈಗಿನ ಸ್ಟಾರ್ಸ್ ಯಶ್ ದರ್ಶನ್, ಸುದೀಪ್ ಧ್ರುವ ಸಿನಿಮಾಗಳ ಮಧ್ಯೆಯೂ ಪೈಪೋಟಿ ಏರ್ಪಟ್ಟಿದ್ದಿದೆ. ಆದ್ರೆ ಅದೆಲ್ಲಾ ಹೆಲ್ತಿಯಾಗಿರೋ ಪೈಪೋಟಿ ಅನ್ನೋದು ಫ್ಯಾನ್ಸ್ ಅರ್ಥಮಾಡಿಕೊಂಡ್ರೆ, ಫ್ಯಾನ್ಸ್‌ಗಳ ಮಧ್ಯೆ ನಡೆಯೋ ವಾರ್ ಕಡಿಮೆ ಆಗ್ಬಹುದೇನೋ. ಇದಕ್ಕೆ ಕಿಚ್ಚ ಹೇಳಿದ್ದು ಪೈಪೋಟಿಗೆ ಬಿದ್ದು ಸಿನಿಮಾ ಅಪ್ಡೇಟ್ ಕೊಡೋಕೆ ಆಗಲ್ಲ ಅಂತ.

ಇದನ್ನೂ ವೀಕ್ಷಿಸಿ:  Vijay- Vishal: ಕಾಲಿವುಡ್‌ನಲ್ಲಿ ಸ್ಟಾರ್‌ಗಳ ರಾಜಕೀಯ ದಂಗಲ್..! ವಿಜಯ್ ರಾಜಕೀಯ ಎಂಟ್ರಿ, ವಿಶಾಲ್‌ಗೆ ಉರಿ ಉರಿ..!

02:45ನಟ ದರ್ಶನ್ ಬೇಲ್‌ಗೆ ಮತ್ತೆ ಹಿನ್ನಡೆ: ಪತಿಯ ಬಿಡುಗಡೆಗಾಗಿ ವಿಜಯಲಕ್ಷ್ಮೀ ಪ್ರಯತ್ನ ಫಲ ಕೊಡುತ್ತಾ?
24:34ಸ್ಯಾಂಡಲ್​​ವುಡ್​​ನಲ್ಲಿ ಸಾಲು ಸಾಲು ಅಕಾಲಿಕ ಮರಣ..! ಮೃತ್ಯುಂಜಯ ಹೋಮ ಫಲಿಸಲಿಲ್ವಾ..?
03:06'ಸೆಪ್ಟೆಂಬರ್ 21' ಚಿತ್ರದ ಟ್ರೇಲರ್ ಬಿಡುಗಡೆ: ಪತ್ನಿ ಪ್ರಿಯಾಂಕ ಸಿನಿಮಾಗೆ ರಿಯಲ್ ಸ್ಟಾರ್ ಉಪೇಂದ್ರ ಸಾಥ್‌
05:27ಸಿಂಗರ್‌ನಿಂದ ಹೀರೋವರೆಗೆ: ‘ಲೋ ನವೀನ’ ಮೂಲಕ ನವೀನ್ ಸಜ್ಜು ಹೊಸ ಪ್ರಯಾಣ
03:45ಸಿದ್ದೇಗೌಡರ ಗದ್ಲಗೆ ಜಾಕ್​ಪಾಟ್: ಮತ್ತೆ ಮೋಡಿ ಮಾಡ್ತಾರಾ ಸತೀಶ್​ ನೀನಾಸಂ-ರಚಿತಾ ರಾಮ್?
06:20ದರ್ಶನ್‌ ದಾರಿಗೆ 'ಜೈ' ಎಂದ ಅಲ್ಲು ಅರ್ಜುನ್.. ಟಾಲಿವುಡ್‌ನಲ್ಲಿ ಹೊಸ ಕ್ರಾಂತಿ ಹುಟ್ಟಿಸಿದ ಐಕಾನ್ ಸ್ಟಾರ್!
05:36ಬ್ಯಾಂಕಾಕ್‌ಗೆ ಹಾರಿದ ರಶ್ಮಿಕಾ ಮಂದಣ್ಣ, 'ಆಕ್ಷನ್ ಕ್ವೀನ್' ಆಗೋದಕ್ಕೆ ಸಜ್ಜಾಗ್ತಿದ್ದಾರಾ ರಶ್ಮಿಕಾ?
05:06ಒಬ್ರು ಅಪರಾಧಿ, ಇನ್ನೊಬ್ರು ಆರೋಪಿ.. ಜೈಲಿನಲ್ಲಿ ಅಕ್ಕಪಕ್ಕದಲ್ಲೇ ವಾಸ; ದರ್ಶನ್‌ಗೆ ಢವಢವ!
04:43ನಟ ಯಶ್‌ಗೆ ಪಕ್ಕದ ರಾಜ್ಯಗಳಲ್ಲೇ ದುಶ್ಮನ್‌ಗಳು ಕಾಡ್ತಿದ್ದಾರಾ? ಸುಳ್ಳು ಸುದ್ದಿ ಹಬ್ಬಿಸಿ ಟಾರ್ಗೆಟ್‌ ಮಾಡ್ತಿದ್ದಾರಾ?
07:32ಮರ್ಯಾದಾ ಪುರುಷೋತ್ತಮನಾಗಿ ಮನಗೆದ್ದ ರಣಬೀರ್; ಒಂದೇ ಒಂದು ಬ್ಯಾಕ್ ಶಾಟ್ ಮೂಲಕ ಮಿಂಚು ಹರಿಸಿದ ಯಶ್!
Read more