ಟ್ರೈಲರ್ ರಿಲೀಸ್ ಕಾರ್ಯಕ್ರಮ: ಹಿರಿಯ ಕಲಾವಿದ ಅಂದವರಿಗೆ ಫನ್ನಿಯಾಗಿ ಕಿಚಾಯಿಸಿದ ಸುದೀಪ್!

ಟ್ರೈಲರ್ ರಿಲೀಸ್ ಕಾರ್ಯಕ್ರಮ: ಹಿರಿಯ ಕಲಾವಿದ ಅಂದವರಿಗೆ ಫನ್ನಿಯಾಗಿ ಕಿಚಾಯಿಸಿದ ಸುದೀಪ್!

Published : Jul 16, 2023, 03:22 PM IST

ಹಿರಿ ಕಿರಿಯರ ಸಮ್ಮಿಲನದ ಸಿನಿಮಾಗೆ ಸುದೀಪ್ ಸಪೋರ್ಟ್!
ಕೌಸಲ್ಯಾ ಸುಪ್ರಜಾ ರಾಮ ಟ್ರೈಲರ್ ರಿಲೀಸ್ ಮಾಡಿದ ಹೆಬ್ಬುಲಿ..!
ಕೌಸಲ್ಯಾ ಸುಪ್ರಜಾ ರಾಮ ಚಿತ್ರಕ್ಕೆ ಅರ್ಜುನ್ ಜನ್ಯಾ ಮ್ಯೂಸಿಕ್!

ಡಾರ್ಲಿಂಗ್ ಕೃಷ್ಣ ನಾಯಕನಾಗಿ ನಟಿಸಿರೋ ಕೌಸಲ್ಯಾ ಸುಪ್ರಜಾ ರಾಮ(Kausalya Supraja Rama) ಸಿನಿಮಾದ ಟ್ರೈಲರ್(trailer) ಬಿಡುಗಡೆ ಕಾರ್ಯಕ್ರಮಕ್ಕೆ ಸ್ಯಾಂಡಲ್ವುಡ್ ಸೂಪರ್ ಸ್ಟಾರ್, ಭಾರತೀಯ ಚಿತ್ರರಂಗದ ಬಾದ್ ಷಾ ಕಿಚ್ಚ ಸುದೀಪ್(Kichcha Sudeep) ಗೆಸ್ಟ್ ಆಗಿ ಬಂದಿದ್ರು. ಈ ಸಿನಿಮಾ ನಿರ್ಮಾಣ ಮಾಡ್ತಿರೋದು ಮಾಜಿ ಸಚಿವ, ಸ್ಯಾಂಡಲ್ವುಡ್ನ ಕೌರವ ಬಿ.ಸಿ ಪಾಟೀಲ್. ಕೃಷ್ಣನ್ ಲವ್ ಸ್ಟೋರಿಯಂತಹ ಹಿಟ್ ಸಿನಿಮಾಗಳನ್ನ ಕೊಟ್ಟ ಶಶಾಂಕ್ ನಿರ್ದೇಶನದ ಸಿನಿಮಾ ಇದು. ಈ ಸಿನಿಮಾ ಟ್ರೈಲರ್ ರಿಲೀಸ್ ಕಾರ್ಯಕ್ರಮದಲ್ಲಿ ಒಂದು ಫನ್ನಿ ಘಟನೆ ನಡೀತು. ಅದೇನ್ ಗೊತ್ತಾ.? ಚಿತ್ರತಂಡದವರೆಲ್ಲಾ ಕಿಚ್ಚ  ಹಿರಿಯ ಕಲಾವಿದ ಸುದೀಪ್ ನಮ್ಮ ಕಾರ್ಯಕ್ರಮಕ್ಕೆ ಬಂದಿದ್ದಾರೆ ಅಂತ ಸ್ಟೇಜ್ ಹತ್ತುತ್ತಿದ್ದಂತೆ ಮಾತಿಗಿಳಿದ್ರು. ಆದ್ರೆ ಸುದೀಪ್ ವೇದಿಕೆ ಏರಿ ಹಿರಿಯ ಕಲಾವಿದ ಅಂದವರಿಗೆ ತನ್ನದೇ ದಾಟಿಯಲ್ಲಿ ಫನ್ನಿಯಾಗಿ ಕಿಚಾಯಿಸಿದ್ರು ಕಿಚ್ಚ. ಕೌಸಲ್ಯಾ ಸುಪ್ರಜಾ ರಾಮ ಟ್ರೈಲರ್ ರಿಲೀಸ್ ಕಾರ್ಯಕ್ರಮದಲ್ಲಿ ಮತ್ತೊಂದು ಇಂಟ್ರೆಸ್ಟಿಂಗ್ ಘಟನೆ ನಡೀತು. ಈ ಸಿನಿಮಾದ ನಾಯಕಿ ಬೃಂದಾ ಆಚಾರ್ (Brinda Acharya)ನನಗೆ ಕಿಚ್ಚ ಸುದೀಪ್ ಸರ್ ತರದ ಲವರ್ ಬೇಕು. ಸುದೀಪ್ ಸರ್ ನನಗೆ ತುಂಬಾ ಇಷ್ಟ ಅಂತ ಹೇಳ್ಬಿಟ್ರು. ಇದಕ್ಕೆ ಕಿಚ್ಚ ಫುಲ್ ಬ್ಲಷ್ ಆಗಿ ಎಲ್ಲರೂ ಹಿರಿಯ ನಟ ಅಂತ ಕರೆದ್ರು. ಆದ್ರೆ ಬೃಂಧಾ ನನಗೆ ನಿಮ್ ತರ ಲವರ್ ಬೇಕು ಅಂದ್ರಿ ನನಗೆ ಜೀವ ಬಂತು ಅಂತ ಹಾಸ್ಯ ಚಟಾಕೆ ಹರಸಿದ್ರು. ಕಿಚ್ಚನ ಕಾಮಿಡಿಯಿಂದ ಕೌಸಲ್ಯಾ ಸುಪ್ರಜಾ ರಾಮ ಸಿನಿಮಾದ ಕಾರ್ಯಕ್ರಮ ಸಿಕ್ಕಾಪಟ್ಟೆ ಎಂಟರ್ಟೈನಿಂಗ್ ಆಗಿತ್ತು.

ಇದನ್ನೂ ವೀಕ್ಷಿಸಿ:  ಕೆಜಿಎಫ್ ಸರಣಿ ನೋಡಿ ಥ್ರಿಲ್ ಆದ ಜಪಾನ್ ಮಂದಿ: ಎರಡು ದಿನಕ್ಕೆ ಜಪಾನ್‌ನಲ್ಲಿ ಗಳಿಸಿದ್ದೆಷ್ಟು..?

02:45ನಟ ದರ್ಶನ್ ಬೇಲ್‌ಗೆ ಮತ್ತೆ ಹಿನ್ನಡೆ: ಪತಿಯ ಬಿಡುಗಡೆಗಾಗಿ ವಿಜಯಲಕ್ಷ್ಮೀ ಪ್ರಯತ್ನ ಫಲ ಕೊಡುತ್ತಾ?
24:34ಸ್ಯಾಂಡಲ್​​ವುಡ್​​ನಲ್ಲಿ ಸಾಲು ಸಾಲು ಅಕಾಲಿಕ ಮರಣ..! ಮೃತ್ಯುಂಜಯ ಹೋಮ ಫಲಿಸಲಿಲ್ವಾ..?
03:06'ಸೆಪ್ಟೆಂಬರ್ 21' ಚಿತ್ರದ ಟ್ರೇಲರ್ ಬಿಡುಗಡೆ: ಪತ್ನಿ ಪ್ರಿಯಾಂಕ ಸಿನಿಮಾಗೆ ರಿಯಲ್ ಸ್ಟಾರ್ ಉಪೇಂದ್ರ ಸಾಥ್‌
05:27ಸಿಂಗರ್‌ನಿಂದ ಹೀರೋವರೆಗೆ: ‘ಲೋ ನವೀನ’ ಮೂಲಕ ನವೀನ್ ಸಜ್ಜು ಹೊಸ ಪ್ರಯಾಣ
03:45ಸಿದ್ದೇಗೌಡರ ಗದ್ಲಗೆ ಜಾಕ್​ಪಾಟ್: ಮತ್ತೆ ಮೋಡಿ ಮಾಡ್ತಾರಾ ಸತೀಶ್​ ನೀನಾಸಂ-ರಚಿತಾ ರಾಮ್?
06:20ದರ್ಶನ್‌ ದಾರಿಗೆ 'ಜೈ' ಎಂದ ಅಲ್ಲು ಅರ್ಜುನ್.. ಟಾಲಿವುಡ್‌ನಲ್ಲಿ ಹೊಸ ಕ್ರಾಂತಿ ಹುಟ್ಟಿಸಿದ ಐಕಾನ್ ಸ್ಟಾರ್!
05:36ಬ್ಯಾಂಕಾಕ್‌ಗೆ ಹಾರಿದ ರಶ್ಮಿಕಾ ಮಂದಣ್ಣ, 'ಆಕ್ಷನ್ ಕ್ವೀನ್' ಆಗೋದಕ್ಕೆ ಸಜ್ಜಾಗ್ತಿದ್ದಾರಾ ರಶ್ಮಿಕಾ?
05:06ಒಬ್ರು ಅಪರಾಧಿ, ಇನ್ನೊಬ್ರು ಆರೋಪಿ.. ಜೈಲಿನಲ್ಲಿ ಅಕ್ಕಪಕ್ಕದಲ್ಲೇ ವಾಸ; ದರ್ಶನ್‌ಗೆ ಢವಢವ!
04:43ನಟ ಯಶ್‌ಗೆ ಪಕ್ಕದ ರಾಜ್ಯಗಳಲ್ಲೇ ದುಶ್ಮನ್‌ಗಳು ಕಾಡ್ತಿದ್ದಾರಾ? ಸುಳ್ಳು ಸುದ್ದಿ ಹಬ್ಬಿಸಿ ಟಾರ್ಗೆಟ್‌ ಮಾಡ್ತಿದ್ದಾರಾ?
07:32ಮರ್ಯಾದಾ ಪುರುಷೋತ್ತಮನಾಗಿ ಮನಗೆದ್ದ ರಣಬೀರ್; ಒಂದೇ ಒಂದು ಬ್ಯಾಕ್ ಶಾಟ್ ಮೂಲಕ ಮಿಂಚು ಹರಿಸಿದ ಯಶ್!
Read more