ʼರಾಕೇಶ್‌ ಪೂಜಾರಿ, ನೀನು ಎಂದೆಂದಿಗೂ ಅದ್ಬುತ ನಟ..’ ರಿಷಬ್ ಶೆಟ್ಟಿ ಕಣ್ಣೀರು

ʼರಾಕೇಶ್‌ ಪೂಜಾರಿ, ನೀನು ಎಂದೆಂದಿಗೂ ಅದ್ಬುತ ನಟ..’ ರಿಷಬ್ ಶೆಟ್ಟಿ ಕಣ್ಣೀರು

Published : May 14, 2025, 01:36 PM ISTUpdated : May 14, 2025, 02:30 PM IST

ಆತ ಕಾಮಿಡಿ ಕಿಲಾಡಿಗಳು ಸೀಸನ್​-3 ವಿಜೇತ.. ಕನ್ನಡ ಚಿತ್ರರಂಗದಲ್ಲಿ ನೆಲೆನಿಲ್ಲುವ ಕನಸು ಕಂಡಿದ್ದ ಪ್ರತಿಭಾನ್ವಿತ. ಕಾಂತಾರ ಚಾಪ್ಟರ್​-1 ನಲ್ಲಿ ಆತನಿಗಿತ್ತು  ಅದ್ಭುತ ಪಾತ್ರ. ಇನ್ನೇನು ಬರಲಿರುವ ದಿನಗಳು ತನ್ನವು ಅಂದುಕೊಂಡಿದ್ದ  ಆ ನಟನ ಬದುಕಿನ ಆಟವನ್ನ ವಿಧಿ ಮುಕ್ತಾಯಗೊಳಿಸಿದೆ. ಯುವನಟ ರಾಕೇಶ್ ಪೂಜಾರಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾನೆ. ರಾಕೇಶ್ ಅಗಲಿಕೆಗೆ ರಿಷಬ್ ಶೆಟ್ಟಿ ಕೂಡ ಕಣ್ಣೀರು ಹಾಕಿದ್ದಾರೆ.

ರಾಕೇಶ್ ಪೂಜಾರಿ. ಉಡುಪಿ ಮೂಲದ ಈ ಹುಡುಗ ಜೀ ಕನ್ನಡದ ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದ ಮೂಲಕ ಕನ್ನಡಿಗರಿಗೆ ಪರಿಚಿತನಾದವನು. ಕಾಮಿಡಿ ಕಿಲಾಡಿಗಳು ಸಿಸನ್​-2ನಲ್ಲಿ ತನ್ನ ಅದ್ಭುತ ಟೈಮಿಂಗ್ ನಿಂದ ಎಲ್ಲರನ್ನೂ ನಕ್ಕುನಗಿಸ್ತಾ ಇದ್ದ ರಾಕೇಶ್ ಎಲ್ಲರ ಮನಸು ಗೆದ್ದಿದ್ದ.ಉಡುಪಿಯ ಈ ಹೈದನಿಗೆ ಖಂಡಿತ ಒಳ್ಳೆ ಭವಿಷ್ಯ ಇದೆ ಅಂತ ಕಾಮಿಡಿ ಕಿಲಾಡಿಗಳು ತೀರ್ಪು್ಗಾರರು ಪ್ರಶಂಸೆ ಮಾಡಿದ್ರು. ಅಂತೆಯೇ ರಾಕೇಶ್ ಪೂಜಾರಿ ಕಾಮಿಡಿ ಕಿಲಾಡಿಗಳು ಸೀಸನ್​-3 ವಿನ್ನರ್ ಆಗಿದ್ದ.

ಹೌದು ರಿಷಬ್ ಶೆಟ್ಟಿ ನಟನೆ-ನಿರ್ದೇಶನದ ಕಾಂತಾರ ಚಾಪ್ಟರ್-1 ನಲ್ಲಿ ರಾಕೇಶ್​ಗೆ ಒಂದು ಅದ್ಭುತ ಪಾತ್ರ ಸಿಕ್ಕಿತ್ತು. ಇಡೀ ಜಗತ್ತೇ ಕಾಯ್ತಾ ಇರೋ ಈ ಬಹುನಿರೀಕ್ಷೆಯ ಸಿನಿಮಾದಲ್ಲಿ ನಟನೆಯ ಅವಕಾಶ ಸಿಕ್ಕಿದ್ದನ್ನ ನೋಡಿ ರಾಕೇಶ್ ತುಂಬಾನೇ ಖುಷಿ ಪಟ್ಟಿದ್ದ. ಎಲ್ಲರ ಬಳಿಯೂ ಈ ವಿಷ್ಯ ಹೇಳಿ ಸಂತಸ ಪಟ್ಟಿದ್ದ. ಈ ಸಿನಿಮಾ ಬಂದ ಮೇಲೆ ತನ್ನ ಬದುಕು ಬದಲಾಗುತ್ತೆ ಅನ್ನೋ ಆಸೆ ಇಟ್ಟುಕೊಂಡಿದ್ದ.


 

06:59ಜಿಮ್ ಮಾಡ್ತಿದ್ದ ದರ್ಶನ್ 'ಯೋಗ' ಮಾಡುವಂತಾಗಿದ್ದು ಹೀಗೆ.. ಅವರು ಹೇಳಿಲ್ಲಾ ಅಂದ್ರೆ ಇವರು ಮಾಡ್ತಿರ್ಲಿಲ್ಲ!?
05:4622 ವರ್ಷಗಳ ಬಳಿಕ ಮತ್ತೆ ಬಂತು ಕಲಾಸಿಪಾಳ್ಯ; ಸಿನಿಮಾ ಮೂಲಕ ಫ್ಯಾನ್ಸ್‌ಗೆ 'ಕೆಂಚ'ನ 'ದರ್ಶನ'
13:34Darshan-Boss: ದರ್ಶನ್‌ಗೆ ಯಾಕೆ ಇಷ್ಟೊಂದು ಟೆನ್ಷನ್? 'ಬಾಸ್' ಸಿನಿಮಾದಲ್ಲಿ ಅಂಥದ್ದೇನಿದೆ?
04:23Cine Express: ಸಿನಿ ಪ್ರೇಮಿಗಳಿಗೆ ಗುಡ್ ನ್ಯೂಸ್: ಟೀಸರ್, ಹಾಡು, ಸಿನಿಮಾ ರಿಲೀಸ್ ಮತ್ತು ಮದುವೆ ಸುದ್ದಿ!
04:28ಚಿನ್ನೇಗೌಡರ ಪತ್ನಿ ಜಯಮ್ಮ ವಿಧಿವಶ; ವಿಜಯ್ ರಾಘವೇಂದ್ರ, ಶ್ರೀಮುರುಳಿಗೆ ಮಾತೃವಿಯೋಗ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
04:33Cine Express: '8' ಗ್ಲಿಂಪ್ಸ್‌ನಿಂದ 'ಊರಬ್ಬ' ಟ್ರೇಲರ್‌ವರೆಗೆ: ಸ್ಯಾಂಡಲ್‌ವುಡ್‌ನಲ್ಲಿ ಸಿನಿಮಾಗಳ ಹವಾ
04:30Cine Express: ಈ ವಾರ ಸಿನಿ ಇಂಡಸ್ಟ್ರಿಯಲ್ಲಿ ಹೆಚ್ಚು ಚರ್ಚೆಯಾದ 5 ದೊಡ್ಡ ಅಪ್‌ಡೇಟ್‌ಗಳು ಯಾವುವು?
04:09ಅಪ್ಪನಿಗಾಗಿ ಬಂದ ಹೊಸ ಹಾಡು, ಕಾನ್ಸ್‌ನಲ್ಲಿ ಮೆಚ್ಚುಗೆ ಪಡೆದ ಚಿತ್ರದ ಟ್ರೇಲರ್: ಸಿನಿರಂಗದಲ್ಲಿ ಏನಾಗುತ್ತಿದೆ?
04:18ಸ್ಯಾಂಡಲ್​ವುಡ್​ನಲ್ಲಿ ಮತ್ತೆ ನೆಪೋಟಿಸಂ ಕಿಚ್ಚು: ವಿವಾದಕ್ಕೆ ಅಂತ್ಯ ಹಾಡಿದ ಶಿವಣ್ಣ
Read more