ನವೀಶ್ ಶಂಕರ್ 'ಕ್ಷೇತ್ರಪತಿ'ಗೆ ಅನ್ನದಾತರ ಬೆಂಬಲ..! ಸಿನಿಮಾ ನೋಡಲು ಎತ್ತಿನ ಬಂಡಿ ಏರಿ ಬಂದ ರೈತ..!

ನವೀಶ್ ಶಂಕರ್ 'ಕ್ಷೇತ್ರಪತಿ'ಗೆ ಅನ್ನದಾತರ ಬೆಂಬಲ..! ಸಿನಿಮಾ ನೋಡಲು ಎತ್ತಿನ ಬಂಡಿ ಏರಿ ಬಂದ ರೈತ..!

Published : Sep 02, 2023, 09:46 AM IST

ಅನ್ನದಾತರ ಮನ ಗೆಲ್ಲುತ್ತಿದೆ ರೈತ ಹೋರಾಟದ ಕ್ಷೇತ್ರಪತಿ!
ಕ್ಷೇತ್ರಪತಿ ಕೈ ಹಿಡಿದ ಕಲಬುರಗಿ ತಾಲೂಕಿನ ರೈತ ಬಳಗ!
ಉತ್ತರ ಕರ್ನಾಟಕ ರೈತರ ಮನ ಗೆದ್ದ ಕ್ಷೇತ್ರಪತಿ ಸಿನಿಮಾ!

ರೈತ ಈ ದೇಶದ ಬೆನ್ನೆಲುಬು. ರೈತ ಮನಸ್ಸು ಮಾಡಿದ್ರೆ ದೇಶವನ್ನ ಕಟ್ಟಲೂಬಹುದು. ಅನ್ಯಾಯದ ವಿರುದ್ಧ ದಂಗೆಯನ್ನೂ ಏಳಬಹುದು. ಆದ್ರೆ ಒಬ್ಬ ರೈತ ಮನಸ್ಸು ಮಾಡಿದ್ರೆ ಸಿನಿಮಾವನ್ನೂ ಗೆಲ್ಲಿಸಬಹುದು ಅಂತ ಎಂದಾದ್ರು ಕೇಳಿದ್ರಾ..? ಅದು ಈಗ ಸ್ಯಾಂಡಲ್‌ವುಡ್‌ನಲ್ಲಿ(Sandalwood) ಆಗ್ತಿದೆ. ಅಪ್ಪಟ ರೈತರ ಕಥೆಯ ಸಿನಿಮಾ ಕ್ಷೇತ್ರಪತಿಗೆ(Kshetrapati) ಜನ ಬೆಂಬಲ ಸಿಕ್ಕಿರೋದ್ದಷ್ಟೇ ಅಲ್ಲ ಈಗ ರೈತರ ಬೆಂಬಲವೂ ಸಿಕ್ಕಿದೆ. ನವೀನ್ ಶಂಕರ್ ನಟನೆಯ ಕ್ಷೇತ್ರಪತಿ ಸಿನಿಮಾ ಬಿಡುಗಡೆ ಆಗಿ 15 ದಿನ ಆಗಿದೆ. ಇದೀಗ ಈ ಸಿನಿಮಾ ನೋಡಲು ರೈತರ ದಂಡು ಚಿತ್ರಮಂದಿರಕ್ಕೆ ನುಗ್ಗುತ್ತಿದೆ. ಕಲಬುರಗಿ(Kalaburagi) ತಾಲೂಕಿನ ಪಟ್ಟಣ ಗ್ರಾಮದಿಂದ ಆರ್ಚಿಡ್ ಮಾಲ್ ನ ಮಲ್ಟಿಫ್ಲೆಕ್ಸ್ ಗೆ ಕ್ಷೇತ್ರಪತಿ ನೋಡಲು ಎತ್ತಿನ ಬಂಡಿ ಏರಿ ಬಂದಿದ್ದಾರೆ ರೈತರು. ಮಲ್ಟಿಪ್ಲೆಕ್ಸ್ ಥಿಯೇಟರ್‌ನಲ್ಲಿ ಕಾರು ಬೈಕ್ ಪಾರ್ಕಿಂಗ್ ಮಾಡೋದನ್ನ ನೋಡಿದ್ದೇವೆ. ಆದ್ರೆ ಕ್ಷೇತ್ರಪತಿ ಇರೋ ಚಿತ್ರಮಂದಿರದಲ್ಲಿ ಎತ್ತಿನ ಬಂಡಿ ಪಾರ್ಕಿಂಗ್ ಮಾಡಿದ್ದನ್ನ ನೋಡಿ ಸಿನಿಮಾ ನೋಡಲು ಬಂದ ಪ್ರೇಕ್ಷಕರು ತ್ರಿಲ್ ಆಗಿದ್ರು. ರೈತರ ಹೋರಾಟದ ಕತೆಯ ಕ್ರೇತ್ರಪತಿ ಸಿನಿಮಾವನ್ನ ಶ್ರೀಕಾಂತ್ ಕಟಗಿ ನಿರ್ದೇಶನ ಮಾಡಿದ್ದು, ನವೀನ್ ಶಂಕರ್ ಅರ್ಚನಾ ಜೋಯಿಸ್ ಜೋಡಿ ಸಿನಿಮಾದಲ್ಲಿ ಮೋಡಿ ಮಾಡುತ್ತಿದೆ.  

ಇದನ್ನೂ ವೀಕ್ಷಿಸಿ:  ಸುದೀಪ್ ಬರ್ತಡೇ ಫೆಸ್ಟಿವೆಲ್‌ಗೆ ಭಾರಿ ತಯಾರಿ: ನಂದಿ ಲಿಂಕ್ಸ್‌ ಗ್ರೌಂಡ್‌ನಲ್ಲಿ ಫ್ಯಾನ್ಸ್ ಭೇಟಿ !

03:36Golden Star Ganesh ಬಗ್ಗೆ ಇಂಥ ಚಿಂತಾಜನಕ ಸುದ್ದಿ ಹರಡಿದ್ಯಾಕೆ? ಯಾಕೆ ಹೀಗಾಯ್ತು?
05:51ದರ್ಶನ್ ಪತ್ನಿ ವಿಜಯಲಕ್ಷ್ಮೀ ವಿರುದ್ಧ ಅಶ್ಲೀಲ ಕಾಮೆಂಟ್: ಇಬ್ಬರ ಅರೆಸ್ಟ್, ಫ್ಯಾನ್ಸ್ ವಾರ್‌ಗೆ ಬ್ರೇಕ್
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!
04:23'ತ್ರಿಮೂರ್ತಿ'ಗಳ ಹಾಲಿವುಡ್‌ ರೇಂಜ್ ಮೇಕಿಂಗ್ '45' ಸಿನಿಮಾ ಟ್ರೈಲರ್ ನೋಡಿದವ್ರು ಏನಂತಿದಾರೆ?!
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
04:38Video: ನಟಿ ರಮ್ಯಾಗೆ ಸಂದರ್ಶನದಲ್ಲೇ ತಿರುಗೇಟು ಕೊಟ್ಟ Actor Darshan Wife Vijayalakshmi
04:51ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!
05:21ರಾಜ್ಯಾದ್ಯಂತ Devil ಜಾತ್ರೆ.. ಮ್ಯಾಸಿವ್ ಓಪನಿಂಗ್: ದರ್ಶನ್ ನೋಡಿದ ಅಭಿಮಾನಿಗಳು ಹೇಳಿದ್ದೇನು?
Read more