Hombale Films: ಮತ್ತೊಂದು ಬಿಗ್ ಬಜೆಟ್ ಸಿನಿಮಾಗೆ ಹೊಂಬಾಳೆ ಪ್ಲ್ಯಾನ್..! ಈ ಭಾರಿ ಸಿಕ್ಕ ಆ ಸ್ಟಾರ್ ಹೀರೋ ಯಾರು..?

Hombale Films: ಮತ್ತೊಂದು ಬಿಗ್ ಬಜೆಟ್ ಸಿನಿಮಾಗೆ ಹೊಂಬಾಳೆ ಪ್ಲ್ಯಾನ್..! ಈ ಭಾರಿ ಸಿಕ್ಕ ಆ ಸ್ಟಾರ್ ಹೀರೋ ಯಾರು..?

Published : Jan 08, 2024, 10:38 AM ISTUpdated : Jan 08, 2024, 10:39 AM IST

ಹೊಂಬಾಳೆ ಫಿಲ್ಮ್ಸ್‌ ಇದು ಸ್ಯಾಂಡಲ್‌ವುಡ್ ಪ್ರೈಡ್. ಭಾರತೀಯ ಚಿತ್ರರಂಗಲ್ಲಿ ಬಿಗ್ ಬಜೆಟ್ ಸಿನಿಮಾಗಳನ್ನ ಕೊಡುತ್ತಿರೋ ಹೊಂಬಾಳೆ ಇಂದು ಹೆಮ್ಮರವಾಗಿ ಬೆಳೆದಿದೆ. ಹೊಂಬಾಳೆ ಸಾರಥಿ ವಿಜಯ್ ಕಿರಗಂಧೂರು, ಚಿತ್ರ ಪ್ರೇಮಿಗಳನ್ನ ರಂಜಿಸೋಕೆ ಐದು ವರ್ಷದಲ್ಲಿ 3 ಸಾವಿರ ಕೋಟಿಯನ್ನ ಸಿನಿ ರಂಗದ ಮೇಲೆ ಹೂಡುತ್ತಿದ್ದೇವೆ ಅಂತ ಹೇಳಿದ್ರು.

ಹೊಂಬಾಳೆ ಫಿಲ್ಮ್ಸ್‌ ಮಾಡಿದ್ದೆಲ್ಲಾ ಸ್ಟಾರ್ ಸಿನಿಮಾಗಳನ್ನೇ. ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್‌ರಿಂದ ಶುರುವಾದ ಹೊಂಬಾಳೆ ಜರ್ನಿ, ಯಶ್, ಪ್ರಭಾಸ್, ರಿಷಬ್ ಶೆಟ್ಟಿ, ಫಹಾದ್ ಫಾಸಿಲ್‌ನಂತಹ ಬಿಗ್ ಸ್ಟಾರ್‌ಗಳನ್ನ ನಂಬಿ ದುಡ್ಡು ಸುರಿದು ದುಡ್ಡೂ ಬಾಚಿದೆ. ಈಗ ಮತ್ತೊಂದು ಬಿಗ್ ಬಜೆಟ್ ಸಿನಿಮಾಗೆ ಹೊಂಬಾಳೆ ಬ್ಯಾನರ್(Homble Banner) ಸಿದ್ಧವಾಗ್ತಿದೆ. ಈ ಭಾರಿ ಹೊಂಬಾಳೆ ತೆಕ್ಕೆಗೆ ಬಿದ್ದಿರೋ ಆ ಸ್ಟಾರ್ ಕನ್ನಡದವರೇ. ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ. ಸದ್ಯ ಸ್ಯಾಂಡಲ್‌ವುಡ್‌ನಲ್ಲಿ(Sandalwood) ಟ್ರೆಂಡಿಂಗ್‌ನಲ್ಲಿರೋ ಕನ್ನಡದ ಮಾಸ್ ಹೀರೋ. ಧ್ರುವ ಕನ್ನಡದಲ್ಲಿ ಹ್ಯಾಟ್ರಿಕ್ ಸಕ್ಸಸ್ ಕೊಟ್ಟಿರೋ ಸ್ಟಾರ್. ಆ ಕಡೆ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್‌ ಕೂಡ ಕೆಜಿಎಫ್, ಕಾಂತಾರ, ಸಲಾರ್‌ನಂತಹ ಪ್ಯಾನ್ ಇಂಡಿಯಾ ಹ್ಯಾಟ್ರಿಕ್ ಸಿನಿಮಾ ಕೊಟ್ಟಿರೋ ನಿರ್ಮಾಣ ಸಂಸ್ಥೆ. ಈಗ ಧ್ರುವ ಸರ್ಜಾಗೆ(Dhruva Sarja) ಗಾಳ ಹಾಕಿರೋ ಹೊಂಬಾಳೆ ಬಂಡವಾಳ ಹೂಡೋಕೆ ರೆಡಿಯಾಗಿದೆಯಂತೆ. ಧ್ರುವ ಸರ್ಜಾ ಎಂಥದ್ದೇ ರೋಲ್ ಆದ್ರು ಸಖತ್ತಾಗಿ ಮೋಲ್ಡ್ ಆಗ್ತಾರೆ. ಹೀಗಾಗೆ ಧ್ರುವ ಮಾಸ್ ಆಡಿಯೆನ್ಸ್‌ಗೆ ಬೇಗ ಕನೆಕ್ಟ್ ಆಗ್ತಾರೆ. ಇಂತಹ ಬಿಗ್ ಸ್ಟಾರ್‌ಗೆ ಅದ್ಭುತವಾಗಿರೋ ಮಾಸ್ ಸ್ಟೋರಿಯನ್ನೇ ಹೆಣೆಯೋ ಡೈರೆಕ್ಟರ್ ಆಗಿರಬೇಕು. ಆ ಮಾತುಕತೆ ನಡೆದಿದೆ. ವೇರಿ ಟ್ಯಾಲೆಂಟೆಡ್ ಡೈರೆಕ್ಟರ್ ಎನಿಸಿಕೊಂಡಿರೋ ಮಫ್ತಿ ಸಿನಿಮಾ ಖ್ಯಾತಿಯ ನರ್ಥನ್ ಧ್ರುವ ಸರ್ಜಾಗೆ ಆಕ್ಷನ್ ಕಟ್ ಹೇಳ್ತಾರಂತೆ.

ಇದನ್ನೂ ವೀಕ್ಷಿಸಿ:  Gautam Adani: ಹೆಚ್ಚುತ್ತಲೇ ಇದೆ ಒಟ್ಟು ಆಸ್ತಿ ಮೌಲ್ಯ..! ಅಂಬಾನಿಯನ್ನೇ ಓವರ್ಟೆಕ್ ಮಾಡಿದ ಅದಾನಿ..!

04:30Cine Express: ಈ ವಾರ ಸಿನಿ ಇಂಡಸ್ಟ್ರಿಯಲ್ಲಿ ಹೆಚ್ಚು ಚರ್ಚೆಯಾದ 5 ದೊಡ್ಡ ಅಪ್‌ಡೇಟ್‌ಗಳು ಯಾವುವು?
04:09ಅಪ್ಪನಿಗಾಗಿ ಬಂದ ಹೊಸ ಹಾಡು, ಕಾನ್ಸ್‌ನಲ್ಲಿ ಮೆಚ್ಚುಗೆ ಪಡೆದ ಚಿತ್ರದ ಟ್ರೇಲರ್: ಸಿನಿರಂಗದಲ್ಲಿ ಏನಾಗುತ್ತಿದೆ?
04:18ಸ್ಯಾಂಡಲ್​ವುಡ್​ನಲ್ಲಿ ಮತ್ತೆ ನೆಪೋಟಿಸಂ ಕಿಚ್ಚು: ವಿವಾದಕ್ಕೆ ಅಂತ್ಯ ಹಾಡಿದ ಶಿವಣ್ಣ
02:45ನಟ ದರ್ಶನ್ ಬೇಲ್‌ಗೆ ಮತ್ತೆ ಹಿನ್ನಡೆ: ಪತಿಯ ಬಿಡುಗಡೆಗಾಗಿ ವಿಜಯಲಕ್ಷ್ಮೀ ಪ್ರಯತ್ನ ಫಲ ಕೊಡುತ್ತಾ?
24:34ಸ್ಯಾಂಡಲ್​​ವುಡ್​​ನಲ್ಲಿ ಸಾಲು ಸಾಲು ಅಕಾಲಿಕ ಮರಣ..! ಮೃತ್ಯುಂಜಯ ಹೋಮ ಫಲಿಸಲಿಲ್ವಾ..?
03:06'ಸೆಪ್ಟೆಂಬರ್ 21' ಚಿತ್ರದ ಟ್ರೇಲರ್ ಬಿಡುಗಡೆ: ಪತ್ನಿ ಪ್ರಿಯಾಂಕ ಸಿನಿಮಾಗೆ ರಿಯಲ್ ಸ್ಟಾರ್ ಉಪೇಂದ್ರ ಸಾಥ್‌
05:27ಸಿಂಗರ್‌ನಿಂದ ಹೀರೋವರೆಗೆ: ‘ಲೋ ನವೀನ’ ಮೂಲಕ ನವೀನ್ ಸಜ್ಜು ಹೊಸ ಪ್ರಯಾಣ
03:45ಸಿದ್ದೇಗೌಡರ ಗದ್ಲಗೆ ಜಾಕ್​ಪಾಟ್: ಮತ್ತೆ ಮೋಡಿ ಮಾಡ್ತಾರಾ ಸತೀಶ್​ ನೀನಾಸಂ-ರಚಿತಾ ರಾಮ್?
06:20ದರ್ಶನ್‌ ದಾರಿಗೆ 'ಜೈ' ಎಂದ ಅಲ್ಲು ಅರ್ಜುನ್.. ಟಾಲಿವುಡ್‌ನಲ್ಲಿ ಹೊಸ ಕ್ರಾಂತಿ ಹುಟ್ಟಿಸಿದ ಐಕಾನ್ ಸ್ಟಾರ್!
05:36ಬ್ಯಾಂಕಾಕ್‌ಗೆ ಹಾರಿದ ರಶ್ಮಿಕಾ ಮಂದಣ್ಣ, 'ಆಕ್ಷನ್ ಕ್ವೀನ್' ಆಗೋದಕ್ಕೆ ಸಜ್ಜಾಗ್ತಿದ್ದಾರಾ ರಶ್ಮಿಕಾ?
Read more