14 ವರ್ಷ ಹಿಂದೆ ಬರಬೇಕಿತ್ತು ಶಿವಣ್ಣ-ತರುಣ್ ಚಿತ್ರ; ರಾಜ್​​-ಸುಧೀರ್ ಸಂಬಂಧ ಗಟ್ಟಿ ಮಾಡಿದ್ದು ಯಾವುದು?

14 ವರ್ಷ ಹಿಂದೆ ಬರಬೇಕಿತ್ತು ಶಿವಣ್ಣ-ತರುಣ್ ಚಿತ್ರ; ರಾಜ್​​-ಸುಧೀರ್ ಸಂಬಂಧ ಗಟ್ಟಿ ಮಾಡಿದ್ದು ಯಾವುದು?

Published : Jul 10, 2025, 07:06 PM IST

ಡಾಕ್ಟರ್ ರಾಜ್​ಕುಮಾರ್​​​ಗೆ ಫೆವರಿಟ್​​​ ಊಟ.. ಕೋಳಿ ಸಾರಿನ ಘಮಲು ಬಂದ್ರೆ ಸಾಕು, ಯಾರ ಮನೆ ಆದ್ರೇನಂತೆ ಅಂತ ಹೋಗಿ ಹೊಟ್ಟೆ ತುಂಬ ಊಟ ಮಾಡುತ್ತಿದ್ರು ಡಾಕ್ಟರ್ ರಾಜ್ ಕುಮಾರ್. ಈ ಕೋಳಿ ಸಾರೇ ರಾಜ್​​ ಕುಮಾರ್​ ಹಾಗು ದೈತ್ಯ ಖಳನಟ ಸುಧೀರ್​ ಸ್ನೇಹ ಗಟ್ಟಿ ಮಾಡಿತ್ತು.

ಡಾ ರಾಜ್​​ ಕುಮಾರ್​​​ ಬದುಕಿನ ಕತೆಗಳನ್ನ ಎಷ್ಟು ಭಾರಿ ಕೇಳಿದ್ರು ಸಾಕೆನ್ನಿಸಲ್ಲ. ಕೋಳಿ ಸಾರು ಪ್ರೀಯರಾಗಿದ್ದ ಅಣ್ಣಾವ್ರು ಕೂಲಿ ಆಳುಗಳ ಗುಡಿಸಲಿನಲ್ಲಿ ಕೋಳಿ ಸಾರು ಸವಿದದ್ದು, ಖಳನಟ ಸುಧೀರ್​ ಮನೆ ಕಾಯಿಹಾಲು ಕೋಳಿ ಸಾರನ್ನ ಚಪ್ಪರಿಸಿದ್ದು ಮರೆಯಲು ಸಾಧ್ಯಾನಾ..? ಇದೀಗ ಇದೇ ಕೋಳಿ ಸಾರು ಅಣ್ಣಾವ್ರ ಹಿರಿ ಮಗ ಹಾಗು ಸುಧೀರ್ ಕಿರಿ ಮಗನ ಸಿನಿಮಾಕ್ಕೆ ವೇದಿಕೆ ಸೃಷ್ಟಿಸಿದೆ. ಹಾಗಾದ್ರೆ ಶಿವಣ್ಣ-ತರುಣ್ ಕಾಂಬಿನೇಷನ್​​​ನಲ್ಲಿ ಅದ್ಯಾವಾಗ ಸಿನಿಮಾ ಬರುತ್ತಿದೆ ನೋಡೋಣ ಬನ್ನಿ..

ಕೋಳಿ ಸಾರು.. ಡಾಕ್ಟರ್ ರಾಜ್​ಕುಮಾರ್​​​ಗೆ ಫೆವರಿಟ್​​​ ಊಟ.. ಕೋಳಿ ಸಾರಿನ ಘಮಲು ಬಂದ್ರೆ ಸಾಕು, ಯಾರ ಮನೆ ಆದ್ರೇನಂತೆ ಅಂತ ಹೋಗಿ ಹೊಟ್ಟೆ ತುಂಬ ಊಟ ಮಾಡುತ್ತಿದ್ರು ಡಾಕ್ಟರ್ ರಾಜ್ ಕುಮಾರ್. ಈ ಕೋಳಿ ಸಾರೇ ರಾಜ್​​ ಕುಮಾರ್​ ಹಾಗು ದೈತ್ಯ ಖಳನಟ ಸುಧೀರ್​ ಸ್ನೇಹ ಗಟ್ಟಿ ಮಾಡಿತ್ತು. ಸುಧೀರ್ ಪತ್ನಿ ಮಾಲತಿ ಸುಧೀರ್ ಮಾಡುತ್ತಿದ್ದ ಕಾಯಿಹಾಲಿನ ಕೋಳಿ ಸಾರನ್ನ ಅಣ್ಣಾವ್ರು ಚಪ್ಪರಿಸಿ ತಿನ್ನುತ್ತಿದ್ರು..

ಶಿವರಾಜ್​ ಕುಮಾರ್​ಗೆ ಆಕ್ಷನ್ ಕಟ್ ಹೇಳೋ ಆಸೆ ಎಲ್ಲಾ ನಿರ್ದೇಶಕರಲ್ಲೂ ಇರುತ್ತೆ. ಹಾಗ್ ನೋಡಿದ್ರೆ ಶಿವಣ್ಣ ತರುಣ್ ಕಾಂಬಿನೇಷನ್​ನಲ್ಲಿ 14 ವರ್ಷದ ಹಿಂದೆಯೇ ಸಿನಿಮಾ ಬರಬೇಕಿತ್ತು. ಶಿವರಾಜ್ ಕುಮಾರ್​ರ ಚೆಲುವೆಯೇ ನಿನ್ನ ನೋಡಲು ಸಿನಿಮಾ ಬಂದಾಗ ಆ ಸಿನಿಮಾದಲ್ಲಿ ತರುಣ್ ಕೂಡ ನಟಿಸಿದ್ರು. ಆಗ್ಲೆ ಶಿವಣ್ಣನಿಗೆ ಕತೆ ಹೇಳಿ ಒಪ್ಪಿಸಿದ್ರು ತರುಣ್. ಆದ್ರೆ ಅದು ಸಾದ್ಯ ಆಗ್ಲಿಲ್ಲ. ಈಗ ತರುಣ್ ನಿರ್ಮಾಣದ ಏಳುಮಲೆ ಸಿನಿಮಾ ಟೈಟಲ್​ ಅನೌನ್ಸ್​​ಗೆ ಬಂದಿದ್ದ ಶಿವಣ್ಣ ಇಬ್ಬರ ಕಾಂಬಿನೇಷನ್​​ನಲ್ಲಿ ಬೇಗಾ ಸಿನಿಮಾ ಮಾಡೋಣ ಎಂದಿದ್ದಾರೆ. ಈ ಜೋಡಿ ಯಾವಾಗ ಒಂದಾಗುತ್ತೆ ಅನ್ನೋ ಕುತೂಹಲದ ಕಣ್ಣು ಇಬ್ಬರ ಮೇಲಿವೆ..

ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ... 

06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
06:59ಜಿಮ್ ಮಾಡ್ತಿದ್ದ ದರ್ಶನ್ 'ಯೋಗ' ಮಾಡುವಂತಾಗಿದ್ದು ಹೀಗೆ.. ಅವರು ಹೇಳಿಲ್ಲಾ ಅಂದ್ರೆ ಇವರು ಮಾಡ್ತಿರ್ಲಿಲ್ಲ!?
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
05:4622 ವರ್ಷಗಳ ಬಳಿಕ ಮತ್ತೆ ಬಂತು ಕಲಾಸಿಪಾಳ್ಯ; ಸಿನಿಮಾ ಮೂಲಕ ಫ್ಯಾನ್ಸ್‌ಗೆ 'ಕೆಂಚ'ನ 'ದರ್ಶನ'
13:34Darshan-Boss: ದರ್ಶನ್‌ಗೆ ಯಾಕೆ ಇಷ್ಟೊಂದು ಟೆನ್ಷನ್? 'ಬಾಸ್' ಸಿನಿಮಾದಲ್ಲಿ ಅಂಥದ್ದೇನಿದೆ?
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!
04:28ಚಿನ್ನೇಗೌಡರ ಪತ್ನಿ ಜಯಮ್ಮ ವಿಧಿವಶ; ವಿಜಯ್ ರಾಘವೇಂದ್ರ, ಶ್ರೀಮುರುಳಿಗೆ ಮಾತೃವಿಯೋಗ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
05:06ಒಬ್ರು ಅಪರಾಧಿ, ಇನ್ನೊಬ್ರು ಆರೋಪಿ.. ಜೈಲಿನಲ್ಲಿ ಅಕ್ಕಪಕ್ಕದಲ್ಲೇ ವಾಸ; ದರ್ಶನ್‌ಗೆ ಢವಢವ!
Read more