Dec 15, 2021, 1:39 PM IST
ಬೆಂಗಳೂರು (ಡಿ. 15): ಇದು ಸ್ಯಾಂಡಲ್ವುಡ್ (Sandalwood) ಹಿರಿಯ ನಟರೊಬ್ಬರ ಕರುಣಾಜನಕ ಕಥೆ. ಡಾ. ರಾಜ್ ಕುಮಾರ್ ಚಿತ್ರಗಳು ಸೇರಿದಂತೆ 300 ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದ ಕಲಾವಿದ ಅಶ್ವಥ್ ನಾರಾಯಣ್ (Ashwath Narayan) ಇದೀಗ ಸಂಕಷ್ಟಲ್ಲಿದ್ದಾರೆ.
ಆಸ್ತಿಗಾಗಿ ತಂದೆಯನ್ನೇ ಕೊಲೆ ಮಾಡುವ ಮಟ್ಟಕ್ಕಿಳಿದಿದ್ದಾರಂತೆ ಮಕ್ಕಳು. ರಾತ್ರೋರಾತ್ರಿ ಮನೆಯಿಂದ ತಪ್ಪಿಸಿಕೊಂಡು ಬಂದಿದ್ಧಾರೆ. ಮಗ, ಅಳಿಯನ ಆಸ್ತಿ ಆಟಕ್ಕೆ ಅಶ್ವಥ್ ನಾರಾಯಣ್ ಕಂಗಾಲಾಗಿದ್ದಾರೆ. ಇದೀಗ ಮಗ, ಮಗಳು, ಅಳಿಯನ ವಿರುದ್ಧ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.