'ಕುರಾನ್ ಪಠಿಸಿದ ನಂತರ ನಡೆಯುತ್ತೆ ರಥಜಾತ್ರೆ', ಚನ್ನಕೇಶವನ ಎದುರು ಕುರಾನ್ ಪಠಣ ಶುರುವಾಗಿದ್ದು ಹೇಗೆ..?

Mar 29, 2023, 12:15 PM IST

ಬೇಲೂರು ಚೆನ್ನಕೇಶವ ಜಾತ್ರೆ ಸಂದರ್ಭದಲ್ಲಿ, ಕುರಾನ್ ಪಠಣ ಮಾಡಲಾಗುತ್ತೆ. ಕುರಾನ್ ಪಠಣದ ನಂತರವೇ ರಥೋತ್ಸವ ಆರಂಭವಾಗೋದು. ಇದು ಪ್ರತಿ ವರ್ಷದ ನಡೆದುಕೊಂಡು ಬರುವಂತಹದ್ದು. ಆದ್ರೆ, ಈ ವರ್ಷ ಕುರಾನ್ ಪಠಣ ನಡೆಸಕೂಡದೆಂದು ಪ್ರತಿಭಟನೆ ನಡೆಯುತ್ತಿದೆ. ಈಗ ಈ ಪ್ರತಿಭಟನೆ ಯಾಕೆ? ಸೌಹಾರ್ದತೆ ಓಕೆ, ಎಲ್ಲರೂ ಒಂದಾಗಿ ಇರಬೇಕು ಎನ್ನೋದು ಸರಿ ಆದರೆ ಚನ್ನಕೇಶವನ ಜಾತ್ರೆ ವೇಳೆ ಗೋವಿಂದ ನಾಮಸ್ಮರಣೆ ಮೊಳಗಬೇಕೇ ವಿನಃ, ಕುರಾನ್ ಪಠಣ ಸರಿಯಲ್ಲ. ದರ್ಗಾಗೆ ಹೋಗಿ ನಾವು ಹನುಮಾನ್ ಚಾಲಿಸ ಹೇಳೋಕೆ ಆಗುತ್ತಾ ಹಾಗೆಯೇ ಕೆಲವೇ ವರ್ಷಗಳ ಹಿಂದೆ ಸೇರಿಸಲಾಗಿರುವ ಇಂತಹ ಆಚರಣೆಯನ್ನು ಕೈಬಿಡಬೇಕು ಎಂದು ಹೇಳುತ್ತಿರುವುದ್ಯಾಕೆ? ಈ ವಿಡಿಯೋ ನೋಡಿ