ಗವಿಮಠದಲ್ಲಿ ಜಲಕ್ರಾಂತಿ; ರೈತರ ಮುಖದಲ್ಲಿ ಮಂದಹಾಸ!

Jan 15, 2020, 5:15 PM IST

ಕೊಪ್ಪಳ (ಜ. 15): ಗವಿ ಸಿದ್ದೇಶ್ವರ ಜಾತ್ರೆ ಕೇವಲ ರಾಜ್ಯ ದೇಶಕ್ಕೆ ಸೀಮಿತವಾಗಿಲ್ಲ. ದೇಶ- ವಿದೇಶಗಳಿಂದಲೂ ಭಕ್ತಾದಿಗಳು ಬಂದು ಜಾತ್ರೆಯನ್ನು ಕಣ್ತುಂಬಿಕೊಂಡಿದ್ದಾರೆ. ಅಜ್ಜನ ಆಶೀರ್ವಾದವನ್ನು ಪಡೆದಿದ್ದಾರೆ. 

ಗವಿ ಸಿದ್ದೇಶ್ವರ ಜಾತ್ರೆ; ಭಾವಪರವಶದಲ್ಲಿ ಮಿಂದೆದ್ದ ಭಕ್ತಾದಿಗಳು!

ಗವಿಮಠ ಅನ್ನ, ಅಕ್ಷರ, ಆಶ್ರಯವನ್ನು ನೀಡಿ ಸಾಕಷ್ಟು ಜನರಿಗೆ ಬದುಕು ನೀಡಿದೆ. ಜೊತೆಗೆ ಸಾರ್ವಜನಿಕ ಕೆಲಸಗಳನ್ನು ಮಾಡುತ್ತಿದೆ. ಬತ್ತಿ ಹೋಗಿದ್ದ ಹಳ್ಳಕೊಳ್ಳದಲ್ಲಿ ಜೀವ ಕಳೆ ತುಂಬಿದೆ ಮಠ. ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ. ಶ್ರೀ ಮಠದಲ್ಲಿ ಜಲಕ್ರಾಂತಿ ನಡೆದಿದೆ. ಏನಿದು ಜಲಕ್ರಾಂತಿ? ಜಾತ್ರಾ ಮಹೋತ್ಸವ ವೈಭವ ಹೇಗಿತ್ತು ಇಲ್ಲಿದೆ ನೋಡಿ!