ಸಿರಗುಪ್ಪದಲ್ಲಿ ತಂದೆ ಸಾವು; ಬಸ್‌ಗಾಗಿ ಮೆಜೆಸ್ಟಿಕ್‌ನಲ್ಲಿ ಮಗಳ ಕಣ್ಣೀರು..!

May 19, 2020, 11:43 AM IST

ಬೆಂಗಳೂರು(ಮೇ.19): ನಾಲ್ಕನೇ ಹಂತದ ಲಾಕ್‌ಡೌನ್‌ನಲ್ಲಿ ಅಂತರ್‌ ಜಿಲ್ಲಾ ಬಸ್ ಓಡಾಟಕ್ಕೆ ಅವಕಾಶ ನೀಡಲಾಗಿದೆ. ಇದರ ನಡುವೆ ಒಂದು ಹೃದಯ ವಿದ್ರಾವಕ ಘಟನೆಗೆ ಬೆಂಗಳೂರಿನ ಮೆಜೆಸ್ಟಿಕ್ ಸಾಕ್ಷಿಯಾಗಿದೆ.

ಹೌದು, ಬಳ್ಳಾರಿಯ ಸಿರಗುಪ್ಪದಲ್ಲಿ ತಂದೆಯೊಬ್ಬರು ಮೃತಪಟ್ಟಿದ್ದಾರೆ. ಬೆಂಗಳೂರಿನಲ್ಲಿರುವ ಮಗಳು ಬಳ್ಳಾರಿ ಬಸ್ ಹಿಡಿಯಲು ಕಣ್ಣೀರಿಡುತ್ತಿದ್ದಾರೆ. ಕಣ್ಣೀರಿಡುತ್ತಲೇ ಬಳ್ಳಾರಿ ಬಸ್ ಹಿಡಿಯಲು ಆ ಹೆಣ್ಣು ಮಗಳು ಹುಡುಕಾಟ ನಡೆಸಿದ್ದಾರೆ.

ರಾಯಚೂರಿನಲ್ಲಿ ಮಕ್ಕಳಿಗೆ ಬಸ್ ಪ್ರಯಾಣಕ್ಕೆ ಅವಕಾಶ ನೀಡದ ಸಾರಿಗೆ ಸಿಬ್ಬಂದಿ

ತಂದೆಯ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಳ್ಳಬೇಕಿದೆ. ಆದರೆ ಅಲ್ಲಿ ನಿಲುಗಡೆಯಿಲ್ಲ ಎಂದು ಹೇಳಿದ್ದಕ್ಕೆ ಆ ಹೆಣ್ಣುಮಗಳು ಕಣ್ಣೀರಿಡುತ್ತಿದ್ದಾಳೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.