ಗೃಹ ಸಚಿವ ಜ್ಞಾನೇಂದ್ರ ನೋಡ್ಲೇಬೇಕಾದ ಸುದ್ದಿ: ನಿಮ್ಮ ಇಲಾಖೆ ಖಾಕಿಗೆ ಕಲಿಸಿದ ಕಾಯಕ ಇದೇನಾ?

Sep 29, 2021, 9:44 AM IST

ಯಾದಗಿರಿ(ಸೆ. 29): ಈ ದೃಶ್ಯ ನೋಡಿದವರಿಗೆ ಖಂಡಿತವಾಗಿಯೂ ರಕ್ತ ಕೊತ ಕೊತ ಕುದಿಯುತ್ತದೆ. ಹೌದು, ಶೇಂಗಾ ಬೀಜ ಪಡೆಯೋಕೆ ಬಂದ ವೃದ್ಧ ಮಹಿಳೆ ಮೇಲೆ ಲೇಡಿ ಗುರುಮಿಠಕಲ್‌ ಠಾಣೆಯ ಪಿಎಸ್‌ಐ ದರ್ಪ ತೋರಿದ ಅಮಾನವೀಯ ಘಟನೆ ಯಾದಗಿರಿಯಲ್ಲಿ ನಡೆದಿದೆ. ಜಿಲ್ಲೆಯ ಸಿದ್ದಾಪುರದ ಮಣೆಮ್ಮರನ್ನ  ಪಿಎಸ್‌ಐ ಗಂಗಮ್ಮ ತಳ್ಳುವ ಮೂಲಕ ವೃದ್ಧೆಯ ಮೇಲೆ ಪೊಲೀಸಮ್ಮ ತಮ್ಮ ದರ್ಪವನ್ನ ತೋರಿದ್ದಾರೆ. ಪಿಎಸ್‌ಐ ತಳ್ಳಿದ ರಭಸಕ್ಕೆ ಚೇರ್‌ ಮೇಲೆ ಬಿದ್ದು ನೆಲಕ್ಕುರುಳಿಬಿದ್ದಿದ್ದಾರೆ ವೃದ್ಧೆ. 

ಅಪೌಷ್ಠಿಕತೆ ನಿವಾರಣೆಗೆ 35 ವಿಶೇಷ ಬೆಳೆಗಳ ತಳಿಗಳಿಗೆ ಪ್ರಧಾನಿ ಮೋದಿ ಚಾಲನೆ