Vanivilas Reservoir: ಕನಸಾಗಿಯೇ ಉಳಿಯಿತು 60 ವರ್ಷಗಳ ಹಳೆಯ ಕನಸು

Vanivilas Reservoir: ಕನಸಾಗಿಯೇ ಉಳಿಯಿತು 60 ವರ್ಷಗಳ ಹಳೆಯ ಕನಸು

Published : Jan 03, 2022, 11:54 AM IST

ಮಧ್ಯ ಕರ್ನಾಟಕದ ಜನರ ಜೀವನಾಡಿ..! ರೈತರ ಅಕ್ಷಯಪಾತ್ರೆ ವಾಣಿವಿಲಾಸ ಜಲಾಶಯ (Vanivilas Reservoir) ಕೇವಲ ಮೂರೇ ಅಡಿಗಳಷ್ಟು ನೀರು ಸಂಗ್ರಹವಾಗಿದ್ದರೆ ಹಲವು ದಶಕಗಳ ಕನಸು ಈಡೇರುತ್ತಿತ್ತು. ಆದರೆ ರಾಜ್ಯ ಸರ್ಕಾರದ ದಿಢೀರ್  ನಿರ್ಧಾರ ದಿಂದಾಗಿ ಇಡೀ ಚಿತ್ರದುರ್ಗ (Chitradurga) ಜಿಲ್ಲೆಯ ರೈತ ಸಮುದಾಯವನ್ನೇ ಬೇಸರಕ್ಕೆ ತಳ್ಳಿದೆ. 

ಬೆಂಗಳೂರು (ಜ. 03): ಮಧ್ಯ ಕರ್ನಾಟಕದ ಜನರ ಜೀವನಾಡಿ..! ರೈತರ ಅಕ್ಷಯಪಾತ್ರೆ ವಾಣಿವಿಲಾಸ ಜಲಾಶಯ (Vanivilas Reservoir) ಕೇವಲ ಮೂರೇ ಅಡಿಗಳಷ್ಟು ನೀರು ಸಂಗ್ರಹವಾಗಿದ್ದರೆ ಹಲವು ದಶಕಗಳ ಕನಸು ಈಡೇರುತ್ತಿತ್ತು. ಆದರೆ ರಾಜ್ಯ ಸರ್ಕಾರದ ದಿಢೀರ್  ನಿರ್ಧಾರ ದಿಂದಾಗಿ ಇಡೀ ಚಿತ್ರದುರ್ಗ (Chitradurga) ಜಿಲ್ಲೆಯ ರೈತ ಸಮುದಾಯವನ್ನೇ ಬೇಸರಕ್ಕೆ ತಳ್ಳಿದೆ. ಅಲ್ಲದೇ ಈ ಬಾರಿಯ ಉತ್ತಮ ಮಳೆಯಿಂದಾಗಿ ಅದೃಷ್ಟವೆಂಬಂತೆ ಬರೋಬ್ಬರಿ ಒಂದು ಶತಮಾನದ ಕನಸಾಗಿದ್ದ ಕೋಡಿ ಬೀಳುವ ‌ ಕನಸು ಸಹ ಕನಸಾಗಿಯೇ ಉಳಿದಿದೆ.  ಹೀಗಾಗಿ ಸ್ಥಳೀಯ ಚಿತ್ರದುರ್ಗ ಶಾಸಕ ತಿಪ್ಪಾರೆಡ್ಡಿ (Thippareddi) ಕೂಡ ಅಸಮಾಧಾನಗೊಳ್ಳುವಂತೆ ಮಾಡಿದೆ. 

ಹೀಗಾಗಿ ರಾಜ್ಯ ಸರ್ಕಾರವೇ ನೀರು ಹರಿಸುವ ಭರವಸೆ ನೀಡಿದ್ದೂ,ಅದು ಹುಸಿಯಾಗಿದೆ. ಆದ್ದರಿಂದ ಮೈಸೂರು (Mysuru) ಅರಸರ ಕಾಲದ  ನಿರ್ಮಾಣವಾಗಿರೋ ವಾಣಿವಿಲಾಸ ಸಾಗರ ಕೋಡಿ ಬೀಳುವ ಐತಿಹಾಸಿಕ ಕ್ಷಣಕ್ಕಾಗಿ  ಸರ್ಕಾರ ಹಾಗೂ ಅಧಿಕಾರಿಗಳು ವಾಣಿವಿಲಾಸ ಜಲಾಶಯಕ್ಕೆ ನಿಗದಿಯಂತೆ ಜನವರಿ 30ರ ವರೆಗೂ ನೀರು ಹರಿಸುವಂತೆ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

 ಇನ್ನು ಈ ವರ್ಷ ಸುರಿದ ಭಾರಿ ಮಳೆಯಿಂದಾಗಿ ಇನ್ನೇನು ವಾಣಿವಿಲಾಸ ಜಲಾಶಯ ತುಂಬಿಯೇ ಬಿಡ್ತು, ಶತಮಾನದ ಜಲಾಶಯಕ್ಕೆ ವೈಭವ ಮರುಕಳಿಸುತ್ತೆ ಅಂತ ಇಡೀ ರೈತ ಸಮುದಾಯದಲ್ಲಿ ನಿರೀಕ್ಷೆ ಮೂಡಿಸಿತ್ತು. ಕಳೆದ ನವಂಬರ್ ಹಾಗೂ ಡಿಸೆಂಬರ್ ಆರಂಭದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಹಿಂದೆಂದೂ ಕಾಣದಷ್ಟು ಜಲಾಶಯಕ್ಕೆ ನೀರಿನ ಒಳಹರಿವಿನ ಪ್ರಮಾಣ ದಾಖಲೆಯ ಪ್ರಮಾಣದಲ್ಲಿ ರೈತರಿಗೆ ಇನ್ನಿಲ್ಲದ ಭರವಸೆ ಮೂಡಿಸಿದೆ. ಆದರೆ ವಿಶೇಶ್ವರಯ್ಯ ಜಲ ನಿಗಮ, ಭದ್ರಾ ಮೇಲ್ದಂಡೆ ಯೋಜನೆ ಅಧಿಕಾರಿಗಳು ಏಕಾಏಕಿ ರಾಜ್ಯ ಸರ್ಕಾರದ ಆದೇಶವನ್ನು ಪಾಲಿಸದೇ ಇರುವುದು ರೈತರಲ್ಲಿ ನಿರಾಸೆ ಮೂಡಿಸದೆ. ಜೊತೆಗೆ ಕೊಟ್ಟಮಾತಿನಂತೆ ನೀರು ಹರಿಸುವಂತೆ ಸ್ಥಳೀಯ ರೈತರು ಹಾಗೂ ಮುಖಂಡರು ಒತ್ತಾಯಿಸಿದ್ದಾರೆ.

ಒಟ್ಟಾರೆ ಎಲ್ಲವೂ ಅಂದುಕೊಂಡಂತೆ ಆದರೆ ರಾಜ್ಯ ಸರ್ಕಾರ ಆದೇಶ ನೀಡಿದ ಪರಿಕಲ್ಪನೆಯಂತೆ ನೀರು ಹರಿಸಿದರೆ ಮಧ್ಯಕರ್ನಾಟಕದ ಜಲಪಾತ್ರೆ ವಾಣಿವಿಲಾಸ ಜಲಾಶಯದ ವೈಭವ ಮತ್ತೆ ಮರುಕಳಿಸುವ ಕಾಲ ಸನ್ನಿಹಿತವಾಗಿದೆ. ಇನ್ನಾದ್ರು ರಾಜ್ಯ ಸರ್ಕಾರ ಸ್ಥಳೀಯ ಶಾಸಕರ ಒತ್ತಾಯ ಹಾಗೂ ರೈತರ ಅಭಿಲಾಷೆಯಂತೆ ವಿವಿಸಾಗರಕ್ಕೆ ನೀರು ಹರಿಸಿ ಐತಿಹಾಸಿಕ ಸಂಧರ್ಭಕ್ಕೆ‌ ಸಾಕ್ಷಿಯಾಗಬೇಕಿದೆ‌

 

26:56ಪ್ರೀತಿ, ದ್ರೋಹ, ದುರಂತ: ಹೆಂಡತಿಯ ಫೋಟೋ ವೈರಲ್ ಮಾಡಿ ಗಂಡ ಎಸ್ಕೇಪ್; ‘ಪಾಗಲ್ ಪ್ರೇಮಿ’ ಕಾಟಕ್ಕೆ ಗೃಹಿಣಿ ಬಲಿ!
23:12ಇಲ್ಲಿ ದೇವಿಗೆ ಬಂಗಾರವಲ್ಲ, ಬಳೆಗಳೇ ಹರಕೆ: ವಡನಬೈಲು ಪದ್ಮಾವತಿ ದೇವಿಯ ಪವಾಡದ ಕಥೆ
29:10ದೇಶದ 5 ರಾಜ್ಯಕ್ಕೆ ಬೇಕಿದ್ದ ಬಿಹಾರಿ ಬ್ರದರ್ಸ್ ಹೆಡೆಮುರಿ ಕಟ್ಟಿದ ಕರ್ನಾಟಕ ಕಾಪ್ಸ್; ಬೀದರ್‌ನಲ್ಲಿ 1 ನಿಮಿಷದಲ್ಲಿ ₹83 ಲಕ್ಷ ಎಗರಿಸಿ ಎಸ್ಕೇಪ್!
52:08ಹುಲಿಗಳಿಂದ ದಸರಾ ಆನೆಗಳವರೆಗೆ: ನಾಗರಹೊಳೆಯ ವನ್ಯಜೀವಿ ಲೋಕದ ರೋಚಕ ಕಥೆ
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
Read more