Vanivilas Reservoir: ಕನಸಾಗಿಯೇ ಉಳಿಯಿತು 60 ವರ್ಷಗಳ ಹಳೆಯ ಕನಸು

Vanivilas Reservoir: ಕನಸಾಗಿಯೇ ಉಳಿಯಿತು 60 ವರ್ಷಗಳ ಹಳೆಯ ಕನಸು

Suvarna News   | Asianet News
Published : Jan 03, 2022, 11:54 AM IST

ಮಧ್ಯ ಕರ್ನಾಟಕದ ಜನರ ಜೀವನಾಡಿ..! ರೈತರ ಅಕ್ಷಯಪಾತ್ರೆ ವಾಣಿವಿಲಾಸ ಜಲಾಶಯ (Vanivilas Reservoir) ಕೇವಲ ಮೂರೇ ಅಡಿಗಳಷ್ಟು ನೀರು ಸಂಗ್ರಹವಾಗಿದ್ದರೆ ಹಲವು ದಶಕಗಳ ಕನಸು ಈಡೇರುತ್ತಿತ್ತು. ಆದರೆ ರಾಜ್ಯ ಸರ್ಕಾರದ ದಿಢೀರ್  ನಿರ್ಧಾರ ದಿಂದಾಗಿ ಇಡೀ ಚಿತ್ರದುರ್ಗ (Chitradurga) ಜಿಲ್ಲೆಯ ರೈತ ಸಮುದಾಯವನ್ನೇ ಬೇಸರಕ್ಕೆ ತಳ್ಳಿದೆ. 

ಬೆಂಗಳೂರು (ಜ. 03): ಮಧ್ಯ ಕರ್ನಾಟಕದ ಜನರ ಜೀವನಾಡಿ..! ರೈತರ ಅಕ್ಷಯಪಾತ್ರೆ ವಾಣಿವಿಲಾಸ ಜಲಾಶಯ (Vanivilas Reservoir) ಕೇವಲ ಮೂರೇ ಅಡಿಗಳಷ್ಟು ನೀರು ಸಂಗ್ರಹವಾಗಿದ್ದರೆ ಹಲವು ದಶಕಗಳ ಕನಸು ಈಡೇರುತ್ತಿತ್ತು. ಆದರೆ ರಾಜ್ಯ ಸರ್ಕಾರದ ದಿಢೀರ್  ನಿರ್ಧಾರ ದಿಂದಾಗಿ ಇಡೀ ಚಿತ್ರದುರ್ಗ (Chitradurga) ಜಿಲ್ಲೆಯ ರೈತ ಸಮುದಾಯವನ್ನೇ ಬೇಸರಕ್ಕೆ ತಳ್ಳಿದೆ. ಅಲ್ಲದೇ ಈ ಬಾರಿಯ ಉತ್ತಮ ಮಳೆಯಿಂದಾಗಿ ಅದೃಷ್ಟವೆಂಬಂತೆ ಬರೋಬ್ಬರಿ ಒಂದು ಶತಮಾನದ ಕನಸಾಗಿದ್ದ ಕೋಡಿ ಬೀಳುವ ‌ ಕನಸು ಸಹ ಕನಸಾಗಿಯೇ ಉಳಿದಿದೆ.  ಹೀಗಾಗಿ ಸ್ಥಳೀಯ ಚಿತ್ರದುರ್ಗ ಶಾಸಕ ತಿಪ್ಪಾರೆಡ್ಡಿ (Thippareddi) ಕೂಡ ಅಸಮಾಧಾನಗೊಳ್ಳುವಂತೆ ಮಾಡಿದೆ. 

ಹೀಗಾಗಿ ರಾಜ್ಯ ಸರ್ಕಾರವೇ ನೀರು ಹರಿಸುವ ಭರವಸೆ ನೀಡಿದ್ದೂ,ಅದು ಹುಸಿಯಾಗಿದೆ. ಆದ್ದರಿಂದ ಮೈಸೂರು (Mysuru) ಅರಸರ ಕಾಲದ  ನಿರ್ಮಾಣವಾಗಿರೋ ವಾಣಿವಿಲಾಸ ಸಾಗರ ಕೋಡಿ ಬೀಳುವ ಐತಿಹಾಸಿಕ ಕ್ಷಣಕ್ಕಾಗಿ  ಸರ್ಕಾರ ಹಾಗೂ ಅಧಿಕಾರಿಗಳು ವಾಣಿವಿಲಾಸ ಜಲಾಶಯಕ್ಕೆ ನಿಗದಿಯಂತೆ ಜನವರಿ 30ರ ವರೆಗೂ ನೀರು ಹರಿಸುವಂತೆ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

 ಇನ್ನು ಈ ವರ್ಷ ಸುರಿದ ಭಾರಿ ಮಳೆಯಿಂದಾಗಿ ಇನ್ನೇನು ವಾಣಿವಿಲಾಸ ಜಲಾಶಯ ತುಂಬಿಯೇ ಬಿಡ್ತು, ಶತಮಾನದ ಜಲಾಶಯಕ್ಕೆ ವೈಭವ ಮರುಕಳಿಸುತ್ತೆ ಅಂತ ಇಡೀ ರೈತ ಸಮುದಾಯದಲ್ಲಿ ನಿರೀಕ್ಷೆ ಮೂಡಿಸಿತ್ತು. ಕಳೆದ ನವಂಬರ್ ಹಾಗೂ ಡಿಸೆಂಬರ್ ಆರಂಭದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಹಿಂದೆಂದೂ ಕಾಣದಷ್ಟು ಜಲಾಶಯಕ್ಕೆ ನೀರಿನ ಒಳಹರಿವಿನ ಪ್ರಮಾಣ ದಾಖಲೆಯ ಪ್ರಮಾಣದಲ್ಲಿ ರೈತರಿಗೆ ಇನ್ನಿಲ್ಲದ ಭರವಸೆ ಮೂಡಿಸಿದೆ. ಆದರೆ ವಿಶೇಶ್ವರಯ್ಯ ಜಲ ನಿಗಮ, ಭದ್ರಾ ಮೇಲ್ದಂಡೆ ಯೋಜನೆ ಅಧಿಕಾರಿಗಳು ಏಕಾಏಕಿ ರಾಜ್ಯ ಸರ್ಕಾರದ ಆದೇಶವನ್ನು ಪಾಲಿಸದೇ ಇರುವುದು ರೈತರಲ್ಲಿ ನಿರಾಸೆ ಮೂಡಿಸದೆ. ಜೊತೆಗೆ ಕೊಟ್ಟಮಾತಿನಂತೆ ನೀರು ಹರಿಸುವಂತೆ ಸ್ಥಳೀಯ ರೈತರು ಹಾಗೂ ಮುಖಂಡರು ಒತ್ತಾಯಿಸಿದ್ದಾರೆ.

ಒಟ್ಟಾರೆ ಎಲ್ಲವೂ ಅಂದುಕೊಂಡಂತೆ ಆದರೆ ರಾಜ್ಯ ಸರ್ಕಾರ ಆದೇಶ ನೀಡಿದ ಪರಿಕಲ್ಪನೆಯಂತೆ ನೀರು ಹರಿಸಿದರೆ ಮಧ್ಯಕರ್ನಾಟಕದ ಜಲಪಾತ್ರೆ ವಾಣಿವಿಲಾಸ ಜಲಾಶಯದ ವೈಭವ ಮತ್ತೆ ಮರುಕಳಿಸುವ ಕಾಲ ಸನ್ನಿಹಿತವಾಗಿದೆ. ಇನ್ನಾದ್ರು ರಾಜ್ಯ ಸರ್ಕಾರ ಸ್ಥಳೀಯ ಶಾಸಕರ ಒತ್ತಾಯ ಹಾಗೂ ರೈತರ ಅಭಿಲಾಷೆಯಂತೆ ವಿವಿಸಾಗರಕ್ಕೆ ನೀರು ಹರಿಸಿ ಐತಿಹಾಸಿಕ ಸಂಧರ್ಭಕ್ಕೆ‌ ಸಾಕ್ಷಿಯಾಗಬೇಕಿದೆ‌

 

22:23ಆ 3 ನಿಮಿಷ..! ಬೆಂಗಳೂರಿನ ತ್ರಿವಳಿ ಮರ್ಡರ್ ಹಿಂದಿನ ಭಯಾನಕ ಸತ್ಯ: ಅಮ್ಮನ ರಕ್ತ ಒರೆಸುವಾಗಲೇ ಬಂದೇಬಿಟ್ಟ ಅಪ್ಪ!
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
24:02ಬೆಂಗಳೂರು ಮರ್ಡರ್​​ ಡೇ..! ಒಂದೇ ದಿನ 7 ಜನರ ಕೊಲೆ..! ಕುಟುಂಬ ಮತ್ತು ರಕ್ತ ಸಂಬಂಧಕ್ಕೆ ಬೆಲೆಯೇ ಇಲ್ವಾ..?
23:26Mysuru Marriage home Tragedy: ಮದುವೆ ಮನೆಯಲ್ಲಿ ಮೂರು ಚಟ್ಟ, ರಾಕ್ಷಸ ಉಲ್ಲಾಸ್ ಗೌಡನ ಕ್ರೌರ್ಯದ ಕಥೆ!
23:26FIR video: ಭೀಮಾತೀರದ ಹಂತಕ ಅಪ್ಪುಗೌಡ ಇಬ್ಬರ ಹತ್ಯೆಗೆ ಸ್ಕೆಚ್ ಹಾಕಿದ್ದ; ಆದ್ರೆ 6 ಜನರ ಕೊಲೆ ಮಾಡಿದ್ದೇಕೆ ಹಂತಕರು?
23:22ಕೇರಳದಿಂದ ಬಂದಿತ್ತು 20 ಲಕ್ಷ, ಪೊಲೀಸರಿಗೆ ಸಿಕ್ಕಿತ್ತು ಸುಳಿವು! ಖೆಡ್ಡಾಗೆ ಬಿದ್ದಿದ್ಹೇಗೆ 'ಖಾಕಿ' ಗ್ಯಾಂಗ್?
24:322 ಕೋಟಿ ವಿಮೆ ಹಣಕ್ಕಾಗಿ ನಿವೃತ್ತ ಯೋಧನ ಕೊಲೆ: ಪೋಸ್ಟ್ ಮಾರ್ಟಮ್ ರಿಪೋರ್ಟ್ ತಿರುಚಿ ಸಿಕ್ಕಿಬಿದ್ದ ಹೆಂಡತಿ!
20:37ಆಪರೇಷನ್ ಗೃಹಲಕ್ಷ್ಮೀ: ಸತ್ತವರ ಖಾತೆಗೆ ಹಣ! 4 ಲಕ್ಷ ಅನರ್ಹರ ಮೇಲೆ ಸರ್ಕಾರದ ಬಿಗ್ ಆ್ಯಕ್ಷನ್
23:20ಧರ್ಮಸ್ಥಳ ವಿರುದ್ಧ ಕೇರಳ ಫಂಡಿಂಗ್, ಚಿತ್ರದುರ್ಗ ಕನೆಕ್ಷನ್, 200 ಕೋಟಿ ಡೀಲ್ ಸೀಕ್ರೆಟ್ ಬಿಚ್ಚಿಟ್ಟ ಮಾಸ್ಕ್ ಮ್ಯಾನ್
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
Read more