Uttara Kannada: ಹೆಣ್ಣು ಮಕ್ಕಳು ನಾಪತ್ತೆ ಕೇಸ್ ಹೆಚ್ಚಳ, ಪತ್ತೆ ಹಚ್ಚುವುದೇ ಪೊಲೀಸರಿಗೆ ತಲೆನೋವು.!

Uttara Kannada: ಹೆಣ್ಣು ಮಕ್ಕಳು ನಾಪತ್ತೆ ಕೇಸ್ ಹೆಚ್ಚಳ, ಪತ್ತೆ ಹಚ್ಚುವುದೇ ಪೊಲೀಸರಿಗೆ ತಲೆನೋವು.!

Published : Dec 21, 2021, 02:30 PM ISTUpdated : Dec 21, 2021, 02:31 PM IST

- ಹೆಣ್ಣು ಮಕ್ಕಳು, ಮಹಿಳೆಯ ನಾಪತ್ತೆ ಪ್ರಕರಣಗಳಲ್ಲಿ ಹೆಚ್ಚಳ

- ಪ್ರೀತಿ- ಪ್ರೇಮ-ಮೋಸ ಹಾಗೂ ಇತರ ವಿಚಾರಗಳಿಂದಾಗಿ ನಾಪತ್ತೆ

- ಕಳೆದೊಂದು ವರ್ಷದಲ್ಲಿ  150 ನಾಪತ್ತೆ ಪ್ರಕರಣಗಳ ದಾಖಲು

- ಪೊಲೀಸರಿಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿರುವ ಕೇಸ್‌
 

ಉತ್ತರಕನ್ನಡ (ಡಿ. 21):  ಜಿಲ್ಲೆಯಲ್ಲಿ ಹೆಣ್ಣು ಮಕ್ಕಳು (Women) ಹಾಗೂ ಮಹಿಳೆಯ ನಾಪತ್ತೆ ಪ್ರಕರಣಗಳು ಹೆಚ್ಚಾಗಿ ದಾಖಲಾಗಿವೆ. ಅಪ್ರಾಪ್ತ ಹೆಣ್ಣು ಮಕ್ಕಳಿಂದ ಹಿಡಿದು 18 ವರ್ಷ ಮೇಲ್ಪಟ್ಟ ಯುವತಿಯರು ಹಾಗೂ ಮಹಿಳೆಯರು ಕೂಡಾ ಪ್ರೀತಿ- ಪ್ರೇಮ ಹಾಗೂ ಇತರ ವಿಚಾರಗಳಿಂದಾಗಿ ಕಾಣೆಯಾಗುತ್ತಿದ್ದು, ಇವರನ್ನು ಪತ್ತೆ ಹಚ್ಚುವುದೇ ಪೊಲೀಸರಿಗೆ (Police Department) ದೊಡ್ಡ ತಲೆ ನೋವಾಗಿ ಪರಿಣಮಿಸಿದೆ. 

ಕೊರೊನಾದಿಂದ ರಕ್ಷಣೆ ಒದಗಿಸಲು ಸರಕಾರದ ಆದೇಶದನ್ವಯ ಶಾಲೆ- ಕಾಲೇಜುಗಳನ್ನು ಮುಚ್ಚಿ ಆನ್‌ಲೈನ್ ಮೂಲಕ ತರಗತಿಗಳನ್ನು ನಡೆಸಲಾಗುತ್ತಿತ್ತು. ಮನೆಯಲ್ಲಿದ್ದುಕೊಂಡು ಆನ್‌ಲೈನ್ ಚಟ ಬೆಳೆಸಿಕೊಂಡು ಅಪ್ರಾಪ್ತ ವಿದ್ಯಾರ್ಥಿಗಳು ಹಾಗೂ ಯುವಕರು- ಯುವತಿಯರು ಸಾಮಾಜಿಕ ಜಾಲತಾಣದಲ್ಲಿ ಪ್ರೀತಿ- ಪ್ರೇಮ ಎಂಬ ವಿಚಾರಕ್ಕೆ ಬಿದ್ದು ನಾಪತ್ತೆಯಾಗುತ್ತಿದ್ದಾರೆ. 

ಉತ್ತರಕನ್ನಡ ಜಿಲ್ಲೆಯಲ್ಲಿ (Uttara Kannada)ಕಳೆದೊಂದು ವರ್ಷದಲ್ಲಿ ಅಪ್ರಾಪ್ತ ವಿದ್ಯಾರ್ಥಿಗಳು, ಕಾಲೇಜು ಯುವತಿಯರು ಹಾಗೂ ಮದುವೆಯಾದ ಮಹಿಳೆಯರು ಸೇರಿ ಒಟ್ಟು 150 ನಾಪತ್ತೆ ಪ್ರಕರಣಗಳ ದಾಖಲಾಗಿದ್ದು, ಅವುಗಳ ಪೈಕಿ 135 ಪ್ರಕರಣಗಳನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. 18 ವರ್ಷಕ್ಕಿಂತ ಮಿಕ್ಕಿ ಪ್ರಾಯದ ಯುವತಿಯರು ಹಾಗೂ ಮಹಿಳೆಯರ ಇನ್ನೂ 14 ಪ್ರಕರಣಗಳು ಬಾಕಿಯಿದ್ದು, ಕಾಣೆಯಾಗಿದ್ದ 3 ಅಪ್ರಾಪ್ತ ಮಕ್ಕಳ ಪೈಕಿ 1 ಪ್ರಕರಣ ಕೂಡಾ ಪತ್ತೆಯಾಗಲು ಬಾಕಿಯಿದೆ. ಈ ನಾಪತ್ತೆ ಪ್ರಕರಣಗಳ ಹಿಂದೆ ಲವ್ ಜಿಹಾದ್ ಕೈವಾಡದ ಬಗ್ಗೆಯೂ ಪ್ರಶ್ನೆ ಎದ್ದಿತ್ತಾದರೂ ಜಿಲ್ಲೆಯಲ್ಲಿ ಪ್ರೀತಿ-ಪ್ರೇಮ-ಮೋಸ ಪ್ರಕರಣಗಳ ಹೊರತು ಲವ್ ಜಿಹಾದ್ ಕಡಿಮೆ ಅನ್ನೋ ಅಭಿಪ್ರಾಯವಿದೆ. 

ಇತ್ತೀಚೆಗೆ ಪ್ರಕರಣ ದಾಖಲಾದ ಕೂಡಲೇ ಯಾವುದೇ ಸಮಯ ವ್ಯರ್ಥ ಮಾಡದೆ ಕೂಡಲೇ ಪತ್ತೆ ಹಚ್ಚಲು ಕ್ರಮ‌ ಕೈಗೊಳ್ತೇವೆ. ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ್ದು, ಸಣ್ಣ ಪ್ರಾಯದ ಮಕ್ಕಳ ವಿಚಾರವನ್ನು ವಿಶೇಷ ಸೆಕ್ಷನ್‌ಗಳಡಿ ಪರಿಗಣಿಸಲಾಗುತ್ತದೆ. ಅಲ್ಲದೇ, ಈ ಸಂಬಂಧ ವಿಶೇಷ ಡ್ರೈವ್ ಕೂಡಾ ನಡೆಸಲು ಆದೇಶ ಮಾಡಲಾಗಿದೆ. ಕಳೆದ ಒಂದು ವರ್ಷದಲ್ಲಿ ದಾಖಲಾಗಿರುವ ಪ್ರಕ್ರಿಯೆಗಳ ಜತೆ ಈ ಹಿಂದಿನ ಪ್ರಕರಣಗಳನ್ನು ಕೂಡಾ ಪತ್ತೆ ಹಚ್ಚಲು ಕ್ರಮ ಕೈಗೊಳ್ಳಲಾಗುತ್ತಿದೆ. ಮಕ್ಕಳು ಸಾಮಾಜಿಕ ಜಾಲತಾಣದಲ್ಲಿ ಏನು ಮಾಡ್ತಿದ್ದಾರೆ ಅಂತಾ ನೋಡೋಕೆ ಪೋಷಕರು ಈ ಬಗ್ಗೆ ಹೆಚ್ಚಿ‌ನ ನಿಗಾ ಇರಿಸಬೇಕು. ಮಕ್ಕಳು ಸಾಮಾಜಿಕ ಜಾಲತಾಣದ ಬಳಕೆ, ಅವರು ಏನು ನೋಡ್ತಿದ್ದಾರೆ, ಅನಾಮಿಕ ವ್ಯಕ್ತಿಗಳ ಜತೆ ಸಂಪರ್ಕ ಮಾಡ್ತಿದ್ದಾರಾ..ಅವರ ಸ್ವಭಾವದಲ್ಲಿ ಬದಲಾವಣೆಯಾಗಿದ್ಯಾ ಮುಂತಾದ ವಿಚಾರಗಳನ್ನು ತಿಳಿದುಕೊಳ್ಳಬೇಕು. ಜಿಲ್ಲೆಯಲ್ಲಿ ಪ್ರೀತಿ- ಪ್ರೇಮ ಅಂತಾ ಮಕ್ಕಳು, ಯುವಕ- ಯುವತಿಯರು ದಾರಿ ತಪ್ತಿದ್ದಾರೆ ಹೊರತು ಲವ್ ಜಿಹಾದ್ ಅನ್ನೋ ವಿಚಾರ ಜಿಲ್ಲೆಯಲ್ಲಿಲ್ಲ ಎಂದು ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮಾನಾ ಪೆನ್ನೇಕರ್ ಹೇಳಿದ್ದಾರೆ. 
 

23:20ಧರ್ಮಸ್ಥಳ ವಿರುದ್ಧ ಕೇರಳ ಫಂಡಿಂಗ್, ಚಿತ್ರದುರ್ಗ ಕನೆಕ್ಷನ್, 200 ಕೋಟಿ ಡೀಲ್ ಸೀಕ್ರೆಟ್ ಬಿಚ್ಚಿಟ್ಟ ಮಾಸ್ಕ್ ಮ್ಯಾನ್
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
25:09ಪ್ರಿಯಾಂಕ ಸೀಕ್ರೆಟ್ಸ್​​..! ಅಮ್ಮನೇ ಮಗುವನ್ನ ಕೊಂದ ಕೇಸ್​ಗೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್!
26:51ಹಳೇ ಲವ್ವರ್​​ಗಾಗಿ ಮಗುವನ್ನೇ ಕೊಂದಳು ಅಮ್ಮ: ಕೊಲೆಯನ್ನ ಮುಚ್ಚಿ ಹಾಕಲು ಎಷ್ಟೆಲ್ಲಾ ಕಥೆ ಕಟ್ಟಿದ್ಲು!
27:29ಡಿಕೆ ಸರ್ಕಾರ.. ಹೊಸ ಅವತಾರ: ಮೀನಹೆಜ್ಜೆ.. ಜಾಣಮೌನ.. ಮಿಂಚಿನ ಬಾಣ: ಹೇಗಿದೆ ಬಂಡೆ ಆಡಳಿತ?
24:08ಸತ್ಯವ್ವಳ ಪ್ರೀತಿ ಸಿಗದೇ ಪ್ರಾಣಬಿಟ್ಟ ಕೃಷ್ಣ, ಸಾವಿಗೂ ಮುಂಚೆ ಪ್ರೇಯಸಿಗೆ ಕೊಟ್ಟಿದ್ದ ನ್ಯಾಯ!
25:07ಗಂಗಮ್ಮನಗುಡಿ ಕೊಲೆ: ಬಾರ್ ಅಂಗಡಿಯ ಫೋನ್‌ಪೆ ಬಿಲ್ ತೆರೆದಿಟ್ಟೇಬಿಡ್ತು, ಸಾವಿನ ರಹಸ್ಯದ ಸುರುಳಿ!
25:33ಅಕ್ಕರೆಯಿಂದ ಕಾಣಬೇಕಿದ್ದ ನಾದಿನಿ ಅತ್ತಿಗೆಗೆ ಸ್ಕೆಚ್‌ ಹಾಕಿದ್ಲು, ಮದುವೆಯಾದ ಮೂರೇ ತಿಂಗಳಿಗೆ ಮುಗಿದ ಪುಷ್ಪಾ ಬಾಳು!
24:04ಭೀಮಾತೀರದ ಮರ್ಡರ್​​ ರಹಸ್ಯ! : ಜಮೀನಿಗಾಗಿ ನಡೆದಿಲ್ಲ 6 ಜನರ ಕೊಲೆ, ಆ ದಂಧೆಯೇ ಕಾರಣವಂತೆ!
Read more