ಆನೆಕಾಲು ರೋಗದಿಂದ ಉತ್ತರ ಕನ್ನಡ ಮುಕ್ತ, 2017 ರ ನಂತರ ನೂತನ ಪ್ರಕರಣಗಳಿಲ್ಲ..!

ಆನೆಕಾಲು ರೋಗದಿಂದ ಉತ್ತರ ಕನ್ನಡ ಮುಕ್ತ, 2017 ರ ನಂತರ ನೂತನ ಪ್ರಕರಣಗಳಿಲ್ಲ..!

Published : May 04, 2022, 10:57 AM IST

ರಾಜ್ಯದ ಹೆಚ್ಚಿನ ಜಿಲ್ಲೆಗಳಲ್ಲಿ ಜನರನ್ನು ಕಾಡುತ್ತಿದ್ದ ಆನೆಕಾಲು ರೋಗ ಇದೀಗ ಕೊಂಚ ಕೊಂಚವೇ ನಿರ್ಮೂಲನೆಯಾಗುತ್ತಿದೆ. ದಕ್ಷಿಣಕನ್ನಡ ಜಿಲ್ಲೆ, ಉಡುಪಿ ಜಿಲ್ಲೆಯ ಬಳಿಕ ಇದೀಗ ಉತ್ತರಕ‌ನ್ನಡ ಜಿಲ್ಲೆಯೂ ಆನೆ ಕಾಲು ರೋಗದಿಂದ ಮುಕ್ತವಾಗಿದೆ. 
 

ರಾಜ್ಯದ ಹೆಚ್ಚಿನ ಜಿಲ್ಲೆಗಳಲ್ಲಿ ಜನರನ್ನು ಕಾಡುತ್ತಿದ್ದ ಆನೆಕಾಲು ರೋಗ ಇದೀಗ ಕೊಂಚ ಕೊಂಚವೇ ನಿರ್ಮೂಲನೆಯಾಗುತ್ತಿದೆ. ದಕ್ಷಿಣಕನ್ನಡ ಜಿಲ್ಲೆ, ಉಡುಪಿ ಜಿಲ್ಲೆಯ ಬಳಿಕ ಇದೀಗ ಉತ್ತರಕ‌ನ್ನಡ ಜಿಲ್ಲೆಯೂ ಆನೆ ಕಾಲು ರೋಗದಿಂದ ಮುಕ್ತವಾಗಿದೆ. 

ಜಿಲ್ಲೆಯ 11 ತಾಲೂಕುಗಳ ಪೈಕಿ ಕರಾವಳಿ ಭಾಗದಲ್ಲಿರುವ 5 ತಾಲೂಕುಗಳಲ್ಲಿ ಹೆಚ್ಚಾಗಿ ಕಾಣಿಸುತ್ತಿದ್ದ ರೋಗ ಇತ್ತೀಚಿನ ವರ್ಷಗಳಲ್ಲಿ ಯಾವುದೇ ನೂತನ ಪ್ರಕರಣದ ರೂಪದಲ್ಲಿ ಕಾಣದ್ದರಿಂದ ಆರೋಗ್ಯ ಇಲಾಖೆ ಉತ್ತರಕನ್ನಡ ಜಿಲ್ಲೆಯನ್ನು ಆನೆ ಕಾಲು ರೋಗ ಮುಕ್ತ ಜಿಲ್ಲೆಯನ್ನಾಗಿ ಘೋಷಣೆ ಮಾಡಿದೆ.  ಜಿಲ್ಲೆಯ 11 ತಾಲೂಕುಗಳ ಪೈಕಿ ಕರಾವಳಿ ಭಾಗದಲ್ಲಿರುವ 5 ತಾಲೂಕುಗಳಲ್ಲಿ ಅದರಲ್ಲೂ ಗೋಕರ್ಣ ಹಾಗೂ ಭಟ್ಕಳ ಭಾಗದಲ್ಲಿ ಹೆಚ್ಚಾಗಿ ಕಾಣಿಸುತ್ತಿದ್ದ ಪ್ರಕರಣ ಇತ್ತೀಚಿನ ವರ್ಷಗಳಲ್ಲಿ ಯಾವುದೇ ನೂತನ ಪ್ರಕರಣದ ರೂಪದಲ್ಲಿ ಕಾಣಿಸಿಲ್ಲ. 2021ರಲ್ಲಿ ನಡೆಸಲಾದ ಸರ್ವೆಯ ಪ್ರಕಾರ ಉತ್ತರಕನ್ನಡ ಜಿಲ್ಲೆಯಲ್ಲಿ 2017ರಲ್ಲಿ ಕಾಣಿಸಿದ್ದ 173 ಪ್ರಕರಣಗಳು ಮಾತ್ರ ದಾಖಲಾಗಿವೆ ಹೊರತು ಯಾವುದೇ ನೂತನ ಪ್ರಕರಣಗಳು ಆ ಬಳಿಕ ವರದಿಯಾಗಿಲ್ಲ. ಇನ್ನು ಜಿಲ್ಲೆಯ ಕಾರವಾರಲ್ಲಿ 4, ಅಂಕೋಲಾದಲ್ಲಿ 6, ಕುಮಟಾದಲ್ಲಿ 54, ಹೊನ್ನಾವರದಲ್ಲಿ 20, ಭಟ್ಕಳದಲ್ಲಿ 89 ಹಳೇಯ ಪ್ರಕರಣಗಳು ಮಾತ್ರ ಇವೆ ಹೊರತು ಯಾವುದೇ ನೂತನ ಪ್ರಕರಣಗಳು ವರದಿಯಾಗಿಲ್ಲ ಅಂತಾರೆ ಅಧಿಕಾರಿಗಳು. 

ಇನ್ನು ಸೊಳ್ಳೆಯಿಂದ ಹರಡುವ ಆನೆಕಾಲು ರೋಗದಲ್ಲಿ ಗಂಭೀರ ರೂಪವಾದ ಹೈಡ್ರೋಸೀಲ್ ಪ್ರಕರಣಗಳೂ ಕಾಣುತ್ತಿದ್ದು, 2004ರಿಂದ ಇಂತಹ 428 ಪ್ರಕರಣಗಳಿಗೆ ಚಿಕಿತ್ಸೆ ನೀಡಲಾಗಿದೆ. ಪ್ರತೀ ವರ್ಷ ಆನೆಕಾಲು ರೋಗ ಅಥವಾ ಫೈಲೇರಿಯಾ ಕಾಣಿಸುತ್ತಿದ್ದ ಪ್ರದೇಶ ಹಾಗೂ ಕುಟುಂಬಗಳ ರಕ್ತದ ಮಾದರಿಗಳನ್ನು ಪರೀಕ್ಷಿಸುವ ಮೂಲಕ ಸಮೀಕ್ಷೆ ನಡೆಸಲಾಗುತ್ತಿದೆ. ಈ ವರ್ಷ 60,000 ಜನರ‌ನ್ನು ಪರೀಕ್ಷಿಸಿ ಅವರ ರಕ್ತದ ಮಾದರಿಗಳನ್ನು ಪರೀಕ್ಷೆ ಮಾಡೋ ಗುರಿಯನ್ನು‌ ಜಿಲ್ಲಾ ಆರೋಗ್ಯ ಇಲಾಖೆ ಹೊಂದಿದೆ. 

ಈ ಹಿನ್ನೆಲೆ ಪ್ರತೀ ತಿಂಗಳು 6,000 ರಕ್ತದ ಮಾದರಿಗಳನ್ನು ಪರೀಕ್ಷಿಸಿ ಹೊಸ ಪ್ರಕರಣಗಳು ಕಂಡುಬಂದಲ್ಲಿ ಕೂಡಲೇ ಸೂಕ್ತ ಕ್ರಮ ಕೈಗೊಳ್ಳುವ ವ್ಯವಸ್ಥೆ ಮಾಡಲಾಗುತ್ತಿದೆ. ಈಗಾಗಲೇ ಕರಾವಳಿ ತೀರ ಪ್ರದೇಶಗಳಲ್ಲಿ ಎಲ್ಲೆಲ್ಲಿ ಈ ಸೋಂಕು ಹಬ್ಬುತ್ತದೆ ಎಂದು ಗುರುತು ಮಾಡಲಾಗಿದ್ದು, ಆ ಪ್ರದೇಶದಲ್ಲಿ ರಾತ್ರಿ ವೇಳೆ ರಕ್ತ ನಡೆಸಿದ ರಕ್ತ ಪರೀಕ್ಷೆಯಲ್ಲಿ ಮಾತ್ರ ಕ್ರಿಮಿ ಕಾಣೋದ್ರಿಂದ ತಪಾಸಣೆಗೂ ಸೂಕ್ತ ವ್ಯವಸ್ಥೆ ಮಾಡಲಾಗಿದೆ ಎಂದು ಆರೋಗ್ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

48:52ಕನ್ನಡಪ್ರಭ & ಸುವರ್ಣನ್ಯೂಸ್‌ನಿಂದ ಅಸಾಮಾನ್ಯ ಕನ್ನಡಿಗರಿಗೆ ಗೌರವ: 'ಆಯುರ್ ಭೂಷಣ' ಪ್ರಶಸ್ತಿ ಪ್ರದಾನ
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
06:25ಶಿವಮೊಗ್ಗದಲ್ಲಿ ಮತಾಂಧರ ಹಾವಳಿ, ಹಿಂದೂ ಎಂದವನ ಮೇಲೆ ಹಲ್ಲೆ
23:02FIR: ಡಾ. ಮಹೇಂದ್ರ: ಸ್ಪೆಷಲಿಸ್ಟ್ ಇನ್ ಲವ್ & ಮರ್ಡರ್!
08:12ಸಂಧ್ಯಾ ಸುರಕ್ಷಾ ಯೋಜನೆಗೆ ಕನ್ನ; 45-50 ವರ್ಷದ ಅನರ್ಹರಿಗೂ ಪಿಂಚಣಿ ಕೊಟ್ಟು ಕೋಟಿಗಟ್ಟಲೇ ಗೋಲ್‌ಮಾಲ್!
19:15ಸಹೋದರರ ಚಕ್ರವ್ಯೂಹ: ಜಾರಕಿಹೊಳಿ ಬ್ರದರ್ಸ್​ ಏಟಿಗೆ ಬೆಂಡಾದ ‘ಕತ್ತಿ’! ಏನಿದು ಸಾಹುಕಾರ್ ಸೂತ್ರ!
04:51ದಸರಾ ವೈದ್ಯರ ಎಡವಟ್ಟಿಗೆ ಗಜರಾಜನ ಜೀವಕ್ಕೆ ಆಪತ್ತು; ಸಕ್ರೆಬೈಲು ಬಾಲಣ್ಣನ ಮೌನರೋಧನೆ!
Read more