ಆನೆಕಾಲು ರೋಗದಿಂದ ಉತ್ತರ ಕನ್ನಡ ಮುಕ್ತ, 2017 ರ ನಂತರ ನೂತನ ಪ್ರಕರಣಗಳಿಲ್ಲ..!

ಆನೆಕಾಲು ರೋಗದಿಂದ ಉತ್ತರ ಕನ್ನಡ ಮುಕ್ತ, 2017 ರ ನಂತರ ನೂತನ ಪ್ರಕರಣಗಳಿಲ್ಲ..!

Published : May 04, 2022, 10:57 AM IST

ರಾಜ್ಯದ ಹೆಚ್ಚಿನ ಜಿಲ್ಲೆಗಳಲ್ಲಿ ಜನರನ್ನು ಕಾಡುತ್ತಿದ್ದ ಆನೆಕಾಲು ರೋಗ ಇದೀಗ ಕೊಂಚ ಕೊಂಚವೇ ನಿರ್ಮೂಲನೆಯಾಗುತ್ತಿದೆ. ದಕ್ಷಿಣಕನ್ನಡ ಜಿಲ್ಲೆ, ಉಡುಪಿ ಜಿಲ್ಲೆಯ ಬಳಿಕ ಇದೀಗ ಉತ್ತರಕ‌ನ್ನಡ ಜಿಲ್ಲೆಯೂ ಆನೆ ಕಾಲು ರೋಗದಿಂದ ಮುಕ್ತವಾಗಿದೆ. 
 

ರಾಜ್ಯದ ಹೆಚ್ಚಿನ ಜಿಲ್ಲೆಗಳಲ್ಲಿ ಜನರನ್ನು ಕಾಡುತ್ತಿದ್ದ ಆನೆಕಾಲು ರೋಗ ಇದೀಗ ಕೊಂಚ ಕೊಂಚವೇ ನಿರ್ಮೂಲನೆಯಾಗುತ್ತಿದೆ. ದಕ್ಷಿಣಕನ್ನಡ ಜಿಲ್ಲೆ, ಉಡುಪಿ ಜಿಲ್ಲೆಯ ಬಳಿಕ ಇದೀಗ ಉತ್ತರಕ‌ನ್ನಡ ಜಿಲ್ಲೆಯೂ ಆನೆ ಕಾಲು ರೋಗದಿಂದ ಮುಕ್ತವಾಗಿದೆ. 

ಜಿಲ್ಲೆಯ 11 ತಾಲೂಕುಗಳ ಪೈಕಿ ಕರಾವಳಿ ಭಾಗದಲ್ಲಿರುವ 5 ತಾಲೂಕುಗಳಲ್ಲಿ ಹೆಚ್ಚಾಗಿ ಕಾಣಿಸುತ್ತಿದ್ದ ರೋಗ ಇತ್ತೀಚಿನ ವರ್ಷಗಳಲ್ಲಿ ಯಾವುದೇ ನೂತನ ಪ್ರಕರಣದ ರೂಪದಲ್ಲಿ ಕಾಣದ್ದರಿಂದ ಆರೋಗ್ಯ ಇಲಾಖೆ ಉತ್ತರಕನ್ನಡ ಜಿಲ್ಲೆಯನ್ನು ಆನೆ ಕಾಲು ರೋಗ ಮುಕ್ತ ಜಿಲ್ಲೆಯನ್ನಾಗಿ ಘೋಷಣೆ ಮಾಡಿದೆ.  ಜಿಲ್ಲೆಯ 11 ತಾಲೂಕುಗಳ ಪೈಕಿ ಕರಾವಳಿ ಭಾಗದಲ್ಲಿರುವ 5 ತಾಲೂಕುಗಳಲ್ಲಿ ಅದರಲ್ಲೂ ಗೋಕರ್ಣ ಹಾಗೂ ಭಟ್ಕಳ ಭಾಗದಲ್ಲಿ ಹೆಚ್ಚಾಗಿ ಕಾಣಿಸುತ್ತಿದ್ದ ಪ್ರಕರಣ ಇತ್ತೀಚಿನ ವರ್ಷಗಳಲ್ಲಿ ಯಾವುದೇ ನೂತನ ಪ್ರಕರಣದ ರೂಪದಲ್ಲಿ ಕಾಣಿಸಿಲ್ಲ. 2021ರಲ್ಲಿ ನಡೆಸಲಾದ ಸರ್ವೆಯ ಪ್ರಕಾರ ಉತ್ತರಕನ್ನಡ ಜಿಲ್ಲೆಯಲ್ಲಿ 2017ರಲ್ಲಿ ಕಾಣಿಸಿದ್ದ 173 ಪ್ರಕರಣಗಳು ಮಾತ್ರ ದಾಖಲಾಗಿವೆ ಹೊರತು ಯಾವುದೇ ನೂತನ ಪ್ರಕರಣಗಳು ಆ ಬಳಿಕ ವರದಿಯಾಗಿಲ್ಲ. ಇನ್ನು ಜಿಲ್ಲೆಯ ಕಾರವಾರಲ್ಲಿ 4, ಅಂಕೋಲಾದಲ್ಲಿ 6, ಕುಮಟಾದಲ್ಲಿ 54, ಹೊನ್ನಾವರದಲ್ಲಿ 20, ಭಟ್ಕಳದಲ್ಲಿ 89 ಹಳೇಯ ಪ್ರಕರಣಗಳು ಮಾತ್ರ ಇವೆ ಹೊರತು ಯಾವುದೇ ನೂತನ ಪ್ರಕರಣಗಳು ವರದಿಯಾಗಿಲ್ಲ ಅಂತಾರೆ ಅಧಿಕಾರಿಗಳು. 

ಇನ್ನು ಸೊಳ್ಳೆಯಿಂದ ಹರಡುವ ಆನೆಕಾಲು ರೋಗದಲ್ಲಿ ಗಂಭೀರ ರೂಪವಾದ ಹೈಡ್ರೋಸೀಲ್ ಪ್ರಕರಣಗಳೂ ಕಾಣುತ್ತಿದ್ದು, 2004ರಿಂದ ಇಂತಹ 428 ಪ್ರಕರಣಗಳಿಗೆ ಚಿಕಿತ್ಸೆ ನೀಡಲಾಗಿದೆ. ಪ್ರತೀ ವರ್ಷ ಆನೆಕಾಲು ರೋಗ ಅಥವಾ ಫೈಲೇರಿಯಾ ಕಾಣಿಸುತ್ತಿದ್ದ ಪ್ರದೇಶ ಹಾಗೂ ಕುಟುಂಬಗಳ ರಕ್ತದ ಮಾದರಿಗಳನ್ನು ಪರೀಕ್ಷಿಸುವ ಮೂಲಕ ಸಮೀಕ್ಷೆ ನಡೆಸಲಾಗುತ್ತಿದೆ. ಈ ವರ್ಷ 60,000 ಜನರ‌ನ್ನು ಪರೀಕ್ಷಿಸಿ ಅವರ ರಕ್ತದ ಮಾದರಿಗಳನ್ನು ಪರೀಕ್ಷೆ ಮಾಡೋ ಗುರಿಯನ್ನು‌ ಜಿಲ್ಲಾ ಆರೋಗ್ಯ ಇಲಾಖೆ ಹೊಂದಿದೆ. 

ಈ ಹಿನ್ನೆಲೆ ಪ್ರತೀ ತಿಂಗಳು 6,000 ರಕ್ತದ ಮಾದರಿಗಳನ್ನು ಪರೀಕ್ಷಿಸಿ ಹೊಸ ಪ್ರಕರಣಗಳು ಕಂಡುಬಂದಲ್ಲಿ ಕೂಡಲೇ ಸೂಕ್ತ ಕ್ರಮ ಕೈಗೊಳ್ಳುವ ವ್ಯವಸ್ಥೆ ಮಾಡಲಾಗುತ್ತಿದೆ. ಈಗಾಗಲೇ ಕರಾವಳಿ ತೀರ ಪ್ರದೇಶಗಳಲ್ಲಿ ಎಲ್ಲೆಲ್ಲಿ ಈ ಸೋಂಕು ಹಬ್ಬುತ್ತದೆ ಎಂದು ಗುರುತು ಮಾಡಲಾಗಿದ್ದು, ಆ ಪ್ರದೇಶದಲ್ಲಿ ರಾತ್ರಿ ವೇಳೆ ರಕ್ತ ನಡೆಸಿದ ರಕ್ತ ಪರೀಕ್ಷೆಯಲ್ಲಿ ಮಾತ್ರ ಕ್ರಿಮಿ ಕಾಣೋದ್ರಿಂದ ತಪಾಸಣೆಗೂ ಸೂಕ್ತ ವ್ಯವಸ್ಥೆ ಮಾಡಲಾಗಿದೆ ಎಂದು ಆರೋಗ್ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

56:36ಸುವರ್ಣ ನ್ಯೂಸ್, ಕನ್ನಡ ಪ್ರಭ ವನ್ಯಜೀವಿ ಸಂರಕ್ಷಣಾ ಅಭಿಯಾನ: ಹಂಪಿಯ ಬೆಟ್ಟಗಳಲ್ಲಿ ಅಡಗಿದೆ ವನ್ಯಜೀವಿ ರಹಸ್ಯ
24:19ಮತ್ತೆ ಸಂಕಷ್ಟಕ್ಕೆ ಸಿಲುಕಿದ ದಾಸ, ಅಭಿಮಾನಿಗಳೇ ತಂದಿಟ್ಟ ಹೊಸ ಆಪತ್ತು! ದರ್ಶನ್​ ಕೇಸ್​​​​ ಕೈ ಇಟ್ಟಲೆಲ್ಲಾ ಕರೆಂಟು!
22:23ಆ 3 ನಿಮಿಷ..! ಬೆಂಗಳೂರಿನ ತ್ರಿವಳಿ ಮರ್ಡರ್ ಹಿಂದಿನ ಭಯಾನಕ ಸತ್ಯ: ಅಮ್ಮನ ರಕ್ತ ಒರೆಸುವಾಗಲೇ ಬಂದೇಬಿಟ್ಟ ಅಪ್ಪ!
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
24:02ಬೆಂಗಳೂರು ಮರ್ಡರ್​​ ಡೇ..! ಒಂದೇ ದಿನ 7 ಜನರ ಕೊಲೆ..! ಕುಟುಂಬ ಮತ್ತು ರಕ್ತ ಸಂಬಂಧಕ್ಕೆ ಬೆಲೆಯೇ ಇಲ್ವಾ..?
23:26Mysuru Marriage home Tragedy: ಮದುವೆ ಮನೆಯಲ್ಲಿ ಮೂರು ಚಟ್ಟ, ರಾಕ್ಷಸ ಉಲ್ಲಾಸ್ ಗೌಡನ ಕ್ರೌರ್ಯದ ಕಥೆ!
23:26FIR video: ಭೀಮಾತೀರದ ಹಂತಕ ಅಪ್ಪುಗೌಡ ಇಬ್ಬರ ಹತ್ಯೆಗೆ ಸ್ಕೆಚ್ ಹಾಕಿದ್ದ; ಆದ್ರೆ 6 ಜನರ ಕೊಲೆ ಮಾಡಿದ್ದೇಕೆ ಹಂತಕರು?
23:22ಕೇರಳದಿಂದ ಬಂದಿತ್ತು 20 ಲಕ್ಷ, ಪೊಲೀಸರಿಗೆ ಸಿಕ್ಕಿತ್ತು ಸುಳಿವು! ಖೆಡ್ಡಾಗೆ ಬಿದ್ದಿದ್ಹೇಗೆ 'ಖಾಕಿ' ಗ್ಯಾಂಗ್?
24:322 ಕೋಟಿ ವಿಮೆ ಹಣಕ್ಕಾಗಿ ನಿವೃತ್ತ ಯೋಧನ ಕೊಲೆ: ಪೋಸ್ಟ್ ಮಾರ್ಟಮ್ ರಿಪೋರ್ಟ್ ತಿರುಚಿ ಸಿಕ್ಕಿಬಿದ್ದ ಹೆಂಡತಿ!
20:37ಆಪರೇಷನ್ ಗೃಹಲಕ್ಷ್ಮೀ: ಸತ್ತವರ ಖಾತೆಗೆ ಹಣ! 4 ಲಕ್ಷ ಅನರ್ಹರ ಮೇಲೆ ಸರ್ಕಾರದ ಬಿಗ್ ಆ್ಯಕ್ಷನ್
Read more